Advertisement

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ

02:40 PM Sep 16, 2024 | Team Udayavani |

ಹುಬ್ಬಳ್ಳಿ: ನಗರದ ಹಳೆಯ ಕೋರ್ಟ್ ವೃತ್ತದಲ್ಲಿ ಮೇಲ್ಸೇತುವೆ ಕಾಮಗಾರಿ ವೇಳೆ ಕಬ್ಬಿಣದ ರಾಡ್ ಬಿದ್ದು ಮೃತಪಟ್ಟ ಎಎಸ್‌ಐ ಪ್ರಕರಣಕ್ಕೆ ಸಂಬಂಧಿಸಿ ಉಪನಗರ ಪೊಲೀಸರು ಗುತ್ತಿಗೆ ಕಂಪನಿಯ 11 ಜನರನ್ನು ಬಂಧಿಸಿದ್ದಾರೆ.

Advertisement

ಝಂಡು ಕನ್‌ಸ್ಟ್ರಕ್ಷನ್ ಕಂಪನಿಯ ನೌಕರರಾದ ಸುಪರ್‌ವೈ‌ಜರ್ ಹರ್ಷಾ ಹೊಸಗಾಣಿಗೇರ, ಲೈಜನಿಂಗ್ ಇಂಜಿನಿಯರ್ ಜಿತೇಂದ್ರಪಾಲ ಶರ್ಮಾ, ಇಂಜಿನಿಯರ್ ಭೂಪೇಂದರ ಪಾಲ್, ಕ್ರೇನ್ ಚಾಲಕ ಅಸ್ಲಂ ಅಲಿ, ನೌಕರರಾದ ಮೊಹಮ್ಮದ ಇಮಾದರೂ, ಮೊಹಮ್ಮದ ಮಸೂದರ ರೆಹಮಾನ, ಸಬೀಬ ಶೇಖ, ರಿಜಾವುಲ್ ಹಕ್, ಶಮೀಮ ಶೇಖ, ಮೊಹಮ್ಮದ ಆರೀಫ, ಲೇಬರ್ ಕಾಂಟ್ರಾಕ್ಟರ್ ಮೊಹಮ್ಮದ ರಬಿವುಲ್ ಹಕ್ ಬಂಧಿತರಾಗಿದ್ದಾರೆ. ಈ ಅವಘಡಕ್ಕೆ ಸಂಬಂಧಿಸಿ ಇನ್ನೂ ಕೆಲವರನ್ನು ಪೊಲೀಸರು ವಶಕ್ಕೆ ಪಡೆಯುವುದು ಬಾಕಿ ಇದೆ.

ಸೆ. 10ರಂದು ಕರ್ತವ್ಯಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಉಪನಗರ ಠಾಣೆ ಎಎಸ್‌ಐ, ಧಾರವಾಡ ಸತ್ತೂರಿನ ರಾರಾಜಿನಗರ ನಿವಾಸಿ ನಾಬಿರಾಜ ಜಯಪಾಲ ದಯಣ್ಣವರ (59) ಅವರ ತಲೆಯ ಮೇಲೆ ಕಬ್ಬಿಣದ ರಾಡ್‌ ಬಿದ್ದು ತೀವ್ರ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ರವಿವಾರ ಬೆಳಗಿನ ಜಾವ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಗುತ್ತಿಗೆ ಕಂಪನಿಯ ನೌಕರರು ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇದ್ದುದರಿಂದ ಸೇತುವೆ ಮೇಲೆ ಕಬ್ಬಿಣದ ಬಾರ್‌ ಗಳನ್ನು ಸಾಗಿಸುತ್ತಿದ್ದಾಗ ನೌಕರರ ನಿರ್ಲಕ್ಷ್ಯದಿಂದ ಕಬ್ಬಿಣದ ಬಾರ್ ಎಎಸ್ಐ ಅವರ ತಲೆಯ ಮೇಲೆ ಬಿದ್ದು, ಅವರ ಹೆಲ್ಮೆಟ್ ಒಡೆದು ತಲೆಗೆ ಬಲವಾದ ಗಾಯವಾಗಿತ್ತು.

ಈ ಅವಘಡಕ್ಕೆ ಸಂಬಂಧಿಸಿ ಕಾಮಗಾರಿಯ ಗುತ್ತಿಗೆದಾರ ಝಂಡು ಕನ್‌ಸ್ಟ್ರಕ್ಷನ್ ಕಂಪನಿಯ ಎಂಡಿ ಸೇರಿದಂತೆ 19ಕ್ಕೂ ಹೆಚ್ಚು ಜನರ ವಿರುದ್ಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next