Advertisement

ದ್ವಿಭಾಷಾ ಶಿಕ್ಷಣ ಪದ್ದತಿಗೆ ಹೆಚ್ಚಿದ ಬೇಡಿಕೆ

05:50 PM Sep 05, 2021 | Team Udayavani |

ಹುಬ್ಬಳ್ಳಿ: ಗ್ರಾಮೀಣ, ಬಡ ಮಕ್ಕಳಿಗೆ ಆಂಗ್ಲಮಾಧ್ಯಮ ಶಿಕ್ಷಣ, ಇದರೊಂದಿಗೆ ಕನ್ನಡ ಶಾಲೆಗಳನ್ನುಉಳಿಸಬೇಕೆನ್ನುವ ಸರಕಾರದ ದ್ವಿಭಾಷಾ ಶಿಕ್ಷಣಪದ್ಧತಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.ಕೋವಿಡ್‌ನಿಂದ ಕಳೆದ ವರ್ಷ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಒಂದನೇ ತರಗತಿ ಆರಂಭಿಸಲು ಸಾಧ್ಯವಾಗಿರಲಿಲ್ಲ.

Advertisement

ಆದರೆ ಈ ವರ್ಷ ಅನುಮತಿ ನೀಡಿದ ಎಲ್ಲಾ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಲು ಶಿಕ್ಷಣಇಲಾಖೆ ಮುಂದಾಗಿದ್ದು, ಪ್ರವೇಶಾತಿಗಾಗಿ ಸರಕಾರಿಶಾಲೆಗಳಿಗೂ ಮುಗಿಬೀಳುವಂತಾಗಿದೆ.ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಮಕ್ಕಳಪಾಲಕರು ಡೊನೇಶನ್‌, ಶುಲ್ಕ, ಸಮವಸ್ತ್ರ, ಪುಸ್ತಕ,ವಾಹನ ಹೀಗೆ ಹತ್ತಾರು ನಾನಾ ಶುಲ್ಕ ಪಾವತಿಸಿಖಾಸಗಿಶಾಲೆಯ ಶಿಕ್ಷಣ ಕೊಡಿಸುವುದು ಕಷ್ಟ.

ಹೀಗಾಗಿ ಎಲ್ಲಾಸೌಲಭ್ಯಗಳನ್ನುಉಚಿತವಾಗಿಕಲ್ಪಿಸಿಸರಕಾರ2019-20ಹಾಗೂ 2020-21 ನೇ ಸಾಲಿನಿಂದ ಕನ್ನಡ ಹಾಗೂಉರ್ದು ಮಾಧ್ಯಮ ಶಾಲೆಗಳಲ್ಲಿ ದ್ವಿಭಾಷ ಶಿಕ್ಷಣಪದ್ಧತಿ ಜಾರಿಗೊಳಿಸಿತ್ತು. ಹೀಗಾಗಿ 2019-20ರಿಂದಇಲ್ಲಿಯವರೆಗೆ ಜಿಲ್ಲೆಯಲ್ಲಿ 65 ಶಾಲೆಗಳಲ್ಲಿ ದ್ವಿಭಾಷಾಶಿಕ್ಷಣ ಪದ್ಧತಿ ಆರಂಭಿಸಿದೆ. ಸರಕಾರಿ ಕನ್ನಡ ಮಾಧ್ಯಮಶಾಲೆಗಳು ಎಂದು ತಿರಸ್ಕರಿಸಿ ಖಾಸಗಿ ಶಾಲೆಗಳತ್ತ ಹೊರಟವರು ಇದೀಗ ಸರಕಾರಿ ಶಾಲೆಗಳಲ್ಲಿ ಪ್ರವೇಶಪಡೆಯಲುಮುಂದಾಗುತ್ತಿದ್ದು,ಬಹುತೇಕ ಶಾಲೆಗಳಲ್ಲಿಪ್ರವೇಶಾತಿ ಪೂರ್ಣಗೊಂಡಿವೆ.ಆರಂಭಕ್ಕೆ ಕಸರತ್ತು: ಗ್ರಾಮೀಣ ಪ್ರದೇಶ ಹಾಗೂ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಅನುಕೂಲಕರ ವಾತಾವರಣ ಇರುವ ಶಾಲೆಗಳನ್ನು ಗುರುತಿಸಿ2019-20ನೇ ಸಾಲಿನಲ್ಲಿ 28 ಕನ್ನಡ ಹಾಗೂ ಉರ್ದುಶಾಲೆಗಳಲ್ಲಿ 1ರಿಂದ ಆಂಗ್ಲ ಮಾಧ್ಯಮ ತರಗತಿಗಳು ಆರಂಭವಾದವು.

ಇದನ್ನೂ ಓದಿ:ಗುರು ಗ್ರಾಮವೆಂಬ ಖ್ಯಾತಿ ಪಡೆದ ರೊಟ್ಟಿಗವಾಡ

2020-21ರಲ್ಲಿ 11ಕನ್ನಡ, 19ಉರ್ದು ಮಾಧ್ಯಮ ಶಾಲೆಗಳಲ್ಲಿ ಆರಂಭಕ್ಕೆ ಅನುಮತಿನೀಡಲಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಕಳೆದವರ್ಷ ತರಗತಿ ಆರಂಭಿಸಲು ಸಾಧ್ಯವಾಗಿರಲಿಲ್ಲ.2021-22 ನೇ ಸಾಲಿನಲ್ಲಿ7ಶಾಲೆಗಳಿಗೆ ಅನುಮತಿನೀಡಲಾಗಿದೆ. ಈ ಬಾರಿ 6-8 ನೇ ತರಗತಿ ಆರಂಭದನಂತರ 1-5 ತರಗತಿ ಆರಂಭಿಸಲು ಚಿಂತನೆನಡೆದಿರುವ ಕಾರಣ ಅನುಮತಿ ನೀಡಿರುವ ಎಲ್ಲಾಶಾಲೆಗಳಲ್ಲೂ ಆಂಗ್ಲ ಮಾಧ್ಯಮ ತರಗತಿಗಳನ್ನು ಈವರ್ಷ ಶಿಕ್ಷಣ ಇಲಾಖೆ ಮುಂದಾಗಿದೆ.

Advertisement

ಹೆಚ್ಚಿದ ಬೇಡಿಕೆ: ಆಂಗ್ಲ ಮಾಧ್ಯಮ ತರಗತಿ ಆರಂಭಕ್ಕೆಕೊಠಡಿ, ಶಿಕ್ಷಕರು ಹೀಗೆ ಹಲವು ಅಂಶಗಳಮೇಲೆ ಹು-ಧಾ ವ್ಯಾಪ್ತಿಯಲ್ಲಿ 16 ಹಾಗೂ 12ಶಾಲೆಗಳನ್ನು ತಾಲೂಕುಗಳ ಗ್ರಾಮೀಣ ಶಾಲೆಗಳನ್ನುಆಯ್ಕೆ ಮಾಡಲಾಗಿತ್ತು. ಮೊದಲ ವರ್ಷವೇ28 ಶಾಲೆಗಳಲ್ಲಿ 840 ವಿದ್ಯಾರ್ಥಿಗಳು ಪ್ರವೇಶಪಡೆದಿದ್ದಾರೆ.

ಈ ವರ್ಷವೂ ಕೂಡ ಕನ್ನಡ ಮಾಧ್ಯಮಶಾಲೆಗಳಲ್ಲಿ ದಾಖಲಾತಿಗೆ ಬೇಡಿಕೆಯುಂಟಾಗಿದೆ.ಹೆಬ್ಬಳ್ಳಿ, ಉಣಕಲ್ಲ, ಎಲಿವಾಳ, ರಾಯನಾಳ,ಆನಂದನಗರ ಸೇರಿದಂತೆ ಬಹುತೇಕ ಕಡೆಗ ಎರಡುವಿಭಾಗಗಳಿಗೆ ಬೇಕಾಗುವಷ್ಟು ವಿದ್ಯಾರ್ಥಿಗಳುಪ್ರವೇಶ ಪಡೆಯುತ್ತಿದ್ದಾರೆ. ಇದರೊಂದಿಗೆ ಇತರೆಶಾಲೆಗಳಿಂದಲೂ ಬೇಡಿಕೆ ಹೆಚ್ಚಾಗುತ್ತಿದ್ದು, ಈಕುರಿತು ಶಿಕ್ಷಣ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆಸಲ್ಲಿಸಲಾಗಿದೆ. ಆದರೆ ಬೇಡಿಕೆ ತಕ್ಕಂತೆ ಅನುಮತಿನೀಡುವ ಕಾರ್ಯ ಸರಕಾರದಿಂದ ಅಗುತ್ತಿಲ್ಲ.ಇತರೆಡೆಗೆ ವರ್ಗಾವಣೆ: 2019-20 ರಲ್ಲಿಆರಂಭವಾದ ಉರ್ದು ಮಾಧ್ಯಮ ಶಾಲೆಗಳಲ್ಲಿಉತ್ತಮ ಸ್ಪಂದನೆಯಿದೆ.

ಅಂತಹ ಕೆಲ ಶಾಲೆಗಳಲ್ಲಿಇನ್ನೊಂದು ವಿಭಾಗ ಆರಂಭಕ್ಕೆ ಬೇಡಿಕೆಯಿದೆ.ಆದರೆ 2020-21 ರಲ್ಲಿ ಗುರುತಿಸಿದ 18 ಶಾಲೆಗಳಲ್ಲಿಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅಷ್ಟೊಂದು ಆಸಕ್ತಿತೋರಿದಂತೆ ಕಾಣುತ್ತಿಲ್ಲ. 6 ಶಾಲೆಯಲ್ಲಿ ಓರ್ವವಿದ್ಯಾರ್ಥಿಯೂ ಪ್ರವೇಶ ಪಡೆದಿಲ್ಲ. 2 ಶಾಲೆಗಳಲ್ಲಿಕ್ರಮವಾಗಿ 3, 4 ವಿದ್ಯಾರ್ಥಿಗಳಿದ್ದರೆ2ಶಾಲೆಗಳಲ್ಲಿ 15ವಿದ್ಯಾರ್ಥಿಗಳನ್ನು ದಾಟಿಲ್ಲ. ಹೀಗಾಗಿಈಶಾಲೆಗಳಿಗೆನೀಡಿದ ಅನುಮತಿಯನ್ನು ಅಗತ್ಯವಿರುವ ಶಾಲೆಗೆವರ್ಗಾಯಿಸಲಾಗಿದೆ.

ಸಕಾಲಕ್ಕೆ ಅನುಮತಿ ಅಗತ್ಯ: ಸರಕಾರಿ ಕನ್ನಡಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸಿ ದಾಖಲಾತಿಪ್ರಮಾಣ ಹೆಚ್ಚಿಸುವುದು, ಇದರೊಂದಿಗೆ ಪ್ರಾಥಮಿಕಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣದ ಕಸರತ್ತುಜಿಲ್ಲೆಯಲ್ಲಿ ಕೈಗೂಡಿದೆ. ಸರಕಾರದ ಮೂಲ ಉದ್ದೇಶಈಡೇರಬೇಕಾದರ ಆದರೆ ಬೇಡಿಕೆಯಿರುವಶಾಲೆಗಳಿಗೆ ವಿಭಾಗಹೆಚ್ಚಿಸಲುಅನುಮತಿ,ಹೊಸದಾಗಿಶಾಲೆಗಳಿಗೆ ಅನುಮತಿ ನೀಡುವ ಕೆಲಸ ಸರಕಾರದಿಂದಸಕಾಲಕ್ಕೆ ದೊರೆಯುತ್ತಿಲ್ಲ. ಈ ವರ್ಷ 7 ಶಾಲೆಗಳಿಗೆಅನುಮತಿ ನೀಡಿದ್ದು ಆಗಸ್ಟ್‌ ತಿಂಗಳಲ್ಲಿ. ಮುಂದಿನವರ್ಷದಿಂದಾದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇಅನುಮತಿ ನೀಡುವ ಕೆಲಸ ಸರಕಾರದಿಂದಆಗಬೇಕಿದೆ.

ಹೇಮರಡ್ಡಿ ಸೈದಾಪು

Advertisement

Udayavani is now on Telegram. Click here to join our channel and stay updated with the latest news.

Next