Advertisement

ರಾಷ್ಟ್ರೀಯ ಮದ್ರಸ ಮಂಡಳಿ ರಚನೆಗೆ ಕೇಂದ್ರ ಸರಕಾರ ಚಿಂತನೆ

05:07 PM Sep 10, 2018 | Team Udayavani |

ಹೊಸದಿಲ್ಲಿ : ದೇಶದಲ್ಲಿನ ಅನಧಿಕೃತ ಮದ್ರಸಗಳ ವಿವರಗಳನ್ನು ಕಲೆ ಹಾಕಲು ಮತ್ತು ರಾಷ್ಟ್ರ ಮಟ್ಟದ ಮದ್ರಸ ಮಂಡಳಿಯನ್ನು ಸ್ಥಾಪಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಅಲ್ಪಸಂಖ್ಯಾಕ ಶಿಕ್ಷಣ ವಿಚಕ್ಷಣ ಸಮಿತಿಯು (ಎನ್‌ಸಿಎಂಇ) ಗಂಭೀರ ಚಿಂತನೆ ನಡೆಸಿದೆ.

Advertisement

ಎನ್‌ಸಿಎಂಇ ಸದಸ್ಯರಾಗಿರುವ ಅಫ್ಜರ್‌ ಶಮ್‌ಸೀ ಅವರು ದೇಶದಲ್ಲಿ ನೋಂದಾವಣೆಯಾಗದಿರುವ ಮತ್ತು ಅನಧಿಕೃತವಾಗಿ ಕಾರ್ಯವೆಸಗುತ್ತಿರುವ ಮದ್ರಸಗಳ ವಿವರಗಳನ್ನು ಕಲೆ ಹಾಕುವುದು ಮತ್ತು ಮದ್ರಸಗಳಲ್ಲಿನ ಶಿಕ್ಷಣದ ಗುಣಮಟ್ಟವನ್ನು  ಅವಲೋಕಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. 

ದೇಶದಲ್ಲಿರುವ ಮದ್ರಸಗಳ ಪೈಕಿ ಶೇ.20 ನೋಂದಾವಣೆಗೊಂಡಿವೆಯಾದರೂ ಉಳಿದ ಶೇ.80ರಷ್ಟು ಮದ್ರಸಗಳು ನೋಂದಾವಣೆಗೊಳ್ಳದೆ ಅನಧಿಕೃತವಾಗಿ ಕಾರ್ಯವೆಸಗುತ್ತಿವೆ; ಇವುಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಕಲೆ ಹಾಕುವ ಅಗತ್ಯವಿದೆ ಎಂದು ಶಮ್‌ಸೀ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next