Advertisement

ವಿಷಜಂತು ಕಡಿತ ಪ್ರಾಣಿಗಳಿಗೆ ಚಿಕಿತ್ಸೆ ಹೇಗೆ?

02:31 AM Jul 09, 2019 | sudhir |

ಕೋಟ: ನಾಯಿ ಮುಂತಾದ ಪ್ರಾಣಿಗಳು ವಿಷಜಂತುಗಳ ಕಡಿತಕ್ಕೊಳಗಾದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಅರಿವು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಕಡಿತಕ್ಕೊಳಗಾದ ಪ್ರಾಣಿ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಸೂಕ್ತ ಚಿಕಿತ್ಸೆ ನೀಡಿದರೆ ಅವುಗಳನ್ನು ಬದುಕಿಸಬಹುದಾಗಿದೆ. ಇದೇ ರೀತಿ ವಿಷಕಾರಿ ಕಂದಡಿ ಹಾವಿನೊಂದಿಗೆ ಹೋರಾಡಿ ಗಾಯಗೊಂಡು ಸಾವಿನಂಚಿನಲ್ಲಿದ್ದ ನಾಯಿಯೊಂದಕ್ಕೆ ಕೋಟ ಗೋ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಿ ರವಿವಾರ ಬದುಕಿಸಲಾಯಿತು.

Advertisement

ಕೃಷಿಕರಾದ ಕೋಟೇಶ್ವರ ಕಾಳಾವರ ನಿವಾಸಿ ಉದಯ ಶೆಟ್ಟಿಯವರ ಮನೆ ಬಾಗಿಲಿಗೆ ಬಂದ ಕಂದಡಿ ಹಾವಿನೊಂದಿಗೆ ಅವರ ಮನೆಯ ನಾಯಿ ಸೆಣಸಾಡಿ ತೀವ್ರ ಗಾಯಗೊಂಡಿತ್ತು.

ತತ್‌ಕ್ಷಣ ಎಚ್ಚೆತ್ತ ಉದಯ ಶೆಟ್ಟಿಯವರು ಕೋಟ ಗೋ ಆಸ್ಪತ್ರೆಗೆ ನಾಯಿಯನ್ನು ಕರೆತಂದರು. ಇಲ್ಲಿನ ಪಶುವೈದ್ಯ ಡಾ| ಅರುಣ್‌ ಕುಮಾರ್‌ ಶೆಟ್ಟಿಯವರು ಸೂಕ್ತ ಚಿಕಿತ್ಸೆ ನೀಡಿ ನಾಯಿಯನ್ನು ಬದುಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next