Advertisement

ಏಕಚಕ್ರಾಧಿಪತ್ಯದ ರಾಜ್ಯಭಾರ ಎಷ್ಟು ದಿನ?

10:43 PM Aug 03, 2019 | Lakshmi GovindaRaj |

ಬೆಂಗಳೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 8 ದಿನ ಆಗಿದೆ. ಇನ್ನೂ ಮಂತ್ರಿಮಂಡಲ ರಚನೆಯಾಗಿಲ್ಲ. ರಚಿಸುವ ಸಾಧ್ಯತೆಯೂ ಕಾಣಿಸುತ್ತಿಲ್ಲ. ಬಿ.ಎಸ್‌.ಯಡಿಯೂರಪ್ಪನವರು ಏಕಚಕ್ರಾಧಿಪತ್ಯದ ರಾಜ್ಯಭಾರವನ್ನು ಇನ್ನಷ್ಟು ದಿನ ನಡೆಸುವ ಮೂಡಲ್ಲಿ ಇದ್ದ ಹಾಗೆ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

Advertisement

ರಾಜ್ಯದಲ್ಲಿ ಆಡಳಿತ ಪ್ರಾರಂಭವೇ ಆಗಿಲ್ಲ. ರಾಜ್ಯದ ಜನತೆ ಇನ್ನೂ ಎಷ್ಟು ದಿನ ಏಕಚಕ್ರಾಧಿಪತ್ಯದ ಅಧಿಕಾರ ನೋಡಬೇಕು ಎಂದು ಟ್ವೀಟ್‌ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್‌ ಕೂಡ ಸಂಪುಟ ವಿಸ್ತರಣೆ ಮಾಡದಿರುವ ಬಗ್ಗೆ ಟ್ವೀಟ್‌ ಮಾಡಿದ್ದು, ಅಧಿಕಾರ ಪಡೆಯಲು ತೋರಿದ್ದ ಅವಸರವನ್ನು ಯಡಿಯೂರಪ್ಪ ಈಗ ಸಂಪುಟ ವಿಸ್ತರಣೆ ಮಾಡುವಲ್ಲಿ ತೋರುತ್ತಿಲ್ಲ. ಎಲ್ಲಿದೆ ಸಂಪುಟ. ಕುದುರೆ ವ್ಯಾಪಾರದ ಮುಖ್ಯಮಂತ್ರಿಗಳು ಒಬ್ಬರೇ ಎಲ್ಲ ಸಚಿವರ ಅಧಿಕಾರ ನಡೆಸುವ ಯೋಚನೆಯಲ್ಲಿದ್ದಾರೆಯೇ ಎಂದು ಕಾಂಗ್ರೆಸ್‌ ಟ್ವೀಟ್‌ ಮೂಲಕ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next