Advertisement

ಎದುರಾಳಿ ಇಲ್ಲದೆ ಪಾನ್‌ ಹೇಗೆ ಮೂವ್‌ ಮಾಡ್ತೀರಿ ?:ಡಿಕೆಶಿಗೆ ಬಿಎಸ್‌ವೈ

12:32 PM Sep 19, 2018 | Team Udayavani |

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಭಿನ್ನಮತ, ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗಿರುವ ವೇಳೆಯಲ್ಲೇ ಬಿಜೆಪಿ ಬುಧವಾರ ರಾಜ್ಯಮಟ್ಟದ ಮಹತ್ವದ ಸಭೆ ನಡೆಸಿ ರಣತಂತ್ರಗಳನ್ನು ಹಣೆಯುತ್ತಿದೆ. 

Advertisement

ಅರಮನೆ ಮೈದಾನದಲ್ಲಿ  ನಡೆಯುತ್ತಿರುವ ಸಭೆಯಲ್ಲಿ ಪದಾಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಬಿಎಸ್‌ವೈ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್‌ ನಾಯಕರ ವಿರುದ್ಧ ಕಿಡಿ ಕಾರಿದರು. ರಾಜ್ಯದಲ್ಲಿ ಸರ್ಕಾರ ನಿಷ್ಕ್ರೀಯ
ವಾಗಿದೆ ಎಂದರು. 

ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಆಹ್ವಾನ ನೀಡಿದ್ದಾರೆ. ಸುಭಾಷ್‌ ಗುತ್ತೇದಾರ್‌ ಅವರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡುತ್ತಾರೆ. ಅಷ್ಟರ ಮಟ್ಟಿಗೆ ಸರ್ಕಾರ ಅಸ್ಥಿರವಾಗಿದೆ ಎಂದು ಕಿಡಿ ಕಾರಿದರು. 

ಡಿ.ಕೆ.ಶಿವಕುಮಾರ್‌ ಅವರೇ ನನಗೆ ಚೆಸ್‌ ಗೇಮ್‌ ಗೊತ್ತಿದೆ. ಪಾನ್‌ ಹೇಗೆ ಮೂವ್‌ ಮಾಡಬೇಕು ಅನ್ನುತ್ತೀರಲ್ಲಾ, ಚೆಸ್‌ ಗೇಮ್‌ನಲ್ಲಿ ಎದುರಾಳಿ ಇಲ್ಲದೆ ನೀವು ಒಬ್ಬನೇ ಪಾನ್‌ ಮೂವ್‌ ಮಾಡಿದರೆ ಎನು ಸಾಧಿಸಲಿಕ್ಕಾಗುತ್ತದೆ. ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಡಿ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next