Advertisement

ಸದನ ಕುತೂಹಲ: ಜಮೀರ್‌ಅಹಮದ್‌-ಡಿಕೆಶಿ ಗಹನ ಸಮಾಲೋಚನೆ 

03:45 AM Feb 07, 2017 | Team Udayavani |

ಬೆಂಗಳೂರು: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ “ಭಾವಿ ಕೆಪಿಸಿಸಿ ಅಧ್ಯಕ್ಷರು’ ಎಂದೇ ಬಿಂಬಿತವಾಗಿರುವ  ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಜತೆ ಜೆಡಿಎಸ್‌ ಭಿನ್ನಮತೀಯರ ಗುಂಪಿನ ನಾಯಕ ಜಮೀರ್‌ ಅಹಮದ್‌ ಮುಕ್ಕಾಲು ಗಂಟೆ  ಚರ್ಚೆ ನಡೆಸಿದ್ದು ಕುತೂಹಲ ಮೂಡಿಸಿತು.

Advertisement

ರಾಜ್ಯಪಾಲರ ಭಾಷಣದ ನಡುವೆಯೇ ಡಿ.ಕೆ.ಶಿವಕುಮಾರ್‌ ಹಾಗೂ ಜಮೀರ್‌ ಅಹಮದ್‌ ಗಹನ ಸಮಾಲೋಚನೆಯಲ್ಲಿ ತೊಡಗಿದ್ದರು.  ಜೆಡಿಎಸ್‌ನಿಂದ ಅಮಾನತುಗೊಂಡ ಏಳು ಶಾಸಕರ ಜತೆಗೆ ಇನ್ನೂ ಐವರು ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಈ ಇಬ್ಬರು ನಾಯಕರ ಮಾತುಕತೆ ಸದನದಲ್ಲಿ ಎಲ್ಲರ ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next