Advertisement

ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತೆರೆಗೆ ಸಿದ್ಧ

11:19 AM Apr 15, 2018 | |

ಶ್ರೀ ಕನಕ ದಾಸರ ರಚನೆಯ ಹಾಡಿನ ಸಾಲನ್ನು ಶೀರ್ಷಿಕೆ ಆಗಿ ಇಟ್ಟುಕೊಂಡಿರುವ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಕನ್ನಡ ಚಿತ್ರ ಸೆನ್ಸಾರ್‌ನಿಂದ ಯು ಅರ್ಹತಾ ಪತ್ರವನ್ನು ಪಡೆದುಕೊಂಡಿದೆ.  ನಟ ಅನಂತ್‌ ನಾಗ್‌ ಹಾಗೂ ರಾಧಿಕಾ ಚೇತನ್‌ ಅಭಿನಯದ ಒಂದು ವಿಶಿಷ್ಟ ಕಥಾ ಹಂದರ ಹೊಂದಿರುವ ಚಿತ್ರದ ಟ್ರೇಲರ್‌ ದುಬೈ ದೇಶದ ಇಂಡಿಯನ್‌ ಸ್ಕೂಲ್‌ ಶೇಕ್‌ ರಾಶೀದ್‌ ಸಭಾಂಗಣದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿದೆ.

Advertisement

ಈ ಚಿತ್ರದ ಕೆಲವು ಸನ್ನಿವೇಶಗಳು ಸಹ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಸೆರೆ ಹಿಡಿಯಲಾಗಿದ್ದು, ಅಲ್ಲಿ ಚಿತ್ರೀಕರಣಗೊಂಡ  ಮೊದಲ ಕನ್ನಡ ಚಿತ್ರ ಎಂಬ ಹೆಮ್ಮೆ ಈ ಚಿತ್ರತಂಡದ್ದು. ಅನಂತ್‌ ನಾಗ್‌ ಅವರ ಪಾತ್ರ ಒಂದು ಪ್ರಶಾಂತ ಸಮುದ್ರ ಇದ್ದ ಹಾಗೆ. ಯುವ ಜನತೆಯನ್ನು ಪ್ರತಿನಿದಿಸುವವರು ನಾಯಕಿ ರಾಧಿಕಾ ಚೇತನ್‌ ಎಂಬುದು ನಿರ್ದೇಶಕರ ಮಾತು. 

ಕಬಡ್ಡಿ ನಿರ್ದೇಶಕ ನರೇಂದ್ರ ಬಾಬು ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಗೀತ ಸಾಹಿತ್ಯ ಇರುವ ಈ ಚಿತ್ರಕ್ಕೆ ಪಿ ಕೆ ಎಚ್‌ ದಾಸ್‌ ಛಾಯಾಗ್ರಹಣ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಹಿನ್ನಲೆ ಇರುವ ರಾಮಚಂದ್ರ ಹಡಪದ ಸಂಗೀತ ಒದಗಿಸಿದ್ದಾರೆ. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎರಡು ಕಾಲ ಘಟ್ಟದಲ್ಲಿ ನಡೆಯುವ ಈ ಚಿತ್ರದ ನಿರ್ಮಾಪಕರುಗಳು ಸುದರ್ಶನ್‌, ರಾಮಮೂರ್ತಿ ಹಾಗೂ ದುಬೈ ಅಲ್ಲಿ ವ್ಯಾಪಾರಿ ಆಗಿರುವ ಹರೀಶ್‌ ಶೆರೀಗಾರ್‌ ನಿರ್ಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next