Advertisement

ಹುಣಸೂರು: ಹೋಟೆಲ್ ಮೇಲೆ ದಾಳಿ 5 ಲೀ ಮದ್ಯ ವಶ, ಆರೋಪಿ ಬಂಧನ

09:11 PM Apr 03, 2023 | Team Udayavani |

ಹುಣಸೂರು: ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯ ಸರಬರಾಜು-ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಹೋಟೆಲ್ ಮಾಲಿನನ್ನು ಬಂಧಿಸಿ,5 ಲೀಟರ್‌ನಷ್ಟು ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

Advertisement

ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ ಹೋಟೆಲ್ ಮಾಲಿಕ ನಾಗೇಂದ್ರ ಬಂಧಿತ ಆರೋಪಿ. ಅಬಕಾರಿ ಇಲಾಖೆಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಣಸೂರು ವಲಯದ ಅಬಕಾರಿ ಇನ್ಸ್ಪೆಕ್ಟರ್ ನಾಗಲಿಂಗಸ್ವಾಮಿ ನೃತೃತ್ವದ ತಂಡ ಚಿಲ್ಕುಂದದ ನಾಗೇಂದ್ರರವರ ಹೋಟೆಲ್ ಮೇಲೆ ದಾಳಿ ನಡೆಸಿದ ವೇಳೆ ವಿವಿಧ ಬ್ರಾಂಡಿನ 5.040 ಲೀಟರ್‌ನಷ್ಟು ಮದ್ಯಸ ಸ್ಯಾಚೆಟ್‌ಗಳು ಪತ್ತೆಯಾಗಿದ್ದು, ಆರೋಪಿಯನ್ನು ಮಾಲು ಸಹಿತ ಬಂಧಿಸಿ, ಪ್ರಕರಣ ದಾಖಲಿಸಿನ್ಯಾಯಾಲಯಕ್ಕೆ ಹಾಜರು ಪಡಿಸಿದ ವೇಳೆ ನ್ಯಾಯಾಧೀಶರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬಂದಿಗಳಾದ ಕೆ.ಪಿ.ಶಿವಕುಮಾರ್, ಸಿ.ವಿ. ರಾಘವೇಂದ್ರ ಎಲ್.ವಿ. ರಾಮಚಂದ್ರರವರು ಭಾಗವಹಿಸಿದ್ದರೆಂದು ಇನ್ಸ್ಪೆಕ್ಟರ್ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next