Advertisement

ಮೀರತ್‌: ಎಸ್‌ಐ ಮೇಲೆ ಹೊಟೇಲ್‌ ಮಾಲಕ, ಬಿಜೆಪಿ ಕೌನ್ಸಿಲರ್‌ ಹಲ್ಲೆ

04:38 PM Oct 20, 2018 | Team Udayavani |

ಲಕ್ನೋ : ತಡವಾಗಿ ಆಹಾರ ಪೂರೈಸಿದ ಕಾರಣಕ್ಕೆ  ಸಿಟ್ಟಿಗೆದ್ದು  ವೇಟರ್‌ ಜತೆ ಜಗಳ ತೆಗೆದ ಎಸ್‌ ಐ ಓರ್ವರಿಗೆ ಹೊಟೇಲ್‌ ಮಾಲಕ, ಮೀರತ್‌ ಬಿಜೆಪಿ ಕೌನ್ಸಿಲರ್‌, ಮನೀಶ್‌ ಕುಮಾರ್‌ ಹೊಡೆದು ಹಲ್ಲೆ ನಡೆಸಿದ  ಘಟನೆಯ ವಿಡಿಯೋ ಚಿತ್ರಿಕೆ ಈಗ ವೈರಲ್‌ ಆಗಿದೆ. 

Advertisement

ವಕೀಲೆಯೊಬ್ಬರೊಂದಿಗೆ ಎಸ್‌ಐ ಹೊಟೇಲಿಗೆ ಬಂದು ಫ‌ುಡ್‌ ಆರ್ಡರ್‌ ಮಾಡಿದ್ದರು. ಆದರೆ ಅದರ ಪೂರೈಕೆಯಲ್ಲಿ ವಿಳಂಬವಾದುದಕ್ಕೆ ಎಸ್‌ಐ ಸಿಟ್ಟಿಗೆದ್ದಿದ್ದರು. ಅದಕ್ಕಾಗಿ ವೇಟರ್‌ ಜತೆಗೆ ಜಗಳ ತೆಗೆದರು. ಕೂಡಲೇ ಸ್ಥಳಕ್ಕೆ ಬಂದ ಹೊಟೇಲ್‌ ಮಾಲಕ, ಬಿಜೆಪಿ ಕೌನ್ಸಿಲರ್‌, ಮನೀಶ್‌ ಕುಮಾರ್‌ , ಎಸ್‌ಐ ಜತೆಗೆ ಏರು ಧ್ವನಿಯಲ್ಲಿ  ಮಾತಿನ ಜಗಳಕ್ಕೆ ಇಳಿದು ಅಂತಿಮವಾಗಿ ಎಸ್‌ಐಗೆ ಹೊಡೆದರು. ಈ ಇಡಿಯ ಘಟನೆ ವಿಡಿಯೋದಲ್ಲಿ ಚಿತ್ರಿತವಾಯಿತು. 

ಪೊಲೀಸರೀಗ ಮನೀಶ್‌ ಕುಮಾರ್‌ ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next