Advertisement

ಡೈನಾಮೈಟ್‌ ಬಳಸಿ ಬಿಜೆಪಿ ನಾಯಕನ ಹೋಟೆಲ್‌ ಧ್ವಂಸ

09:46 PM Jan 04, 2023 | Team Udayavani |

ಮಧ್ಯಪ್ರದೇಶ: ಯುವಕನ ಹತ್ಯೆ ಆರೋಪ ಸಂಬಂಧ ಬಂಧನಕ್ಕೊಳಗಾಗಿರುವ ಬಿಜೆಪಿ ನಾಯಕ ಮಿಶ್ರಿ ಚಂದ್‌ ಗುಪ್ತ ಮಾಲೀಕತ್ವದ ಹೋಟೆಲ್‌ ಅನ್ನು ಮಧ್ಯಪ್ರದೇಶ ಸರ್ಕಾರ ನೆಲಸಮ ಮಾಡಿದೆ. ಕನಿಷ್ಠ 60 ಡೈನಾಮೈಟ್‌ ಬಳಸಿ ಮಧ್ಯಪ್ರದೇಶ ಸಾಗರ್‌ ಜಿಲ್ಲೆಯಲ್ಲಿರುವ ನಾಲ್ಕು ಅಂತಸ್ತಿನ ಹೋಟೆಲನ್ನು ನೆಲಸಮ ಮಾಡಲಾಗಿದೆ.

Advertisement

ಸಿಎಂ ಶಿವರಾಜ್‌ ಸಿಂಗ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರವು ಅತ್ಯಾಚಾರ ಮತ್ತು ಕೊಲೆ ಆರೋಪಿಗಳ ಆಸ್ತಿಗಳನ್ನು ನೆಲಸಮ ಮಾಡುವ ಕ್ರಮ ಆರಂಭಿಸಿದ್ದಾಗಿನಿಂದ ಡೈನಾಮೈಟ್‌ ಬಳಸಿರುವುದು ಇದೇ ಮೊದಲು.

ಎರಡು ಅಂತಸ್ತಿನ ಹೋಟೆಲ್‌ಗೆ ಪರವಾನಗಿ ಪಡೆದು ನಾಲ್ಕು ಅಂತಸ್ತಿನ ಹೋಟೆಲ್‌ ನಿರ್ಮಿಸಿರುವ ಹಿನ್ನೆಲೆಯಲ್ಲಿ ಕಟ್ಟಡ ನೆಲಸಮ ಮಾಡಲಾಗಿದೆ ಎಂದು ಸಾಗರ್‌ ಜಿಲ್ಲಾಡಳಿತ ತಿಳಿಸಿದೆ.

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಗುಪ್ತ ಅವರ ಪತ್ನಿ ಸ್ಪರ್ಧಿಸಿದ್ದರು. ಆದರೆ ಯಾದವ ಸಮುದಾಯ ಬೆಂಬಲಿತ ಕಿರಣ್‌ ಯಾದವ್‌ ಚುನಾವಣೆಯಲ್ಲಿ ಜಯಶೀಲರಾಗಿದ್ದರು. ದ್ವೇಷದಿಂದ ಕಿರಣ್‌ ಸೋದರಳಿಯ ಜಗದೀಶ್‌ ಯಾದವ್‌ರನ್ನು ಡಿ.22ರಂದು ಹತ್ಯೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಣ್‌ರನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next