Advertisement

ಆನೆಗೊಂದಿ ಭಾಗದಲ್ಲಿ ಹೋಟೆಲ್ ಗಳಿಗೆ ನಿಷೇಧ: ಹಂಪಿ ಭಾಗದಲ್ಲಿ ಭರ್ಜರಿ ವ್ಯಾಪಾರ ವಹಿವಾಟು

07:42 PM Feb 28, 2022 | Team Udayavani |

ಗಂಗಾವತಿ: ಹಂಪಿ ಅಭಿವೃದ್ಧಿ ಪ್ರಾಧಿಕಾರಗಳ ನಿಯಮಗಳನ್ನು ತೋರಿಸಿ ಆನೆಗೊಂದಿ ಭಾಗದಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿರುವುದು ಅನಧಿಕೃತ ಎಂದು ಹೋಟೆಲ್ ರೆಸಾರ್ಟ್ ಗಳಿಗೆ ಜಿಲ್ಲಾಡಳಿತ ಬೀಗ ಜಡಿದಿದ್ದು ಹಂಪಿ ಸುತ್ತಲೂ ಹಲವಾರು ಹೋಟೆಲ್ ಗಳು ನಿತ್ಯವೂ ಭರ್ಜರಿ ವ್ಯಾಪಾರ ವಹಿವಾಟು ನಡೆಸುತ್ತಿದೆ .

Advertisement

ಹಂಪಿ ಅಭಿವೃದ್ಧಿ ಪ್ರಾಧಿಕಾರ ಆನೆಗೊಂದಿ ಭಾಗದ 15 ಗ್ರಾಮಗಳಲ್ಲಿ ವ್ಯಾಪಾರ ವಹಿವಾಟು ಪರವಾನಗಿ ಪಡೆದು ಮಾಡಬೇಕು ಅನಧಿಕೃತವಾಗಿ ವ್ಯಾಪಾರ ವಹಿವಾಟು ಮಾಡುತ್ತಿದ್ದ ಹೋಟೆಲ್ ಗಳನ್ನು ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಕಳೆದ ಡಿಸೆಂಬರ್ 27ರಂದು ಸೀಜ್ ಮಾಡಿ ಬಂದ್ ಮಾಡಿಸಿದೆ .

ಯುನೊಸ್ಕೋ ಹಂಪಿ ವಿಶ್ವ ಪರಂಪರೆ ಪಟ್ಟಿಯ ವ್ಯಾಪ್ತಿಗೆ ಸೇರಿಸಿ ಕೊಂಡ ನಂತರ ಅದನ್ನು ಮುಂದುವರಿಸಲು ಪ್ರತ್ಯೇಕವಾಗಿ ರಾಜ್ಯ ಸರ್ಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ .ರಾಜ್ಯ ಪುರಾತತ್ವ ಮತ್ತು ಸರ್ವೇಕ್ಷಣಾ ಪುರಾತತ್ವ ಇಲಾಖೆಯ ವ್ಯಾಪ್ತಿಯಲ್ಲಿರುವ ಸ್ಮಾರಕಗಳ ಸುತ್ತ ವಲಯವಾರು ನಿಯಮಗಳನ್ನು ರೂಪಿಸಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಿಷೇಧ ಮಾಡಲಾಗಿದೆ .ಆದರೂ ಹಂಪಿ ಕಮಲಾಪುರ ಕಡ್ಡಿರಾಂಪುರ ಸೇರಿದಂತೆ ಹೊಸಪೇಟೆ ಭಾಗದಲ್ಲಿ ಹಂಪಿ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ 14 ಗ್ರಾಮಗಳಲ್ಲಿ ಈಗಲೂ ಭರ್ಜರಿಯಾಗಿ ಹೋಟೆಲ್ ರೆಸಾರ್ಟ್ ಗಳು ವ್ಯಾಪಾರ ವಹಿವಾಟು ಮಾಡುತ್ತಿವೆ ಆನ್ ಲೈನ್ ಮುಖಾಂತರ ಪ್ರವಾಸಿಗರನ್ನ ಬುಕ್ ಮಾಡಿಕೊಂಡು ವೀಕೆಂಡ್ ಸೇರಿದಂತೆ ವಿಶೇಷ ದಿನಗಳಲ್ಲಿ ಪ್ರವಾಸಿಗರಿಗೆ ಊಟ ವಸತಿ ನೀಡುತ್ತಿವೆ .ಹೊಸಪೇಟೆ ಭಾಗದ ಜನಪ್ರತಿನಿಧಿಗಳು ತಮ್ಮ ಜಾಗದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಮತಿ ಕೊಟ್ಟು ಆನೆಗೊಂದಿ ಭಾಗದಲ್ಲಿ ರೆಸಾರ್ಟ್ ಗಳನ್ನು ಸೀಜ್ ಮಾಡಿಸುವಲ್ಲಿ ಮೊದಲಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಆನೆಗೊಂದಿ ಭಾಗದ ಜನರು ಮಾಡುತ್ತಾರೆ .

ವಿರುಪಾಪುರ ಗಡ್ಡಿಯಲ್ಲಿದ್ದ 28  ರೆಸಾರ್ಟ್ ಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರಿಂದ 2018 ರಲ್ಲಿ ಹೋಟೆಲ್ ಗಳನ್ನು ಇನ್ನೂ ಉಳಿದಿದ್ದ ಕೆಲ ರೆಸಾರ್ಟ್ ಗಳನ್ನು 2019 ರಲ್ಲಿ ರಲ್ಲಿ ತುಂಗಭದ್ರಾ ನದಿಯಲ್ಲಿ ನೆರೆ ಉಂಟಾಗಿದ್ದರಿಂದ  ವಿರುಪಾಪುರಗಡ್ಡಿಯಲ್ಲಿ ಸಿಲುಕಿಕೊಂಡಿದ್ದ ಸುಮಾರು 500 ಕ್ಕೂ ಹೆಚ್ಚು  ಪ್ರವಾಸಿಗರನ್ನ ಎನ್ ಡಿಆರ್ ಎಫ್ ತಂಡದಿಂದ ಸಂರಕ್ಷಿಸಲಾಗಿತ್ತು .ಅಂದಿನ ಜಿಲ್ಲಾಧಿಕಾರಿ ಪಿ ಸುನೀಲ್ ಕುಮಾರ್ ನೆರೆ ಇಳಿದ ತಕ್ಷಣ ವಿರುಪಾಪುರಗಡ್ಡಿ ಯಲ್ಲಿದ್ದ ಎಲ್ಲಾ ರೆಸಾರ್ಟ್ ಗಳನ್ನು ತೆರವುಗೊಳಿಸಿದರು .

ನಂತರ ಸಣಾಪುರ ಆನೆಗೊಂದಿ ಹನುಮನಹಳ್ಳಿ ಜಂಗ್ಲಿ ರಂಗಾಪುರ ಸೇರಿದಂತೆ ಈ ಭಾಗದಲ್ಲಿ ರೈತರು ತಮ್ಮ ಸ್ವಂತ ಗದ್ದೆಯಲ್ಲಿ ಸ್ವಲ್ಪ ಭಾಗವನ್ನು ರೆಸಾರ್ಟ್ ಗೆ ಲೀಸ್ ಕೊಟ್ಟು ಅನಧಿಕೃತವಾಗಿ ಹೋಟೆಲ್ ರೆಸಾರ್ಟ್ ಗಳನ್ನು ಆರಂಭಿಸಲಾಯಿತು .ಕೆಲವರು ನದಿಪಾತ್ರದಲ್ಲಿ ಮತ್ತು ಸರ್ಕಾರಿ ಅರಣ್ಯ ಭೂಮಿಯಲ್ಲಿ ಸಹ ಹೋಟೆಲ್ ಗಳನ್ನು ನಡೆಸುತ್ತಿದ್ದರು .ಇವುಗಳಿಂದ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಜನರು ಆಗಮಿಸಿ ಈ ಹೋಟೆಲ್ ಗಳಲ್ಲಿ ಊಟ ವಸತಿ ಮಾಡಿ ವೀಕೆಂಡ್ ಕಳೆಯುತ್ತಿದ್ದರು . ಇದರಿಂದ ಆರ್ಥಿಕವಾಗಿ ಆನೆಗೊಂದಿ ಭಾಗದ ಉತ್ತಮ ರೀತಿ ನಡೆದಿತ್ತು .

Advertisement

ಹಂಪಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೊನೆಯಲ್ಲಿ ಆನೇಗುಂದಿ ಭಾಗದಲ್ಲಿರುವ ಹೋಟೆಲ್ ಗಳಲ್ಲಿ ತಂಗಲು ಆಗಮಿಸುತ್ತಿದ್ದರು. ಇದರಿಂದ ಹಂಪಿ ಭಾಗದ ಹೋಟೆಲ್ ಗಳ ವ್ಯಾಪಾರ ವಹಿವಾಟು ಅಷ್ಟೇನೂ ಹದಗೆಟ್ಟಿರಲಿಲ್ಲ . ಆನೆಗೊಂದಿ ಭಾಗದಲ್ಲಿ ಅನಧಿಕೃತವಾಗಿ ಹೋಟೆಲ್ ರೆಸಾರ್ಟ್ ಗಳ ಬಂದ್ ಮಾಡಿಸುವ ಷಡ್ಯಂತ್ರ ದಿಂದಾಗಿ ಮತ್ತು ನಿಯಮಗಳ ಉಲ್ಲಂಘನೆ ನೆಪದಲ್ಲಿ ಡಿಸೆಂಬರ್ 27 ರಂದು ಕೊಪ್ಪಳ ಜಿಲ್ಲಾಡಳಿತ ಹಂಪಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಆನೆಗೊಂದಿ ಭಾಗದ ರೆಸಾರ್ಟ್ ಗಳನ್ನು ಸೀಜ್ ಮಾಡಿ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿದರು . ಹಂಪಿ ಭಾಗದಲ್ಲಿ ಹೋಟೆಲ್ ರೆಸಾರ್ಟ್ ಗಳು ಈಗಲೂ ನಿರಂತರವಾಗಿ ನಡೆಯುತ್ತಿದ್ದು ಪ್ರಾಧಿಕಾರದ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಹಂಪಿ ಭಾಗದಲ್ಲಿ ಹೋಟೆಲ್ ಉದ್ಯಮಗಳು ಇಲ್ಲ 2 ಅಥವಾ  2 ಹೋಟೆಲ್ ಮಾತ್ರ ಇವೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆನೆಗೊಂದಿ ಭಾಗದ ಜನರು ಆರೋಪಿಸುತ್ತಿದ್ದಾರೆ .

ಷಡ್ಯಂತ್ರ :ಆನೆಗೊಂದಿ ಭಾಗದಲ್ಲಿರುವ ಕಿಷ್ಕಿಂದಾ ಅಂಜನಾದ್ರಿ ಮತ್ತು 7ಗುಡ್ಡ ಪ್ರದೇಶ ಸಾಣಾಪುರ ಲೇಕ್ ಮತ್ತು ತುಂಗಭದ್ರ ನದಿ ಪಾತ್ರವನ್ನು ಸಣಾಪುರ ವಾಟರ್ ಫಾಲ್ಸ್ ವೀಕ್ಷಣೆ ಮಾಡಲು ಅಧಿಕ ಪ್ರವಾಸಿಗರು ಆನೆಗೊಂದಿ ಭಾಗಕ್ಕೆ ಬರುವುದರಿಂದ ಇಲ್ಲಿಯ ಹೋಟೆಲ್ ಗಳು ವೀಕೆಂಡ್ ಸೇರಿದಂತೆ ಉಳಿದ ದಿನಗಳಲ್ಲಿ ಪ್ರವಾಸಿಗರಿಗೆ ಊಟ ವಸತಿ ನೀಡುತ್ತಿವೆ .ಇದರಿಂದ ಹಂಪಿ ಭಾಗದ ಹೋಟೆಲ್ ಉದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೆಲ ಅಧಿಕಾರಿಗಳು ಮತ್ತು ಕೆಲ ಚುನಾಯಿತ ಜನಪ್ರತಿನಿಧಿಗಳು ಷಡ್ಯಂತ್ರ ನಡೆಸಿ ಆನೆಗೊಂದಿ ಭಾಗದಲ್ಲಿರುವ ಹೋಟೆಲ್ ಗಳನ್ನು ಪ್ರಾಧಿಕಾರದ ನಿಯಮ ಉಲ್ಲಂಘನೆ ನೆಪದಲ್ಲಿ ಬಂದ್ ಮಾಡಿಸಿದ್ದಾರೆ .

ಆನೆಗೊಂದಿ ಭಾಗದಲ್ಲಿ ಆನೆಗುಂದಿ ಮತ್ತು ವಿರುಪಾಪುರಗಡ್ಡಿ ಮಾತ್ರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ ಉಳಿದಂತೆ ಯಾವ ಗ್ರಾಮಗಳಲ್ಲಿ ಸಹ ಸ್ಮಾರಕಗಳಿಲ್ಲ ಆದರೂ ಹಂಪಿ ಅಭಿವೃದ್ಧಿ ಪ್ರಾಧಿಕಾರ ನಿಯಮಗಳನ್ನು ಹೇರಿ ಇಲ್ಲಿಯ ಪ್ರವಾಸೋದ್ಯಮವನ್ನು ಮೊಟಕುಗೊಳಿಸುತ್ತಿದೆ. ಹಂಪಿ ಭಾಗದಲ್ಲಿ ಹೋಟೆಲ್ ಉದ್ಯಮ ನಡೆಸಲು ಅಲ್ಲಿಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಬೆಂಬಲ ನೀಡಿದಂತೆ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಬೆಳೆಯಲು ಹೋಟೆಲ್ ನಡೆಸಲು ಇಲ್ಲಿಯ ಜನಪ್ರತಿನಿಧಿಗಳು ಸಹ ಬೆಂಬಲ ನೀಡಬೇಕೆಂದು ಹೆಸರು ಹೇಳಲು ಇಚ್ಛಿಸದ ಹೋಟೆಲ್ ಮಾಲೀಕರೊಬ್ಬರು ಉದಯವಾಣಿ ಜತೆ ಮಾತನಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next