Advertisement

‘ಕಂಬಳಗಳು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗ’

02:25 AM Dec 23, 2018 | Karthik A |

ಬೈಂದೂರು: ಯಡ್ತರೆ ಗ್ರಾಮದ ಹೊಸೂರು ಕಂಬಳ ಮಹೋತ್ಸವ ಹಡವಿನ ಗದ್ದೆ ದಿ|  ಸುಬ್ಬ ಪೂಜಾರಿ ಅವರ ಕಂಬಳಗದ್ದೆಯಲ್ಲಿ ನಡೆಯಿತು. ಕಂಬಳ್ಳೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಿರೂರು ಯಕ್ಷ ಸಂಪದ ಅಧ್ಯಕ್ಷ ಚಿಕ್ಕು ಪೂಜಾರಿ, ಕಂಬಳಗಳು ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾಗಿದೆ. ಕೃಷಿ ಚಟುವಟಿಕೆಯ ಜತೆಗೆ ಬಿಡುವಿನ ವೇಳೆಯಲ್ಲಿ ಆಚರಿಸಿಕೊಳ್ಳುವ ರೈತರ ಸಂಭ್ರಮ ಇಂದು ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಕಂಬಳಕ್ಕೆ ಇಂದು ಯುವಜನತೆ ಸೇರಿದಂತೆ ಬಹಳಷ್ಟು ಜನರ ಆಸಕ್ತಿಯ ಕ್ರೀಡೆಯಾಗಿದೆ. ಯಶಸ್ವಿಯಾಗಿ 9 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೊಸೂರು ಕಂಬಳ ಪ್ರಮುಖ ಕಂಬಳಗಳಲ್ಲಿ ಒಂದಾಗಿದೆ ಎಂದರು. ಕಂಬಳಗದ್ದೆ ಮಾಲಕರಾದ ದಾರಮ್ಮ ಹಡವಿನಗದ್ದೆ ಕಂಬಳಕ್ಕೆ ಚಾಲನೆ ನೀಡಿದರು.

Advertisement

ಗ್ರಾಮದ ಹಿರಿಯರಾದ ಕುಪ್ಪ ಮರಾಠಿ, ಕಂಬಳ್ಳೋತ್ಸವದ  ಪ್ರಾಯೋಜಕರಾದ ವಸಂತರಾಜ್‌ ಹಡವಿನಗದ್ದೆ, ಸಂಘಟನ ಸಮಿತಿಯ ಚಂದ್ರ ಪೂಜಾರಿ, ನಾಗಪ್ಪ ಮರಾಠಿ, ಪತ್ರಕರ್ತ ಗಿರಿ ಶಿರೂರು, ಮಾಸ್ತಯ್ಯ ಪೂಜಾರಿ, ನಾರಾಯಣ ಮರಾಠಿ, ಮಾಸ್ತಪ್ಪ ನಾಯ್ಕ, ಮಹಾದೇವ ಮರಾಠಿ, ವಾಸುದೇವ ಮರಾಠಿ, ಪವನ್‌ ಕುಮಾರ್‌ ಹಾಜರಿದ್ದರು. ಕಂಬಳ್ಳೋತ್ಸವದಲ್ಲಿ ಹಗ್ಗ ಹಾಗೂ ಹಲಗೆ ವಿಭಾಗದಲ್ಲಿ 40ಕ್ಕೂ ಅಧಿಕ ಕೋಣಗಳು ಭಾಗವಹಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next