Advertisement

ಕಾರ್ಖಾನೆ ಸಹಯೋಗದಲ್ಲಿ ಕ್ಷೇತ್ರದ ಅಭಿವೃದ್ಧಿ

05:31 PM Mar 06, 2020 | Team Udayavani |

ಹೊಸಪೇಟೆ: ಸ್ಥಳೀಯ ಕಾರ್ಖಾನೆಗಳ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ವಿಜಯ ನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಆನಂದ ಸಿಂಗ್‌ ಹೇಳಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ರೂಪಿಸಿ, ಸ್ಥಳೀಯ ಕಾರ್ಖಾನೆಗಳ ಸಹ ಯೋಗದಲ್ಲಿ ಹೊಸ ಪೇಟೆ  ನಗರವನ್ನು ಅಭಿವೃದ್ಧಿ ಪಡಿಸಲಾಗುವುದು.

ನಗರದಲ್ಲಿ ನನೆಗುದಿಗೆ ಬಿದ್ದಿರುವ ಸೂಪರ್‌ ತರ ಕಾರಿ ಮಾರು ಕಟ್ಟೆಯನ್ನು 21 ಕೋಟಿ ರೂ.ವೆಚ್ಚದಲ್ಲಿ ನಿರ್ಮಾ ಣ  ಮಾಡಲು ಈ ಹಿಂದೆ ಕ್ರಮ ಕೈಗೊಳ್ಳಲಾಗಿತ್ತು. ಈ ಯೋಜನೆಗೆ ಸಂಬಂಧ ಪಟ್ಟಂತೆ 11 ಕೋಟಿ ರೂ. ಮೀಸ ಲಿಟ್ಟಿದ್ದು, ಉಳಿದ ಹಣವನ್ನು ಜಿಲ್ಲಾ ಖನಿಜ ನಿಧಿಯಿಂದ ಬಳಕೆ ಮಾಡಿಕೊಳ್ಳಲಾಗುವುದು ಎಂದರು.

ಪೌರಾಯುಕ್ತೆ ಜಯಲಕ್ಷ್ಮೀಯವರ ವರ್ಗಾವಣೆ ಮಾಡಲು ಹುನ್ನಾರ ನಡೆದಿದೆ ಎಂದು ಸಂಘ-ಸಂಸ್ಥೆಗಳು ಆರೋಪ ಮಾಡಿರುವುದು ಸತ್ಯಕ್ಕೆ ದೂರವಾಗಿದೆ. ದಕ್ಷ ಹಾಗೂ ಪ್ರಾಮಾ ಣಿಕ ಅಧಿಕಾರಿಯಾಗಿರುವ ಜಯಲಕ್ಷ್ಮೀ ಅವರನ್ನು ನಾನೇ ಕರೆ ತಂದಿದ್ದೇನೆ. ಅವರನ್ನು ವರ್ಗಾವಣೆ ಮಾಡುವ ಮಾತೇ ಬರುವುದಿಲ್ಲ. ವಿಜಯನಗರ ಜಿಲ್ಲೆ ರಚನೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ವಿಜಯ ನ ಗರ ಜಿಲ್ಲೆ ಆಗೇ ಆಗುತ್ತೆ ಎಂಬ ವಿಶ್ವಾಸ ವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next