Advertisement

ಹೊಸಳ್ಳಿ: ಸ್ವಚ್ಛಮೇವ ಜಯತೆ ಆಂದೋಲನ

12:20 PM Jun 23, 2019 | Team Udayavani |

ಕೊಪ್ಪಳ: ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ತಾಲೂಕಿನ ಬಹದ್ದೂರಬಂಡಿ ವಲಯದ ಹೊಸಳ್ಳಿಯಲ್ಲಿ ಗ್ರಾಪಂ ಆಶ್ರದಲ್ಲಿ ಸ್ವಚ್ಛಮೇವ ಜಯತೆ ಕಾರ್ಯಕ್ರಮ ಜರುಗಿತು. ಶಿಬಿರದಲ್ಲಿ 150 ಸ್ಕೌಟ್ ಮತ್ತು 25 ಗೈಡ್ಸ್‌ ಪಾಲ್ಗೊಂಡಿದ್ದರು.

Advertisement

ಎಚ್.ಎಂ. ಸಿದ್ದರಾಮಯ್ಯಸ್ವಾಮಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರಾದ ಗೋವಿಂದಪ್ಪ, ಯೋಗೇಂದ್ರಪ್ಪ ನಾಯಕ್‌, ಮಂಜಮ್ಮ ಜಮದಗ್ನಿ, ಹನುಮಮ್ಮ ಸಣ್ಣ ಮರಿಯಪ್ಪ, ಹುಲಿಗೆವ್ವ ಶಿವಣ್ಣ, ಯಲ್ಲಮ್ಮ ಉಪಸ್ಥಿತರಿದ್ದರು.

ಗೋವಿಂದಪ್ಪ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಘಟನಾ ಆಯುಕ್ತೆ ಮಲ್ಲೇಶ್ವರಿ ಜುಜಾರೆ ಪ್ರಾಸ್ತಾವಿಕ ಮಾತನಾಡಿದರು. ಸ್ಕೌಟ್ಸ್‌ ಜಿಲ್ಲಾ ಆಯುಕ್ತ ಮಲ್ಲಿಕಾರ್ಜುನ ಚೌಕಿಮಠ ಮಾತನಾಡಿದರು.

ಮಾರುತಿ ಆರೇರ ಸ್ವಾತಿಸಿದರು. ಸ್ಕೌಟ್, ಗೈಡ್ಸ್‌ನ ಮಕ್ಕಳು ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಈ ವೇಳೆ ಪಿಡಿಒ ಜ್ಯೋತಿ ರಡ್ಡೇರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next