Advertisement

ಮರದ ಬೇರಿನಲ್ಲಿ ಸಿಲುಕಿದ ಕಾಡುಕೋಣ ಮರಿ-ಗಾಯ

04:02 PM May 27, 2020 | Naveen |

ಹೊಸನಗರ: ಧರೆಯಿಂದ ಇಳಿಯುವಾಗ ಮರದ ಬೇರಿನಲ್ಲಿ ಕಾಲುಗಳು ಸಿಲುಕಿಕೊಂಡ ಪರಿಣಾಮ ಕಾಡುಕೋಣ ಮರಿಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ನಗರ ವಲಯ ಅರಣ್ಯ ವ್ಯಾಪ್ತಿಯ ಬಾಳಮನೆಯಲ್ಲಿ ಮಂಗಳವಾರ ನಡೆದಿದೆ.

Advertisement

ಅಂಡಗದೂರು ಗ್ರಾಪಂ ವ್ಯಾಪ್ತಿಯ ಬಾಳಮನೆಯ ಮರವೊಂದರ ಬಳಿ ಕಾಡುಕೋಣ ಮರಿಯೊಂದು ಸಿಲುಕಿ ಕೊಂಡು ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಡಿಆರ್‌ ಎಫ್‌ಒ ಯೋಗರಾಜ್‌, ಸಿಬ್ಬಂದಿ ರಾಮು ಸ್ಥಳಕ್ಕೆ ತೆರಳಿ ಕಾಡುಕೋಣ ಮರಿಯನ್ನು ಅರಣ್ಯ ಇಲಾಖೆ ಜೀಪ್‌ನಲ್ಲಿ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ನಗರ ಪಶು ಆಸ್ಪತ್ರೆಯ ಡಾ| ಮಹಮದ್‌ ಖಲೀಲ್‌, ಮರದ ಬೇರಿನಲ್ಲಿ ಕಾಲುಗಳು ಸಿಲುಕಿದ್ದರಿಂದ ಹಿಂಭಾಗದ ಕಾಲುಗಳು ಸಂಪೂರ್ಣ ಸ್ವಾಧೀನ ಕಳೆದುಕೊಂಡಿವೆ. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ನೋಡಿ ಮುಂದಿನ ಚಿಕಿತ್ಸೆ ನೀಡಬೇಕೆಂದರು. ಅರಣ್ಯಾಧಿಕಾರಿ ಎಂ.ಪಿ.ಆದರ್ಶ ಮಾತನಾಡಿ, ಈಗಾಗಲೇ ಕಾಡುಕೋಣ ಮರಿಗೆ ಅರಣ್ಯ ಇಲಾಖೆಯ ಕ್ವಾರ್ಟರ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರೊಂದಿಗೆ ಮಾತನಾಡಿ ಅಗತ್ಯವಿದ್ದರೆ ತಾವರೆಕೊಪ್ಪಕ್ಕೆ ರವಾನಿಸಲಾಗುವುದೆಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next