Advertisement

ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ

04:52 PM Oct 23, 2021 | Team Udayavani |

ವಿಜಯಪುರ:  ಐದು ಜನ ಅಂತರ್ ರಾಜ್ಯ ಗಾಂಜಾ  ಮಾರಾಟಗಾರರನ್ನು ಹೊಸಕೋಟೆ ಪೊಲೀಸರು ಮಿಂಚಿನ  ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

Advertisement

ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಲಿಬೆಲೆ  ರಸ್ತೆಯಲ್ಲಿರುವ ರಾಘವೇಂದ್ರ ಚಿತ್ರ ಮಂದಿರ ಬಳಿ ಅ.15 ಮತ್ತು 20 ರಂದು ಮಧ್ಯಾಹ್ನ 3.30_ರ ಸಮಯದಲ್ಲಿ  ಹೊಸಕೋಟೆ ಪೊಲೀಸ್ ಠಾಣಾ ಆರಕ್ಷಕ ನಿರೀಕ್ಷಕರಾದ  ಎಸ್.ಆರ್ ಮಂಜುನಾಥ್ ಖಚಿತ ಮಾಹಿತಿ ಮೇರೆಗೆ ಪರಿಶೀಲಿಸಿದಾಗ ಇಬ್ಬರು ಆರೋಪಿಗಳು ಆಟೋ ನಿಲ್ಲಿಸಿಕೊಂಡು ಮಾದಕ  ವಸ್ತುವಾದ ಗಾಂಜಾವನ್ನು ಗಿರಾಕಿಗಳಿಗೆ ಮಾರಾಟ ಮಾಡಲು  ರಸ್ತೆಯ ಪಕ್ಕ ಇದ್ದಿದ್ದು ತಿಳಿದುಬಂತು. ಈ ಮಾಹಿತಿ ಅನುಸರಿಸಿ ಮುಂದುವರೆದಾಗ ಆರೋಪಿಗಳು ಕೈ ಸನ್ನೆ ಮಾಡಿ  ಗಿರಾಕಿಗಳನ್ನು ಕರೆಯುತ್ತಿದ್ದರು. ಆ  ಸಮಯದಲ್ಲಿ  ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿಗಳು ಅವರನ್ನು  ದಸ್ತಗಿರಿ ಮಾಡಿದ್ದಾರೆ.

ಇವರ ಬಳಿ 2 ಕೆ.ಜಿ ಗಾಂಜಾ ಇದ್ದು  2 ಕೆಜಿಯ 8 ಬಂಡಲ್, 9 ಕೆಜಿಯ 1 ಬಂಡಲ್,  8 ಕೆಜಿಯ 1 ಬಂಡಲ್ ಇತ್ತು. ಪ್ಲಾಸ್ಟಿಕ್  ಗೋಣಿ ಚೀಲದಲ್ಲಿ 14 ಕೆಜಿ 750 ಗ್ರಾಂ, ಇನ್ನೂಂದು ಗೋಣಿ  ಚೀಲದಲ್ಲಿ  5 ಕೆಜಿ 900 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು  ಆರೋಪಿಗಳಾದ ಸುರಾಂಗಿ, ಮೊನಿಪಾಲ್ ರನ್ನು ವಿಚಾರಣೆಗೊಳಪಡಿಸಿದಾಗ ಸತ್ಯಪ್ರದಾನ್, ಮತ್ತು ಕೃಷ್ಣ ಆಟೋ ಡ್ರೈವರ್  ಮತ್ತು ಮೊಬೈಲ್ ಗಳ ಜೊತೆ ಒಟ್ಟು 55 ಕೆಜಿ ಗಾಂಜಾವನ್ನು  ವಶಪಡಿಸಿಕೊಂಡು ಖದೀಮರನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next