Advertisement

ಶಂಕಿತ ಗೋ ರಕ್ಷಕರ ವಿರುದ್ಧ ಕಠಿನ ಕ್ರಮ: ಮ.ಪ್ರ. ಸರಕಾರಕ್ಕೆ ಮೆಹಬೂಬ ಆಗ್ರಹ

09:44 AM May 26, 2019 | Sathish malya |

ಶ್ರೀನಗರ : ಮಧ್ಯ ಪ್ರದೇಶ ಸರಕಾರ ಶಂಕಿತ ಗೋ ರಕ್ಷಕರ ವಿರುದ್ದ ಕಠಿನ ಕ್ರಮ ತೆಗೆದುಕೊಳ್ಳಬೇಕು ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಆಗ್ರಹಿಸಿದ್ದಾರೆ.

Advertisement

ಮಧ್ಯಪ್ರದೇಶದ ಸಿಯೋನಿ ಯಲ್ಲಿ ಶಂಕಿತ ಗೋ ರಕ್ಷಕರು ಇಬ್ಬರು ವ್ಯಕ್ತಿಗಳಿಗೆ ದೊಣ್ಣೆಯಿಂದ ಅಮಾನುಷವಾಗಿ ಹೊಡೆಯುತ್ತಿರುವ ವಿಡಿಯೋ ಚಿತ್ರಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಸುತ್ತಾಡುತ್ತಿರುವುದನ್ನು ಆತಂಕದಿಂದ ಗಮನಿಸಿರುವ ಮೆಹಬೂಬ, ಶಂಕಿತ ಗೋ ರಕ್ಷಕರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುವಂತೆ ಮಧ್ಯ ಪ್ರದೇಶ ಸರಕಾರವನ್ನು ಟ್ವಿಟರ್‌ ಮೂಲಕ ಒತ್ತಾಯಿಸಿದ್ದಾರೆ.

ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next