Advertisement

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

07:27 AM Apr 15, 2024 | Suhan S |

ಮೇಷ: ಹೊಸ ಸಪ್ತಾಹದ ಆರಂಭದಲ್ಲಿ ಪುಟಿದೇಳುವ ಕಾರ್ಯೋತ್ಸಾಹ. ಉದ್ಯೋಗ
ಸ್ಥಾನದಲ್ಲಿ ಹೊಸ ವ್ಯವಸ್ಥೆ. ಸ್ವಂತ ಉದ್ಯಮ ಕ್ಷಿಪ್ರ ಗತಿಯಲ್ಲಿ ಮುನ್ನಡೆ. ಮಹಿಳೆಯರ ಗೃಹೋದ್ಯಮದ ಜನಪ್ರಿಯತೆ ಹೆಚ್ಚಳ.

Advertisement

ವೃಷಭ: ಭರವಸೆಗಳು ತುಂಬಿರುವ ಹೊಸ ಸಪ್ತಾಹ ಆರಂಭ. ಉದ್ಯೋಗದಲ್ಲಿ ಯಥಾಸ್ಥಿತಿ. ಕೃಷಿ ಕ್ಷೇತ್ರಕ್ಕೆ ಹೆಚ್ಚು ಯುವಜನರನ್ನು ಸೆಳೆಯಲು ಪ್ರಯತ್ನ. ಬಡವರಿಗೆ ಸರಕಾರಿ ಯೋಜನೆಗಳ ಸೌಲಭ್ಯ ದೊರಕಿಸಲು ಸಹಾಯ.

ಮಿಥುನ: ಸಾಹಸಕ್ಕೆ ಸಜ್ಜಾಗಿ ಹೊಸ ಸಪ್ತಾಹಕ್ಕೆ ಪ್ರವೇಶ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ನೆರವು. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.

ಕರ್ಕಾಟಕ: ಬದುಕಿನಲ್ಲಿ ಉತ್ಕರ್ಷ ಹೊಂದುವ ಆಕಾಂಕ್ಷೆ. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ. ಅಕಸ್ಮಾತ್‌ ಧನಾಗಮ ಯೋಗ. ಉತ್ತರ ದಿಕ್ಕಿನಿಂದ ಶುಭವಾರ್ತೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಕುಟುಂಬದ ಹಿರಿಯ ವ್ಯಕ್ತಿ ಆಗಮನ.

ಸಿಂಹ: ವಿರಾಮದ ಮರುದಿನ ಪುಷ್ಟೀಕೃತ ಕಾರ್ಯಶಕ್ತಿಯೊಂದಿಗೆ ಕಾರ್ಯರಂಗ ಪ್ರವೇಶ. ಉದ್ಯೋಗ ಕ್ಷೇತ್ರದಲ್ಲಿ ಗುರುಸ್ಥಾನ ಭದ್ರ. ವಿಸ್ತೃತ ಕಾರ್ಯಕ್ಷೇತ್ರದಲ್ಲಿ ಉದ್ಯಮದ ಪ್ರಗತಿ. ಹೊಸ ವಸ್ತ್ರೋದ್ಯಮಿಗಳಿಗೆ ನಿರೀಕ್ಷಿತ ಲಾಭ.

Advertisement

ಕನ್ಯಾ: ಕೈಗೊಂಡಿರುವ ವೃತ್ತಿಯಲ್ಲಿ ಸ್ಥಿರವಾಗುವ ಪ್ರಯತ್ನ. ಸಹೋದ್ಯೋಗಿಗಳಿಂದ ಪ್ರತಿಭೆಗೆ ಗೌರವ. ತಂದೆಯ ಕಡೆಯ ಹಿರಿಯರ ಸಹಕಾರ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

ತುಲಾ: ಕಾಗದದ ಹುಲಿಗಳಿಗೆ ಹೆದರಬೇಡಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಹಿತಶತ್ರುಗಳಿಗೆ ಸೋಲು ಸನ್ನಿಹಿತ.ಗುರು ಸ್ಥಾನದಲ್ಲಿರುವ ಹಿರಿಯರ ಆಗಮನ. ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಮಾಧಾನ.

ವೃಶ್ಚಿಕ: ಪ್ರತಿಕೂಲ ವಾತಾವರಣದಲ್ಲಿ ದೇಹ, ಮನಸ್ಸುಗಳ ಸ್ವಾಸ್ಥ್ಯ ಕಾಯ್ದುಕೊಂಡ ಸಮಾ
ಧಾನ. ಉದ್ಯಮಿಗಳಿಗೆ ಕಡಿಮೆಯಾಗಿರುವ ಪೈಪೋಟಿ. ಸರಕಾರಿ ನೌಕರರಿಗೆ ಕೆಲಸದ ಭಾರದ ಆತಂಕ. ಸಹಕಾರಿ ಸಂಸ್ಥೆಗಳ ತಾತ್ಕಾಲಿಕ ಸಮಸ್ಯೆ ನಿವಾರಣೆ.

ಧನು: ಪಟ್ಟುಬಿಡದ ಪ್ರಯತ್ನದಿಂದ ಅಂತಿಮವಾಗಿ ಕಾರ್ಯಸಾಧನೆ. ಸಹೋ ದ್ಯೋಗಿಗಳಿಗೆ ಹರ್ಷ. ಬಾಲ್ಯದ ಒಡನಾಡಿಯ ಸಣ್ಣ ಉದ್ಯಮ ಘಟಕ ಪ್ರಗತಿಯಲ್ಲಿ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ.

ಮಕರ: ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಗಿಸುವ ಪ್ರಯತ್ನ ಯಶಸ್ವಿ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.

ಕುಂಭ: ನೆಪಮಾತ್ರದ ರಜಾದಿನ ಮುಗಿದ ಬಳಿಕ ರಂಗಪ್ರವೇಶ. ಉದ್ಯೋಗ ಸ್ಥಾನದಲ್ಲಿ ಹಲವರಿಗೆ ಮಾರ್ಗದರ್ಶನ. ಏಕಕಾಲಕ್ಕೆ ಹಲವು ಕರ್ತವ್ಯಗಳ ಒತ್ತಡ. ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯಮದ ಉತ್ಪನ್ನಗಳ ಗ್ರಾಹಕರಿಂದ ನಿರೀಕ್ಷೆ ಮೀರಿದ ಬೇಡಿಕೆಗಳು.

ಮೀನ: ಸಪ್ತಾಹ ಆರಂಭದ ದಿನ ಹಲವು ಕಾರ್ಯಗಳ ಒತ್ತಡ. ಏಕಕಾಲಕ್ಕೆ ಹಲವು ವಿಭಾಗಗಳನ್ನು ಗಮನಿಸುವ ಅನಿವಾರ್ಯತೆ. ಸರಕಾರಿ ಇಲಾಖೆಗಳವರ ಸಕಾರಾತ್ಮಕ ಸ್ಪಂದನ.ಕಾರ್ಯ ನಿರ್ವಹಣೆಗೆ ಸಾರ್ವಜನಿಕರ ಪ್ರಶಂಸೆ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ. ಮನೆಯಲ್ಲಿ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next