Advertisement

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

06:40 PM Apr 28, 2024 | Suhan S |

ಮೇಷ:  ಉದ್ಯೋಗ ಸ್ಥಾನದಲ್ಲಿ  ಸ್ವಲ್ಪ ಅಹಿತಕರದ ಅನುಭವ. ಉದ್ಯಮದ  ವ್ಯಾಪ್ತಿ ವಿಸ್ತರಣೆ ಕಾರ್ಯ ಆರಂಭ. ಹಣದ ಬೆಳೆಗಳಿಗೆ ಯೋಗ್ಯ ಬೆಲೆ.  ವಸ್ತ್ರ, ಆಭರಣ ಖರೀದಿಗೆ ಧನವ್ಯಯ. ಲೇವಾದೇವಿ ವ್ಯವಹಾರದಲ್ಲಿ ಕನಿಷ್ಠ ಲಾಭ.

Advertisement

ವೃಷಭ: ವ್ಯವಹಾರಕ್ಕೆ ಅನಿರೀಕ್ಷಿತವಾಗಿ ಒದಗಿಬಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಖಾತೆಗಳ ಬದಲಾವಣೆ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ.  ಧಾರ್ಮಿಕ ಕ್ಷೇತ್ರಕ್ಕೆ ಭೇಟಿ. ಅಸಹಾಯಕ ವೃದ್ಧರಿಗೆ ನೆರವು.

ಮಿಥುನ: ವೃದ್ಧಿಯಾದ ಆತ್ಮವಿಶ್ವಾಸ. ಉದ್ಯೋಗದಲ್ಲಿ ಮೇಲ ಧಿಕಾರಿಗಳಿಗೆ ತೃಪ್ತಿ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲದ ದಿನ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ.

ಕರ್ಕಾಟಕ: ಉದ್ಯೋಗದಲ್ಲಿ ಸ್ಥಿರವಾಗುವ ಸಾಧ್ಯತೆ.  ದೂರದಲ್ಲಿರುವ ಆಪ್ತರಿಂದ  ಸಕಾಲಿಕ ಸಹಾಯ. ವ್ಯವಹಾರ ಸಂಬಂಧ ಆನ್‌ಲೈನ್‌ ಸಂವಾದ ಯಶಸ್ವಿ. ವಿದ್ಯಾರ್ಥಿಗಳಿಗೆ ರಜಾದಿನಗಳ ಸದುಪಯೋಗಕ್ಕೆ ಮಾರ್ಗದರ್ಶನ.

ಸಿಂಹ: ಸಮಯೋಚಿತ ಪ್ರಯತ್ನಗಳಿಂದ ಯಶಸ್ಸು.  ಉದ್ಯೋಗದಲ್ಲಿ   ಪ್ರಗತಿ.  ಹೃದಯಾಂತರಾಳದ  ಪ್ರಾರ್ಥನೆಯಿಂದ ದೇವತಾನುಗ್ರಹ ಪ್ರಾಪ್ತಿ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಭರವಸೆ. ಹಿರಿಯರ ಆರೋಗ್ಯ ಸುಧಾರಣೆ‌.

Advertisement

ಕನ್ಯಾ: ಅವಿವಾಹಿತರಿಗೆ ವಿವಾಹದ ಪ್ರಯತ್ನ.ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಹೊಲಿಗೆ, ಮರದ ಕೆಲಸ ಬಲ್ಲವರಿಗೆ  ಶೀಘ್ರ ಉದ್ಯೋಗ ಪ್ರಾಪ್ತಿ.  ಗೃಹಿಣಿಯರ ಸೊÌàದ್ಯೋಗ ಯೋಜನೆ ಪ್ರಗತಿ.

ತುಲಾ: ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ.  ಉದ್ಯೋಗದಲ್ಲಿ ಯಥಾಸ್ಥಿತಿ.ಮಕ್ಕಳ ವಿದ್ಯಾರ್ಜನೆ ಆಸಕ್ತಿ ವೃದ್ಧಿಯತ್ತ ಗಮನ ಅವಶ್ಯ.  ಕೃಷಿ, ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಆಸಕ್ತಿ. ವ್ಯವಹಾರದ ಸಂಬಂಧ ತುರ್ತು ಪ್ರಯಾಣ ಸಂಭವ.

ವೃಶ್ಚಿಕ:  ತಾಳ್ಮೆಯ  ವರ್ತನೆಯಿಂದ ಹಿರಿಯರ ಒಲವು ಗಳಿಸಿ.  ಉದ್ಯೋಗ, ವ್ಯವಹಾರ ಕ್ಷೇತ್ರ ಗಳಲ್ಲಿ  ಗಣನಾರ್ಹ ಸುಧಾರಣೆ. ವ್ಯವಹಾರದ ಸಂಬಂಧ  ಮಾತುಕತೆ ಸಫಲ. ಹಿರಿಯರ ಆರೋಗ್ಯ ಪ್ರಕೃತಿ ಚಿಕಿತ್ಸೆಯಿಂದ  ಸುಧಾರಣೆ.

ಧನು: ಅಕಸ್ಮಾತ್‌  ಸಹಾಯದಿಂದ ಸಮಸ್ಯೆ ಪರಿಹಾರ.  ದಂಪತಿಗಳ ನಡುವೆ ಅನುರಾಗ ವೃದ್ಧಿ.ಕುಶಲಕರ್ಮಿಗಳಿಗೆ   ಶೀಘ್ರ ಉದ್ಯೋಗ ಪ್ರಾಪ್ತಿ. ಹೈನು, ತೋಟಗಾರಿಕೆ ವೃದ್ಧಿಯಲ್ಲಿ ಆಸಕ್ತಿ.  ಹಿರಿಯರು, ಗೃಹಿಣಿಯರು,  ಮಕ್ಕಳಿಗೆ ಸಂತಸದ ವಾತಾವರಣ.

ಮಕರ: ಸಹೋದ್ಯೋಗಿಗಳಿಂದ ಸಹಕಾರ.  ಸಣ್ಣ ಉದ್ಯಮಿಗಳ ಆದಾಯ ಹೆಚ್ಚಳ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಪ್ರಚಂಡ  ಯಶಸ್ಸು. ಹಿರಿ ಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಉತ್ತಮ.

ಕುಂಭ: ಆವಶ್ಯಕತೆಯುಳ್ಳವರಿಗೆ ಸಹಾ ಯ  ಮಾಡುವ ಅವಕಾಶ. ಕಿರಿಯರಿಗೆ ಮಾರ್ಗ ದರ್ಶನ, ಹಿರಿಯರಿಗೆ ಸಂದಭೋìಚಿತ  ಸಲಹೆ. ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಗೌರವ ಮತ್ತು ಜನಪ್ರಿಯತೆ ವೃದ್ಧಿ .

ಮೀನ:  ಉದ್ಯೋಗದಲ್ಲಿ  ವಿಶೇಷ  ಸಾಧನೆ, ವ್ಯವಹಾರದಲ್ಲಿ ಅಪರಿಮಿತ  ಮುನ್ನಡೆ. ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಿಂದ ಅನುಕೂಲದ ಸ್ಪಂದನ.ಬಾಕಿ ಕೆಲಸಗಳನ್ನು ಮುಗಿಸುವ ಪ್ರಯತ್ನ. ದಂಪತಿಗಳ ನಡುವೆ ಅನುರಾಗ ವೃದ್ಧಿ

Advertisement

Udayavani is now on Telegram. Click here to join our channel and stay updated with the latest news.

Next