Advertisement

Horoscope: ಈ ರಾಶಿಯವರಿಂದು ಕುಟುಂಬದ ಸಮಗ್ರ ಏಳಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ.

07:28 AM Oct 21, 2023 | Team Udayavani |

ಮೇಷ: ಮಿಶ್ರ ಫ‌ಲಗಳನ್ನು ಕಾಣುವಿರಿ. ದೈವಾನು ಗ್ರಹ ಚೆನ್ನಾಗಿದೆ. ಆಪ್ತರ ಭೇಟಿಯಿಂದ ಸಮಾಧಾನ. ಉದ್ಯೋಗ ಕ್ಷೇತ್ರದಲ್ಲಿ ಯಥಾಸ್ಥಿತಿ ಮುಂದುವರಿಕೆ. ಸರಕಾರಿ ಅಧಿಕಾರಿಗಳಿಗೆ ಅನಿರೀಕ್ಷಿತ ಸುದ್ದಿ ಉದ್ಯಮಿಗಳಿಗೆ ನೌಕರರ ಸಮಸ್ಯೆ, ಆದರೆ ಉತ್ಪನ್ನಗಳಿಗೆ‌ ಜನಪ್ರಿಯತೆ.

Advertisement

ವೃಷಭ: ಹಬ್ಬದ ಸಂಭ್ರಮದಲ್ಲಿ ಉದ್ಯೋಗ, ವ್ಯವಹಾರಗಳತ್ತ ಗಮನ. ಉದ್ಯೋಗದಲ್ಲಿ ತೃಪ್ತಿ. ಉದ್ಯಮಕ್ಕೆ ಸಂಬಂಧಿಸಿದಂತೆ ಹಳೆಯ ಸಮಸ್ಯೆಯೊಂದು ಉಲ್ಬಣ, ಸಮರ್ಥರ ಮಧ್ಯಸ್ಥಿಕೆಯಿಂದ ಶಮನ. ವಿತರಕರ ಜಾಲ ಹಾಗೂ ಗ್ರಾಹಕರ ಸಂಖ್ಯೆ ವಿಸ್ತರಣೆ.

ಮಿಥುನ: ಗಣೇಶ, ದುರ್ಗೆಯರ ಆರಾಧನೆಯಿಂದ ತಳಮಳ ದೂರ. ಉದ್ಯೋಗದಲ್ಲಿ ಯಥಾಸ್ಥಿತಿ ಮುಂದುವರಿಕೆ. ಹಿತಶತ್ರುಗಳ ಬಾಧೆಯಿಂದ ಅಭಿವೃದ್ಧಿಗೆ ತೊಡಕು. ಆಪ್ತರಿಂದ ಸಕಾಲದಲ್ಲಿ ನೆರವು ಲಭ್ಯ. ಸ್ವಂತ ಉದ್ಯಮ ಮಂದಗತಿಯಲ್ಲಿ ಮುನ್ನಡೆ.

ಕರ್ಕಾಟಕ: ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಪ್ರತಿಭೆಗೆ ತಕ್ಕ ಮನ್ನಣೆ. ಆತ್ಮೀಯರಿಂದ ಸಹಕಾರ. ಉದ್ಯಮ ರಂಗದಲ್ಲಿ ಹೊಸ ಸಮಸ್ಯೆಗಳು ಉದ್ಭವ. ವಾಸಸ್ಥಾನ ವಿಸ್ತರಣೆಗೆ ಯೋಜನೆ.

ಸಿಂಹ: ಸಾಹಸದ ಮನಸ್ಥಿತಿಯಲ್ಲಿ ಮುನ್ನುಗ್ಗು ವಾಗ ಸಣ್ಣ ಆತಂಕ. ಉದ್ಯೋಗದಲ್ಲಿ ಯಥಾ ಸ್ಥಿತಿ. ಆಪತ್ತಿನ ನಿವಾರಣೆಗೆ ಸಹಾಯ ಹಸ್ತ. ಉದ್ಯಮ ವಲಯದಲ್ಲಿ ಪೈಪೋಟಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಲಾಭ. ದೇವತಾ ಕಾರ್ಯದಲ್ಲಿ ಮಗ್ನರಾಗುವಿರಿ.

Advertisement

ಕನ್ಯಾ: ಮನೆಯಲ್ಲಿ ಮಂಗಲ ಕಾರ್ಯದ ಬಗ್ಗೆ ಚಿಂತನೆ. ಆತ್ಮೀಯ ಬಂಧುಗಳ ಆಗಮನ.ಹಬ್ಬದ ಆಚರಣೆಯ ಸಿದ್ಧತೆ. ಉದ್ಯೋಗ ಕ್ಷೇತ್ರದಲ್ಲಿ ಹರ್ಷದ ವಾತಾವರಣ. ಸರಕಾರಿ ಅಧಿಕಾರಿಗಳು ಮತ್ತು ನೌಕರರಿಗೆ ನೆಮ್ಮದಿ.ಗೃಹೋತ್ಪನ್ನಗಳ ಗ್ರಾಹಕರ ಸಂಖ್ಯೆ ವೃದ್ಧಿ.

ತುಲಾ: ಆಯ್ಕೆಯಲ್ಲಿ ಗೊಂದಲ ಬೇಡ. ಸ್ಥಿರ ಮನಸ್ಸಿನಿಂದ ಮುಂದುವರಿದರೆ ಯಶಸ್ಸು ನಿಸ್ಸಂಶಯ. ಸಂಸಾರದಲ್ಲಿ ಸಂತೃಪ್ತಿಯ ದಿನ. ದೇವಾಲಯ ದರ್ಶನ ಯೋಗ.ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾಬರಣ. ಸ್ವಂತ ಉದ್ಯಮದಲ್ಲಿ ನೌಕರರ ಸಮಸ್ಯೆ ನಿವಾರಣೆ.

ವೃಶ್ಚಿಕ: ಅಕಸ್ಮಾತ್‌ ಧನಲಾಭ. ಹೊಸ ಬಗೆಯ ಹೂಡಿಕೆಗಳಲ್ಲಿ ಆಸಕ್ತಿ. ವಿತ್ತ ಸಂಸ್ಥೆಗಳ ನೌಕರರಿಗೆ ಹರ್ಷದ ವಾತಾವರಣ. ಗೃಹೋಪಯೋಗಿ ಸಾಮಗ್ರಿಗಳ ಖರೀದಿ. ಉದ್ಯೋಗದಲ್ಲಿ ನೆಮ್ಮದಿ. ಮಕ್ಕಳ ಸ್ವಂತ ಉದ್ಯಮ ಅಭಿವೃದ್ಧಿ, ಆರ್ಥಿಕ ಸ್ಥಿತಿ ಸುಧಾರಣೆ.

ಧನು: ಕುಟುಂಬದ ಸಮಗ್ರ ಏಳಿಗೆಯಲ್ಲಿ ಮಹತ್ವದ ಪಾತ್ರ. ಉದ್ಯೋಗ ಕ್ಷೇತ್ರದಲ್ಲಿ ಪದೋ ನ್ನತಿ ಆಗದಿದ್ದರೂ ಆಯಕಟ್ಟಿನ ಸ್ಥಾನದಲ್ಲಿ ಪಾತ್ರ ನಿರ್ವಹಣೆ. ಕೃಷಿಯಲ್ಲಿ ಮಾಡಿದ ಸಾಧನೆಗೆ ಆಡಳಿತಗಾರರ ಮನ್ನಣೆ. ಸಮಾಜದ ಏಳಿಗೆಗೆ ನೀಡಿದ ಕೊಡುಗೆಗೆ ಜನಮನ್ನಣೆ.

ಮಕರ: ದೈವಾನುಗ್ರಹದಿಂದ ಕಷ್ಟಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ಕಾರ್ಯದ ಒತ್ತಡ. ಮೇಲಧಿಕಾರಿಗಳಿಂದ ಹಾಗೂ ಸಹೋದ್ಯೋಗಿಗಳಿಂದ ಸಹಾಯ. ಹಿರಿಯರಿಂದ ಸಕಾಲಿಕ ನೆರವು.ಮನೆಯಲ್ಲಿ ತೃಪ್ತಿಯ ವಾತಾವರಣ.

ಕುಂಭ: ಸೇವಾಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವಿಕೆಯನ್ನು ಹೆಚ್ಚಿಸಿಕೊಳ್ಳುವ ತವಕ. ಉದ್ಯೋಗದಲ್ಲಿ ಸಂತೃಪ್ತಿ. ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ.ಊರಿನ ಧಾರ್ಮಿಕ ಕೇಂದ್ರದ ಚಟುವಟಿಕೆಗಳ ಮುಂಚೂಣಿಯಲ್ಲಿ ಸೇವೆ. ಸದ್ಗ್ರಂಥಗಳ. ಪಾರಾಯಣ.

ಮೀನ: ಸೇವಾ ಕಾರ್ಯಗಳಿಂದ ಧನ್ಯತಾ ಭಾವ ಪ್ರಾಪ್ತಿ.ಉದ್ಯೋಗದಲ್ಲಿ ಮುನ್ನಡೆ.ಸಮಾಜದ ಧಾರ್ಮಿಕ ಕೇಂದ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ. ವಾಸಸ್ಥಾನದ ಅಭಿವೃದ್ಧಿಗೆ ವಿತ್ತಸಂಸ್ಥೆಯ ಪರ್ಯಾಪ್ತ ನೆರವು.ಒಡಹುಟ್ಟಿದವರ ಕ್ಷೇಮ ಚಿಂತನೆ. ಹತ್ತಿರದ ಬಂಧುವೊಬ್ಬರ ಅಭಿವೃದ್ಧಿ ಲಲಯೋಜನೆಗೆ ಪ್ರತ್ಯಕ್ಚ ಸಹಾಯ.

Advertisement

Udayavani is now on Telegram. Click here to join our channel and stay updated with the latest news.

Next