Advertisement

Horoscope Today: ಈ ರಾಶಿಯವರ ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ ಸಂಭವ

07:05 PM Oct 03, 2023 | Suhan S |

ಮೇಷ: ಮನೆಯಲ್ಲಿ ಅನುಕೂಲದ ಪರಿಸ್ಥಿತಿ. ಕಾರ್ಯಗಳು ಮುಗಿಯುವ ವಿಷಯದಲ್ಲಿ ಅನವಶ್ಯ ಆತಂಕ. ಉದ್ಯೋಗದ ಸ್ಥಾನದಲ್ಲಿ ಹಿತಕರ ವಾತಾವರಣ. ಮೇಲಧಿಕಾರಿಗಳಿಂದ ಪ್ರೋತ್ಸಾಹದ ಮಾತುಗಳು. ವಿತ್ತ ಸಂಸ್ಥೆಗಳಿಂದ ಅಪೇಕ್ಷಿತ ನೆರವು ಲಭ್ಯ.

Advertisement

ವೃಷಭ: ಕೆಲವು ಅನಿರೀಕ್ಷಿತ ಬೆಳವಣಿಗೆಗಳಾಗಬಹುದು. ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ ಸಂಭವ. ಸರಕಾರಿ ಉದ್ಯೋ ಗಿಗಳಿಗೆ ನಿಯೋಜಿತ ಹುದ್ದೆಯಲ್ಲಿ ವ್ಯತ್ಯಾಸ ಸಾಧ್ಯ. ಸ್ವಯಂ ವ್ಯವಹಾರಸ್ಥರಿಗೆ  ಪೈಪೋಟಿಯಲ್ಲಿ ಮೇಲುಗೈ.

ಮಿಥುನ: ಅಕಸ್ಮಾತ್‌ ಬೆಳವಣಿಗೆ ಗಳಿಂದ ವಿಚಲಿತರಾಗದಿರಿ. ಸಣ್ಣಪುಟ್ಟ ನಷ್ಟಗಳಿಗೆ ಸಿದ್ಧರಾಗಿರಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮಿಗಳ ಕೆಲವು ಉತ್ಪನ್ನಗಳಿಗೆ ಬೇಡಿಕೆ ಏರಿದರೆ ಇನ್ನು ಕೆಲವು ಬೇಡಿಕೆ ಕುಸಿತಕ್ಕೆ ಗುರಿಯಾಗುತ್ತವೆ.

ಕರ್ಕಾಟಕ: ಅಭಿವೃದ್ಧಿ ಕಾರ್ಯ ಗಳಿಗೆ ಕುಟುಂಬದ  ಎಲ್ಲ ಸದಸ್ಯರ ಸಹಕಾರ.  ಉದ್ಯೋಗ ಸ್ಥಾನದಲ್ಲಿ ಕೆಲಸದಲ್ಲಿ ತಲ್ಲೀನರಾಗಲು ಪ್ರೋತ್ಸಾಹ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಮಧ್ಯಮ ಲಾಭ. ಲೇವಾದೇವಿ  ವ್ಯವಹಾರಸœರಿಗೆ ಲಾಭ ತೃಪ್ತಿಕರ.

ಸಿಂಹ: ಕುಂಠಿತ ಕಾರ್ಯಗಳ ಪುನಶ್ಚೇತನ. ಉದ್ಯೋಗದಲ್ಲಿ ಮತ್ತೆ ಮೊದಲಿನ ಸ್ಥಾನಮಾನ ಲಭ್ಯ. ಸಹೋದ್ಯೋಗಿಗಳ ಹೃತ್ಪೋರ್ವಕ ಸಹಕಾರ.  ಅಪರೂಪದ ಮಿತ್ರರ ಭೇಟಿ. ಕಾರ್ಯ ವಿಸ್ತರಣೆ ಬಗ್ಗೆ ಸಮಾಲೋಚನೆ. ಲೇವಾದೇವಿ ವ್ಯವಹಾರಸ್ಥರಿಗೆ ಲಾಭ.

Advertisement

ಕನ್ಯಾ: ಮಿಶ್ರಫ‌ಲಗಳನ್ನು ಕಾಣುವಿರಿ. ಉದ್ಯೋಗಸ್ಥಾನದಲ್ಲಿ ತೃಪ್ತಿ. ವ್ಯವಹಾರದಲ್ಲಿ ಮಧ್ಯಮ ಲಾಭ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಸಾಧನಗಳ ದುರಸ್ತಿಗಾರರಿಗೆ ದುಡಿತಕ್ಕೆ ಸರಿಯಾಗಿ ಪ್ರತಿಫ‌ಲ ಲಭ್ಯ. ಆಭರಣ ತಯಾರಕರಿಗೆ ಉತ್ತಮ ಆದಾಯ.

ತುಲಾ: ಶುಭಾಶುಭ ಫ‌ಲಗಳನ್ನು ನಿರೀಕ್ಷಿಸದೆ ಮುಂದುವರಿಯಿರಿ.  ಆಪ್ತರಿಂದ ಸಕಾಲದಲ್ಲಿ ಸಹಾಯ ಲಭ್ಯ. ಪಶ್ಚಿಮದ ಕಡೆಯಿಂದ ಸಹಾಯ. ವಿದೇಶದಲ್ಲಿರುವ ಬಂಧುಗಳಿಂದ ಶುಭ ವಾರ್ತೆ. ವಸ್ತ್ರ ವ್ಯಾಪಾರಿಗಳು, ಉಡುಪು ತಯಾರಕರು  ಲಾಭ.

ವೃಶ್ಚಿಕ: ಅನಿರೀಕ್ಷಿತ ಧನಲಾಭ. ಮಕ್ಕಳಿಗೆ  ಹು¨ªೆಯಲ್ಲಿ ಪದೋ ನ್ನತಿ. ಹಿರಿಯರ ಆರೋಗ್ಯ ಸುಧಾರಣೆ. ಕೃಷಿ, ಗೃಹೋದ್ಯಮಗಳಲ್ಲಿ ಆಸಕ್ತರಾಗಿರುವವರ ಆದಾಯ ವೃದ್ಧಿ. ದೈವ ಚಿಂತನೆಯ ಕಡೆಗೆ ಒಲವು. ಹತ್ತಿರದ ದೇವತಾ ಸ್ಥಾನಕ್ಕೆ ಭೇಟಿಯ ಸಾಧ್ಯತೆ.

ಧನು: ಉದ್ಯೋಗದಲ್ಲಿ  ಆತ್ಮ ತೃಪ್ತಿ ಹಾಗೂ ಮೇಲಿನವರಿಗೆ ಸಮಾಧಾನ. ಸ್ವಂತ ವ್ಯವಹಾರಗಳು ತೃಪ್ತಿಕರ. ತಾಳ್ಮೆ, ಜಾಣ್ಮೆಗಳಿಂದ ಕಾರ್ಯಸಾಧನೆ. ಗೃಹೋತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಕೃಷಿಕರ ಶ್ರಮಕ್ಕೆ ಪ್ರತಿಫ‌ಲ ಮಧ್ಯಮ. ಚರ್ಮೋದ್ಯಮ ಸಾಮಗ್ರಿಗಳಿಗೆ ಬೇಡಿಕೆ ಏರಿಕೆ.

ಮಕರ: ಹಲವು ಬಗೆಯ ಸತ್ವ ಪರೀಕ್ಷೆಗಳ ಸಮಯ. ದೈವಾನು ಗ್ರಹದ ಮೂಲಕ ಸಂಕಟಗಳಿಂದ ಪಾರು. ಲೆಕ್ಕ ಪರಿಶೋಧನೆ, ಆದಾಯ ತೆರಿಗೆ ಇಲಾಖೆ ಮೊದಲಾದ ಉದ್ಯೋಗಸ್ಥರಿಗೆ ಸಮಯದೊಂದಿಗೆ ಮೇಲಾಟ.

ಕುಂಭ: ಮನೆಯಲ್ಲಿ ಹಿರಿಯರ ಸಹಿತ ಎಲ್ಲರ ಆರೋಗ್ಯ ಉತ್ತಮ. ನಿರಾತಂಕದ ವಾತಾವರಣದಲ್ಲಿ ನಿತ್ಯದ ದುಡಿಮೆ. ಕಾರ್ಯಪೂರ್ತಿಗೆ ಎಲ್ಲರ ಸಂಪೂರ್ಣ ಸಹಕಾರ. ಹಳೆಯ ಸಮಸ್ಯೆ ಯೊಂದಕ್ಕೆ ವಿಚಿತ್ರ ರೀತಿಯಲ್ಲಿ ಪರಿಹಾರ.

ಮೀನ: ಯೋಜನೆಗಳು ಗುರಿ ಮುಟ್ಟಿದ ಸಂತೃಪ್ತಿ. ಗುರುಸೇವೆ, ದೇವತಾರಾಧನೆಯ ಫ‌ಲಪ್ರಾಪ್ತಿ ಹಳೆಯ ಒಡನಾಡಿಯ ಭೇಟಿಯಿಂದ ಸಮಸ್ಯೆ ಪರಿಹಾರ. ಸರಕಾರಿ ಕಾರ್ಯಾಲಯಗಳಲ್ಲಿ ಉತ್ತಮ ಸ್ಪಂದನೆಯಿಂದ  ಅಪೇಕ್ಷಿತ ಕಾರ್ಯಗಳು ಸುಗಮ.

Advertisement

Udayavani is now on Telegram. Click here to join our channel and stay updated with the latest news.

Next