Advertisement

Daily Horoscope: ದೇವತಾನುಗ್ರಹದಿಂದ ಆತಂಕಗಳು ದೂರ, ಉದ್ಯೋಗ ಕ್ಷೇತ್ರದಲ್ಲಿ ವಿಶಿಷ್ಟ ಅನುಭವ

07:16 AM Sep 09, 2023 | Team Udayavani |

ಮೇಷ: ಆಯೋಜಿತ ಕಾರ್ಯಗಳಲ್ಲಿ ಕೊಂಚ ಹಿನ್ನಡೆ. ಉದ್ಯೋಗ ರಂಗದಲ್ಲಿ ವಿಘ್ನಗಳ ನಿವಾರಣೆಯಾಗಿ ಕಾರ್ಯಾಚರಣೆ ಸುಲಭ. ವ್ಯವಹಾರ ಕ್ಷೇತ್ರದಲ್ಲಿ ಅಪೇಕ್ಷಿತ ನೆರವು ಸಕಾಲದಲ್ಲಿ ಕೈಸೇರಿ ನೆಮ್ಮದಿ. ದೇವತಾರ್ಚನೆ, ಅಧ್ಯಾತ್ಮ ಚಿಂತನೆಯಲ್ಲಿ ಆಸಕ್ತಿ.

Advertisement

ವೃಷಭ: ನೂತನ ಗೃಹ ನಿರ್ಮಾಣದ ಕುರಿತು ಯೋಚಿಸುತ್ತಿರುವವರಿಗೆ ಶುಭ ಸಮಾಚಾರ. ಉದ್ಯೋಗಸ್ಥರಿಗೆ ತಾತ್ಕಾಲಿಕ ಹಿನ್ನಡೆ. ವ್ಯವಹಾರಸ್ಥರಿಗೆ ಆದಾಯ ಸ್ಥಿರ. ಗೆಳೆಯರಿಂದ ಅಪೇಕ್ಷಿತ ನೆರವು ಲಭ್ಯ. ಹಿರಿಯರ ಆರೋಗ್ಯದ ಕಡೆಗೆ ವಿಶೇಷ ಲಕ್ಷ್ಯ.

ಮಿಥುನ: ದೇವತಾನುಗ್ರಹದಿಂದ ಆತಂಕಗಳು ದೂರ. ಪರ್ಯಾಯ ಚಿಕಿತ್ಸೆಯಿಂದ ಆರೋಗ್ಯ ಸುಧಾರಣೆ. ಉದ್ಯೋಗ ಕ್ಷೇತ್ರದಲ್ಲಿ ವಿಶಿಷ್ಟ ಅನುಭವ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಯೋಚನೆ. ಹೊಸ ಪಾಲುದಾರರ ಸೇರ್ಪಡೆ ಸಂಭವ. ಹಿರಿಯರಿಗೆ ನೆಮ್ಮದಿ.

ಕರ್ಕಾಟಕ: ಮನೆಮಂದಿಯೆಲ್ಲರಿಗೂ ಉತ್ತಮ ಆರೋಗ್ಯ.ಉದ್ಯೋಗ ಕ್ಷೇತ್ರದಲ್ಲಿ ನಿಧಾನವಾದರೂ ಮುನ್ನಡೆಯ ಸಮಾಧಾನ. ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶಗಳನ್ನು ಅರಸುವವರಿಗೆ ಅನುಕೂಲದ ವಾತಾವರಣ. ವಿವಾಹ ಅಪೇಕ್ಷಿಗಳಿಗೆ ಶುಭ ಸಮಾಚಾರ.

ಸಿಂಹ: ನಿಮ್ಮ ಯಶಸ್ಸು ನೋಡಿ ಹಿತಶತ್ರುಗಳಿಗೆ ಹೊಟ್ಟೆಕಿಚ್ಚು. ವೃತ್ತಿಪರರ ಜಾಣ ನಡೆಗೆ ಗೆಲುವು. ಹಿಂತಿರುಗಿ ನೋಡಿ ಮುಂದಿನ ನಡೆಯನ್ನು ಸರಿಪಡಿಸಿಕೊಳ್ಳುತ್ತಾ ಮುಂದಡಿಯಿಡುವಿರಿ. ಸ್ವಂತ ಉದ್ಯಮಿಗಳಿಗೆ ಪಂಥಾಹ್ವಾನದ ವಾತಾವರಣ.

Advertisement

ಕನ್ಯಾ: ದಿನನಿತ್ಯದ ವ್ಯವಹಾರಗಳು ಸುಗಮ ವಾಗಿರುತ್ತವೆ. ಉದ್ಯೋಗ ರಂಗದಲ್ಲಿ ಹೊಣೆ ಗಾರಿಕೆಗಳ ನಿರ್ವಹಣೆಯಲ್ಲಿ ಯಶಸ್ಸು. ಕರ್ತವ್ಯ ನಿರ್ವಹಣೆಗೆ ಮೇಲಧಿಕಾರಿಗಳ ಪ್ರಶಂಸೆ. ಸ್ವಂತ ವ್ಯವಹಾರ ಮಾಡಿಕೊಂಡಿರುವವರಿಗೆ ಲಾಭ. ಶುಭಫ‌ಲಗಳ ದಿನ.

ತುಲಾ: ರಕ್ತ, ಶ್ವಾಸಕೋಶ ಸಂಬಂಧಿ ಸಮಸ್ಯೆ ಗಳಿಂದ ಪೀಡಿತರಾಗಿರುವವರ ಆರೋಗ್ಯ ಸುಧಾರಣೆ. ಉದ್ಯೋಗ, ವ್ಯವಸಾಯ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಮಿಶ್ರ ಫ‌ಲ. ಹಿರಿಯರಿಂದ, ಆಪ್ತರಿಂದ ಸಕಾಲದಲ್ಲಿ ಸಹಾಯ ಲಭ್ಯ.

ವೃಶ್ಚಿಕ: ಗಾಳಿಸುದ್ದಿಗಳನ್ನು ಹರಡುವವರ ಬಗ್ಗೆ ಎಚ್ಚರ. ಉದ್ಯೋಗಸ್ಥರಿಗೆ ಮಧ್ಯಮ ಪ್ರಗತಿ. ಪಾಲುದಾರಿಕೆ ವ್ಯವಹಾರಸ್ಥರು ಪರಸ್ಪರ ಪಾರದರ್ಶಕತೆ, ಪ್ರಾಮಾಣಿಕತೆ ಕಾಯ್ದುಕೊಳ್ಳುವುದು ಅಗತ್ಯ. ದೂರದ ಬಂಧುವಿನಿಂದ ಉಪಯುಕ್ತ ಸಲಹೆ.

ಧನು: ಆರೋಗ್ಯ ತಕ್ಕಮಟ್ಟಿಗೆ ಉತ್ತಮ. ನೂತನ ಗೃಹ ನಿರ್ಮಾಣದ ಬಗ್ಗೆ ಚಿಂತನೆ. ಅನಿರೀಕ್ಷಿತ ಧನಾಗಮ ಯೋಗವಿದೆ. ವ್ಯವಹಾರ ಕ್ಷೇತ್ರ ವಿಸ್ತರಣೆ ಕುರಿತು ಮುಂದುವರಿದ ವಿಮರ್ಶೆ. ದೀರ್ಘ‌ ಕಾಲದಿಂದ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ.

ಮಕರ: ಬಯಸಿದ್ದು ಕೈಗೆ ಬರುವ ಸಮಯ ಸನ್ನಿಹಿತ. ಹಿತೈಷಿಗಳಿಂದ ಅಪೇಕ್ಷಿತ ನೆರವು ಲಭ್ಯ. ದೇವತಾರಾಧನೆಯಿಂದ ಶುಭ ಫ‌ಲ. ಬಂಧು ವರ್ಗದವರಿಂದ ಅಯಾಚಿತ ನೆರವು. ದ್ರೋಹ ಬಗೆದವರನ್ನು ಶಪಿಸದೆ ಕ್ಷಮಿಸುವುದರಿಂದ ಮನಸ್ಸಿಗೆ ನೆಮ್ಮದಿ.

ಕುಂಭ: ಆರೋಗ್ಯ ವೃದ್ಧಿಯಾಗಿ ಕಾರ್ಯರಂಗಕ್ಕಿಳಿಯಲು ವಿಶೇಷ ಹುಮ್ಮಸ್ಸು. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ, ಸಹೋ ದ್ಯೋಗಿಗಳಿಂದ ಪ್ರಶಂಸೆ. ಕಾರ್ಯಕ್ಷೇತ್ರ ವಿಸ್ತರಣೆ ಸಂಭವ. ನಿರೀಕ್ಷಿತ ಸಹಾಯ ಸಕಾಲದಲ್ಲಿ ಲಭ್ಯ.

ಮೀನ: ಚಡಪಡಿಕೆಯಿಂದ ಸದ್ಯಕ್ಕೆ ಮುಕ್ತಿ. ಸಹೋದ್ಯೋಗಿಗಳಿಂದ, ಸಹಾಯಕರಿಂದ ಸಕಾಲಿಕ ಬೆಂಬಲ ಲಭಿಸಿ ಮನಸ್ಸು ನಿರಾಳ. ಶಿವ, ವಿಷ್ಣು, ಆಂಜನೇಯರ ಉಪಾಸನೆಯಿಂದ ಶನಿಕಾಟ ಶಮನ. ವಾಹನ, ಆಸ್ತಿ, ಗೃಹ ವ್ಯವಹಾರ ಮಧ್ಯಸ್ಥಿಕೆ ನಡೆಸುವವರಿಗೆ ಮಧ್ಯಮ ಲಾಭ. ಗೃಹಿಣಿಯರಿಂದ ಪತಿಯ ವ್ಯವಹಾರಕ್ಕೆ ನೆರವು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

Advertisement

Udayavani is now on Telegram. Click here to join our channel and stay updated with the latest news.

Next