Advertisement

Daily Horoscope: ಹಿತಶತ್ರುಗಳಿಂದ ವಂಚನೆ ಸಂಭವ, ಹಲವು ರಂಗಗಳಿಂದ ಕೆಲಸದ ಒತ್ತಡ

07:28 AM Sep 30, 2023 | Team Udayavani |

ಮೇಷ: ಲಾಭ- ನಷ್ಟದ ಲೆಕ್ಕಾಚಾರವಿಲ್ಲದೆ ಮುಂದು ವರಿಯುವಿರಿ. ದೀರ್ಘ‌ ಕಾಲದಿಂದ ಬಾಕಿಯುಳಿದಿದ್ದ ವ್ಯಾವಹಾರಿಕ ಸಮಸ್ಯೆಗೆ ಪರಿಹಾರ. ಪಾಲುದಾರಿಕೆಯಲ್ಲಿ ಪಾರದರ್ಶಕತೆ ಉಳಿಸಿಕೊಳ್ಳಿ. ಉದ್ಯೋಗಸ್ಥರಿಂದ ಮಹತ್ವದ ಕಾರ್ಯ ಸುಲಭವಾಗಿ ನಿರ್ವಹಣೆ.

Advertisement

ವೃಷಭ: ನಿರೀಕ್ಷಿತ ಆರ್ಥಿಕ ಸಹಾಯ ಸಕಾಲ ದಲ್ಲಿ ಕೈಸೇರಿ ಕಾರ್ಯಾನುಷ್ಠಾನ ಸುಲಭ. ಉದ್ಯೋಗಸ್ಥರಿಗೆ ಹೆಚ್ಚಿನ ಜವಾಬ್ದಾರಿ. ವ್ಯವಹಾರ ಕ್ಷೇತ್ರ ವಿಸ್ತರಣೆಗೆ ಹೊಸ ಪ್ರಸ್ತಾವ ಮಂಡನೆ. ಯಂತ್ರೋಪಕರಣ ಮಾರಾಟಗಾರರಿಗೆ ಮಧ್ಯಮ ಲಾಭ.

ಮಿಥುನ: ಹಿತಶತ್ರುಗಳಿಂದ ವಂಚನೆ ಸಂಭವ. ಹಲವು ರಂಗಗಳಿಂದ ಕೆಲಸದ ಒತ್ತಡ. ದೈವಾನುಗ್ರಹದಿಂದಾಗಿ ಕಾರ್ಯ ಮುಗಿಸುವುದರಲ್ಲಿ ಯಶಸ್ಸು. ಸಾಹಿತ್ಯ ಸಾಧಕರಿಗೆ ಯಶಸ್ಸು ಮಧ್ಯಮ. ಸಂಗೀತ ಶ್ರವಣ, ಯೋಗ, ಸತ್ಸಂಗಗಳಲ್ಲಿ ಆಸಕ್ತಿ ವೃದ್ಧಿ.

ಕರ್ಕಾಟಕ: ದೀರ್ಘ‌ಕಾಲದಿಂದ ಕಾಡುತ್ತಿದ್ದ ಆರೋಗ್ಯದ ಸಮಸ್ಯೆ ಸುಲಭವಾಗಿ ಪರಿಹಾರ. ದೂರದ ಬಂಧುಗಳ ಆಗಮನ. ಉದ್ಯೋಗ ಕ್ಷೇತ್ರದ ಸಾಧನೆಯಿಂದ ಸಹೋದ್ಯೋಗಿಗಳಿಗೆ ಹರ್ಷ. ಸರಕಾರಿ ಕಾರ್ಯಾಲಯಗಳಲ್ಲಿ ಆಗಬೇಕಾಗಿದ್ದ ಕೆಲಸಗಳು ಸುಗಮ.

ಸಿಂಹ: ಎಲ್ಲ ರಂಗಗಳಲ್ಲೂ ಮುನ್ನಡೆ. ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ದೊಡ್ಡ ಪ್ರಮಾಣದಲ್ಲಿ ವೇತನ ಏರಿಕೆ. ಸ್ವಯಂ ಉದ್ಯಮಿಗಳ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಹೊಸ ವ್ಯವಹಾರ ಕ್ಷೇತ್ರಕ್ಕೆ ಪದಾರ್ಪಣೆಯ ಬಗ್ಗೆ ಚಿಂತನೆ.

Advertisement

ಕನ್ಯಾ: ಆರೋಗ್ಯ ಉತ್ತಮ, ಆದರೆ ಎಚ್ಚರಿಕೆ ಅವಶ್ಯ. ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್ಸ್‌ ಸಾಮಗ್ರಿ ವ್ಯಾಪಾರಿಗಳಿಗೆ ಮತ್ತು ದುರಸ್ತಿ ಮಾಡುವವರಿಗೆ ಹೇರಳ ಲಾಭ. ಹಿರಿಯರ ಸಲಹೆಯನ್ನು ಪಾಲಿಸುವುದರಿಂದ ಯಶಸ್ಸು ಸುಲಭ. ದೇವತಾರ್ಚನೆ, ಶಾಸ್ತ್ರ ಅಧ್ಯಯನದಲ್ಲಿ ಆಸಕ್ತಿ.

ತುಲಾ: ಮನೆಯಲ್ಲಿ ಎಲ್ಲರ ಆರೋಗ್ಯ ಸುಮಾರಾಗಿ ತೃಪ್ತಿಕರ. ಹಿರಿಯ ಬಂಧುಗಳಿಂದ ಶುಭ ಸಮಾಚಾರ. ಸರಕಾರಿ ನೌಕರರಿಗೆ ವರ್ಗಾವಣೆಯ ಚಿಂತೆ. ಧಾರ್ಮಿಕ ವಿಚಾರ ಅಧ್ಯಯನದಲ್ಲಿ ಆಸಕ್ತಿ. ಹಳೆಯ ಸಮಸ್ಯೆಯೊಂದು ಪರ್ಯಾಯ ಚಿಕಿತ್ಸೆಯಿಂದ ಪರಿಹಾರ.

ವೃಶ್ಚಿಕ: ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಉದ್ಯೋಗ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಶಂಸೆ. ಸಹೋದ್ಯೋಗಿಗಳಿಂದ ಸಹಕಾರ. ಉದ್ಯಮಿಗಳ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ. ಮಹಿಳಾ ಉದ್ಯಮಿಗಳ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

ಧನು: ತಾಳಿದವನು ಬಾಳಿಯಾನು ಎಂಬಂತೆ ಇದುವರೆಗಿನ ತಾಳ್ಮೆ ಫ‌ಲಿಸುವ ಸಮಯ. ಆರೋಗ್ಯ ಸುಧಾರಣೆ. ನೇತ್ರ ವೈದ್ಯರೊಂದಿಗೆ ಸಮಾಲೋಚನೆ. ಸಂಗಾತಿಯ ಕ್ಷೇಮ ಚಿಂತನೆಗೆ ಸಮಯ ಮೀಸಲು. ಹತ್ತಿರದ ಧಾರ್ಮಿಕ ಕ್ಷೇತ್ರ ದರ್ಶನ ಸಂಭವ.

ಮಕರ: ಹಿರಿಯ ಹಿತೈಷಿಯೊಬ್ಬರಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಕೆಲಸದ ಒತ್ತಡ. ಲೆಕ್ಕ ಪರಿಶೋಧಕರು, ಕಟ್ಟಡ ನಿರ್ಮಾಪಕರು ಮೊದಲಾದವರಿಗೆ ಸಮಯದೊಂದಿಗೆ ಮೇಲಾಟ. ಸಹೋದ್ಯೋಗಿಗಳಿಂದ ಸಹಕಾರ.

ಕುಂಭ: ಆದಾಯ ಸ್ಥಿರ. ಮುದ್ರಣ ಸಾಮಗ್ರಿ, ಸ್ಟೇಶನರಿ ಮೊದಲಾದ ವ್ಯವಹಾರಗಳನ್ನು ನಡೆಸುವವರಿಗೆ ಆದಾಯ ತೃಪ್ತಿಕರ. ಸಗಟು ವ್ಯಾಪಾರಿಗಳಿಗೆ ಪಾವತಿ ವಿಳಂಬದ ಸಮಸ್ಯೆ. ಸಾಮಾಜಿಕ ಕ್ಷೇತ್ರದಲ್ಲಿ ಜನಪ್ರಿಯತೆ ವೃದ್ಧಿ. ಉತ್ತರ ದಿಕ್ಕಿನಿಂದ ಶುಭ ಸಮಾಚಾರ.

ಮೀನ: ಆಪ್ತರಿಂದ ನಿರೀಕ್ಷಿತ ಸಹಾಯದೊಂದಿಗೆ ಅನಿರೀಕ್ಷಿತ ಸಹಾಯ ಪ್ರಾಪ್ತಿಯ ಯೋಗ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಸಾಧನೆಯಿಂದ ಗೌರವ ವೃದ್ಧಿ. ವ್ಯವಹಾರಗಳಲ್ಲಿ ಸರಕಾರಿ ಅಧಿಕಾರಿಗಳಿಂದ ಮತ್ತು ನೌಕರರಿಂದ ಅನುಕೂಲಕರವಾಗಿ ಸ್ಪಂದನೆ.ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ. ಮಹಿಳಾ ಉದ್ಯಮಿಗಳಿಗೆ ಅಕಸ್ಮಾತ್‌ ಧನ ಲಾಭ.ಮಕ್ಕಳ ಪರೀಕ್ಷೆಯ ತಯಾರಿ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next