Advertisement

Daily Horoscope: ಉದ್ಯೋಗಸ್ಥರಿಗೆ ನಾಳೆಯ ಪರಿಸ್ಥಿತಿಯ ಕುರಿತು ಅನವಶ್ಯ ಚಿಂತೆ

07:26 AM Sep 24, 2023 | Team Udayavani |

ಮೇಷ: ಏಕಾಗ್ರಚಿತ್ತದ ಪರಿಶ್ರಮದಿಂದ ಫ‌ಲಪ್ರಾಪ್ತಿ. ಮನೆಯಲ್ಲಿ ಎಲ್ಲರೂ ಆರೋಗ್ಯ ವಾಗಿರುವುದರಿಂದ ಉಲ್ಲಾಸದ ವಾತಾವರಣ. ಹತ್ತಿರದ ದೇವತಾ ಸನ್ನಿಧಿಗೆ ಭೇಟಿ. ಹಿರಿಯರಿಗೆ ನೆಮ್ಮದಿಯ ಅನುಭವ. ಅತಿಥಿ ಸತ್ಕಾರ ಯೋಗವೂ ಇರುವ ದಿನ.

Advertisement

ವೃಷಭ: ಸಂಭ್ರಮಾಚರಣೆಯ ವಾತಾವರಣ. ಮನೆಯಲ್ಲಿ ಎಲ್ಲರ ಆರೋಗ್ಯ ಸಮಾಧಾನಕರ. ನೂತನ ವಾಹನ ಖರೀದಿಯ ಬಗ್ಗೆ ಚಿಂತನೆ. ಅಪರೂಪದ ಬಂಧುಗಳ ಆಗಮನ. ವಿಹಾರ ಸ್ಥಾನವೊಂದನ್ನು ಸಂದರ್ಶಿ ಸುವ ಸಾಧ್ಯತೆ.ಸಂಗೀತ ಶ್ರವಣ, ಸತ್ಸಂಗದಲ್ಲಿ ಆಸಕ್ತಿ.

ಮಿಥುನ: ಭಾವನೆಗಳ ತಾಕಲಾಟವನ್ನು ನಿಯಂತ್ರಿಸಲು ಯತ್ನಿಸುವ ಪ್ರಯತ್ನದಲ್ಲಿ ಸಾಫ‌ಲ್ಯ. ಸಾಂಸಾರಿಕ ಜೀವನ ತೃಪ್ತಿಕರ. ಉದ್ಯೋಗಸ್ಥರಿಗೆ ವಿರಾಮದ ಮನಸ್ಥಿತಿಯ ಪರಿಣಾಮವಾಗಿ ಜಾಡ್ಯ. ಸ್ವಯಂ ಉದ್ಯಮಿಗಳಿಗೆ ಕಾರ್ಯರಂಗದಿಂದ ಅವಸರದ ಆಹ್ವಾನ.

ಕರ್ಕಾಟಕ: ದೈಹಿಕ, ಮಾನಸಿಕ ಆರೋಗ್ಯ ಉತ್ತಮ. ಮನೆಯಲ್ಲಿ ದೇವತಾ ಕಾರ್ಯದ ಸಡಗರ. ಉದ್ಯೋಗಸ್ಥರಿಗೆ ಮರುದಿನದ ಪೂರ್ವ ನಿರ್ಧಾರಿತ ಕಾರ್ಯದ ಬಗ್ಗೆ ಆತಂಕ. ಕೆಲವು ಬಗೆಯ ವಸ್ತುಗಳ ಮಾರಾಟಗಾರರಿಗೆ ಬಿಡುವಿಲ್ಲದಷ್ಟು ಬೇಡಿಕೆ ಪೂರೈಸುವ ತವಕ.

ಸಿಂಹ: ವಾರದ ಕೆಲಸಗಳೆಲ್ಲವನ್ನೂ ಮುಗಿಸಿದ ಸಮಾಧಾನದ ನಡುವೆ ಹೊಸ ಕಾರ್ಯ ಯೋಜನೆಯ ಚಿಂತನೆ. ಆಸ್ತಿ ಖರೀದಿ- ವಿಕ್ರಯ ಮಾತುಕತೆಗಳಲ್ಲಿ ಪ್ರಗತಿ. ವೃತ್ತಿಪರರಿಗೆ ವಿರಾಮ ಅಲಭ್ಯ. ಸಂಗೀತಾದಿ ಕಲೋಪಾಸಕರಿಗೆ ದೇವತಾ ಸನ್ನಿಧಿಯಲ್ಲಿ ಸೇವೆಗೆ ಅವಕಾಶ ಪ್ರಾಪ್ತಿ.

Advertisement

ಕನ್ಯಾ: ದೇವತಾರ್ಚನೆಯಲ್ಲಿ ಮನಸ್ಸು ಲೀನ. ಮನೆಯಲ್ಲಿ ಅನುಕೂಲಕರ ವಾತಾವರಣ. ನೆರೆಯ ವರಿಂದ ಸೌಹಾರ್ದದ ವರ್ತನೆ. ಹಿರಿಯರ ಆರೋಗ್ಯ ಸಮಾಧಾನಕರ. ಎಲೆಕ್ಟ್ರಾನಿಕ್‌ ಸಾಮಗ್ರಿ ದುರಸ್ತಿಯವರಿಗೆ ಕೆಲಸದ ಕರೆ. ನಿರೀಕ್ಷೆಗೆ ಮೀರಿದ ಪ್ರಮಾಣದಲ್ಲಿ ಲಾಭ.

ತುಲಾ: ಉದ್ಯೋಗಸ್ಥರಿಗೆ ನಾಳೆಯ ಪರಿಸ್ಥಿತಿಯ ಕುರಿತು ಅನವಶ್ಯ ಚಿಂತೆ. ವ್ಯವಹಾರ ಕ್ಷೇತ್ರದಲ್ಲಿ ಪೈಪೋಟಿ. ವಿವಾಹ ಮಾತುಕತೆ ಸುಗಮ. ಉತ್ತರದ ಕಡೆಯಿಂದ ಬಂಧುಗಳ ಆಗಮನ. ಸಾಹಿತ್ಯ ರಚನೆಯಲ್ಲಿ ಆಸಕ್ತರಿಗೆ ಕೈತುಂಬಾ ಕೆಲಸ. ಹಿತಶತ್ರುಗಳ ವಿಷಯದಲ್ಲಿ ಎಚ್ಚರವಿರಲಿ.

ವೃಶ್ಚಿಕ: ಮನೆಯಲ್ಲಿ ನೆಮ್ಮದಿಯ ವಾತಾವರಣ. ದಿನವಿಡೀ ಹಲವು ಬಗೆಯ ಕಾರ್ಯಕ್ರಮಗಳು. ನೆಂಟರ ಆಗಮನದಿಂದ ಹರ್ಷ. ಮನೆ ನವೀಕರಣಕ್ಕೆ ಸಿದ್ಧತೆ. ದಕ್ಷಿಣ ದಿಕ್ಕಿನಲ್ಲಿರುವ ಆಪ್ತರಿಂದ ಅನಿರೀಕ್ಷಿತ ಸಹಾಯ. ಗೃಹೋಪಕರಣಗಳ ಖರೀದಿ.

ಧನು: ಛಲ ಮತ್ತು ಹೊಂದಾಣಿಕೆ ಇವೆರಡನ್ನೂ ರೂಢಿಸಿಕೊಂಡಿರುವ ನಿಮಗೆ ಯಶಸ್ಸು ಸುಲಭ. ದೇವತಾ ಕಾರ್ಯದ ನಡುವೆ ಉದ್ಯೋಗ ಸಂಬಂಧಿ ಕಾರ್ಯಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆ. ಆಪ್ತರಿಂದ ನಿರೀಕ್ಷಿತ ಸಹಾಯ ಸಕಾಲದಲ್ಲಿ ಕೈಸೇರಿ ನೆಮ್ಮದಿ.

ಮಕರ: ವಿರಾಮದ ನೆಮ್ಮದಿಯನ್ನು ಅನುಭವಿಸುತ್ತಿರುವಾಗಲೇ ಕರ್ತವ್ಯದ ಕರೆ. ಸ್ವಂತ ಉದ್ಯಮಗಳನ್ನು ನಡೆಸುವವರಿಗೆ ನಿಲ್ಲದ ಪೈಪೋಟಿ. ಲೆಕ್ಕಪರಿಶೋಧನೆ, ಕಟ್ಟಡ ನಿರ್ಮಾಣ ಮೊದಲಾದ ವೃತ್ತಿಪರರಿಗೆ ಅವಧಿಗೆ ಸರಿಯಾಗಿ ಕೆಲಸಗಳನ್ನು ಮುಗಿಸುವ ಒತ್ತಡ.

ಕುಂಭ: ಹಿರಿಯರ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸ. ಉಳಿದಂತೆ ಎಲ್ಲರೂ ಕ್ಷೇಮ. ಸಮಾಜದ ಆವಶ್ಯಕತೆಗೆ ತಕ್ಕಂತೆ ಸ್ಪಂದನ. ಉದ್ಯೋಗಸ್ಥರಿಗೆ ವಿರಾಮವನ್ನು ಅನುಭವಿಸಲು ವ್ಯವಧಾನವಿಲ್ಲದಷ್ಟು ಕಾರ್ಯಭಾರ. ದಾಂಪತ್ಯ ಸುಖ ಉತ್ತಮ.

ಮೀನ: ಗ್ರಹಗಳ ಸ್ಥಾನಬಲದ ಕಾರಣದಿಂದ ಮಾನವನ ಬದುಕಿನ ಮೇಲಾಗುವ ಪರಿಣಾಮಗಳು ಪ್ರಾರ್ಥನೆಯ ಬಲದಿಂದ ಅನುಕೂಲ ಕರವಾಗುವ ಕಾರಣ ನಿಶ್ಚಿಂತರಾಗಿರಿ. ಉದ್ಯೋಗಸ್ಥರಿಗೆ ಪ್ರತಿಕೂಲವಾಗಿದ್ದವರು ಬದಲಾಗುವ ಸೂಚನೆ. ಸ್ವಂತ ವ್ಯವಹಾರ ನಡೆಸುವವರಿಗೆ ದೈವಾನುಗ್ರಹ ಉತ್ತಮ. ಧಾರ್ಮಿಕ ಕ್ಷೇತ್ರದ ಮುಂಚೂಣಿಯಲ್ಲಿ ಸೇವೆ ಸಲ್ಲಿಸಲು ಅವಕಾಶ.

 

Advertisement

Udayavani is now on Telegram. Click here to join our channel and stay updated with the latest news.

Next