Advertisement

Daily Horoscope: ನಿಶ್ಚಿಂತೆಯ ದಿನ, ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುತ್ತದೆ

07:23 AM Sep 22, 2023 | Team Udayavani |

ಮೇಷ: ಲೆಕ್ಕಾಚಾರ ಸರಿಯಾಗಿ ವ್ಯವಹಾರಗಳು ಎಣಿಕೆಯಂತೆ ನಡೆಯುತ್ತವೆ. ಉದ್ಯೋಗಸ್ಥರು ಕಾರ್ಯಸಾಮರ್ಥ್ಯದ ಪರೀಕ್ಷೆಯಲ್ಲಿ ಜಯಿಸುವಿರಿ. ಆಪ್ತರಿಂದ ಸಕಾಲಕ್ಕೆ ಸಹಾಯ ಒದಗುವುದು. ಮಂಗಲ ಕಾರ್ಯದ ಪ್ರಯತ್ನದಲ್ಲಿ ಮುನ್ನಡೆ.

Advertisement

ವೃಷಭ: ಉದ್ಯೋಗ, ವ್ಯವಹಾರಗಳಲ್ಲಿ ಸ್ಥಿರ ಪರಿಸ್ಥಿತಿ. ವ್ಯವಹಾರ ಸಂಬಂಧ ದೂರದ ಊರಿಗೆ ಪ್ರಯಾಣ ಸಂಭವ. ನೂತನ ಗೃಹ ನಿರ್ಮಾಣ ಯೋಜನೆಯಲ್ಲಿ ಮುನ್ನಡೆ. ಬೀಗರ ಕಡೆಯಿಂದ ಶುಭವಾರ್ತೆ. ಮನೆಯಲ್ಲಿ ಹರ್ಷ, ಸಂಭ್ರಮದ ವಾತಾವರಣ.

ಮಿಥುನ: ಸಮಸ್ಯೆಗಳು ನಿಜ ಗಾತ್ರಕ್ಕಿಂತ ಹೆಚ್ಚು ಹಿಗ್ಗಿ ಗೋಚರವಾದಾಗ ಒಂದೊಮ್ಮೆ ಹೆದರಿದರೂ ಸತ್ಯದರ್ಶನವಾಗಿ ಭಯ ದೂರವಾಗುವುದು. ಸಮಾಜದಲ್ಲಿ ಗೌರವ ವೃದ್ಧಿ. ಉದ್ಯೋಗಸ್ಥರಿಗೆ ಅನುಕೂಲದ ವಾತಾವರಣ. ವ್ಯವಹಾರಸ್ಥರಿಗೆ ಶುಭ.

ಕರ್ಕಾಟಕ: ಕಹಿ ನೆನಪುಗಳನ್ನು ಆದಷ್ಟು ಮರೆಯಲು ಪ್ರಯತ್ನಿಸಿ. ಇಂದಿನದು ಶುಭ ವರ್ತಮಾನ. ಉದ್ಯೋಗಸ್ಥರ ಯೋಗ್ಯತೆಗೆ ಮನ್ನಣೆ. ಸ್ವಂತ ವ್ಯವಹಾರಸ್ಥರಿಗೆ ಹೊಸ ಅವಕಾಶಗಳು ಮತ್ತು ಸಂದರ್ಭಗಳು ಗೋಚರ. ಹಿರಿಯರ ಆರೋಗ್ಯ ನಿರೀಕ್ಷೆ ಮೀರಿ ಸುಧಾರಣೆ.

ಸಿಂಹ: ಉದ್ಯೋಗಸ್ಥರಿಗೆ ಹಲವು ಬಗೆಯ ಪಂಥಾಹ್ವಾನಗಳು ಎದುರಾಗಬಹುದು. ವಸ್ತ್ರೋ ದ್ಯಮ, ಸ್ವರ್ಣೋದ್ಯಮಗಳನ್ನು ನಡೆಸುವವರಿಗೆ ಲಾಭ ಮಧ್ಯಮ. ಯಂತ್ರೋಪಕರಣ ವ್ಯಾಪಾರಿಗಳಿಗೆ ಉತ್ತಮ ಲಾಭ. ದೈಹಿಕ ಶ್ರಮಿಕರಿಗೆ ಸಮಾಧಾನದ ಜೀವನ.

Advertisement

ಕನ್ಯಾ: ಕಾರ್ಯರಂಗದಲ್ಲಿ ವಿಶೇಷ ಯಶಸ್ಸಿನ ದಿನ. ಹೊಸ ವೃತ್ತಿಯನ್ನು ಆರಂಭಿಸಿರುವವರಿಗೆ ಶುಭಾರಂಭದ ಸನ್ನಿವೇಶ. ಉದ್ಯೋಗಸ್ಥರಿಗೆ ಸಮಯ ಮಿತಿಯಲ್ಲಿ ಕಾರ್ಯ ಪೂರೈಸುವುದರಲ್ಲಿ ಯಶಸ್ಸು. ಲೆಕ್ಕ ಪರಿಶೋಧಕರರೇ ಮೊದಲಾದ ವೃತ್ತಿಪರರಿಗೆ ಕೆಲಸ ಮುಗಿಸುವ ಒತ್ತಡ.

ತುಲಾ: ಮನಸ್ಸನ್ನು ಸ್ಥಿರಗೊಳಿಸಲು ಅಧ್ಯಾತ್ಮದ ಮಾರ್ಗವನ್ನು ಹಿಡಿದರೆ ಮೇಲು. ಕಿರಿದಾದ ಸಮಸ್ಯೆಗಳನ್ನು ನಿರ್ಲಕ್ಷಿಸಿರಿ. ಆಪ್ತ ಮಿತ್ರರ ಸಕಾಲಿಕ ಸಹಾಯ. ಮಕ್ಕಳ ಯೋಗ ಕ್ಷೇಮದತ್ತ ವಿಶೇಷ ಗಮನ ಹರಿಸುವ ಆವಶ್ಯಕತೆ. ಉದ್ಯೋಗ ನಿರ್ವಹಣೆಯಲ್ಲಿ ಯಶಸ್ಸು.

ವೃಶ್ಚಿಕ: ನಿಶ್ಚಿಂತೆಯ ದಿನ. ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುತ್ತದೆ. ಸಂಸಾರದಲ್ಲಿ ನೆಮ್ಮದಿ. ವಸ್ತ್ರಾಭರಣ ಖರೀದಿ ಸಂಭವ. ವಾಹನ ಚಾಲನೆಯಲ್ಲಿ ಎಚ್ಚರ. ಉದ್ಯೋಗಸ್ಥರಿಗೆ ಅನಿರೀಕ್ಷಿತ ಪದೋನ್ನತಿ ಅಥವಾ ವೇತನ ಏರಿಕೆ ಸಾಧ್ಯ ಸಂಗೀತ ಶ್ರವಣ, ಸತ್ಸಂಗ ಧ್ಯಾನ ಇತ್ಯಾದಿಗಳಲ್ಲಿ ಆಸಕ್ತಿ.

ಧನು: ಸಾಹಸ, ಪರಿಶ್ರಮಗಳು ಫ‌ಲಿಸುವ ದಿನ. ಗೆಳೆಯರಿಂದ ಮತ್ತು ನೆರೆಯವರಿಂದ ಸಕಾಲದಲ್ಲಿ ಅಯಾಚಿತ ಸಹಾಯ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ಉದ್ಯಮ ನಡೆಸುತ್ತಿರುವವರಿಗೆ ಉತ್ತೇಜನದ ಸನ್ನಿವೇಶಗಳು ಒದಗಲಿವೆ.

ಮಕರ: ಸಂಯಮದ ಗುಣವನ್ನು ಬೆಳೆಸಿಕೊಂಡಷ್ಟು ಉತ್ತಮ. ಹಲವು ಸವಾಲು ಗಳು ಬಂದರೂ ಜಾಣ್ಮೆಯಿಂದ ನಡೆದುಕೊಂಡಲ್ಲಿ ಇಂದಿನ ದಿನ ನಿಮ್ಮದೇ.ಉದ್ಯೋಗ ಅರಸುತ್ತಿರುವವರಿಗೆ ಶುಭ ಸೂಚನೆ. ಆರೋಗ್ಯದ ಕಡೆಗೆ ಗಮನವಿರಲಿ.

ಕುಂಭ: ಸ್ಥಿರವಾದ ಆರೋಗ್ಯ. ಉದ್ಯೋಗ ರಂಗದಲ್ಲಿ ಅಪರೂಪದ ಹೊಣೆಗಾರಿಕೆ ಒದಗಿ ಬರಲಿದೆ. ಮೇಲಧಿಕಾರಿಗಳ ಮೆಚ್ಚುಗೆ, ಸಹೋದ್ಯೋಗಿಗಳ ಸಹಕಾರ ಲಭ್ಯ. ರಕ್ಷಣ ಇಲಾಖೆಗಳಲ್ಲಿ ದುಡಿಯುವವರಿಂದ ಮಹತ್ವ ಪೂರ್ಣ ಜವಾಬ್ದಾರಿಯ ಯಶಸ್ವೀ ನಿರ್ವಹಣೆ.

ಮೀನ: ಚಡಪಡಿಕೆ ದೂರವಾಗಿ ಲವಲವಿಕೆ ತುಂಬಿರುವ ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸ್ವಂತ ವ್ಯವಹಾರ ಕ್ಷೇತ್ರದಲ್ಲಿ ಸೂಕ್ತವಾದ ಸ್ಪಂದನದಿಂದ ಕಾರ್ಯಗಳು ಸುಗಮ. ಧಾರ್ಮಿಕ ಕ್ಷೇತ್ರವೊಂದರ ಜವಾಬ್ದಾರಿ ಬರುವ ಸಾಧ್ಯತೆ. ಕೈಕೆಳಗಿನ ನೌಕರರಿಂದ ನಿಷ್ಠಾಪೂರ್ವಕ ಸೇವೆ. ಮಾತೃ ಸ್ಥಾನದಲ್ಲಿರುವವರ ಹಾರೈಕೆಯಿಂದ ಅನಿರೀಕ್ಷಿತ ಲಾಭ. ಸಂಗಾತಿಯಿಂದ ಉತ್ತಮ ಸಹಕಾರ.

Advertisement

Udayavani is now on Telegram. Click here to join our channel and stay updated with the latest news.

Next