Advertisement

Daily Horoscope: ಸ್ವಂತ ಉದ್ಯಮದ ಅಭಿವೃದ್ಧಿಗೆ ಸಮಾಲೋಚನೆ, ಉದ್ಯೋಗಸ್ಥರಿಗೆ ಶುಭವಾರ್ತೆ

07:35 AM Oct 22, 2023 | Team Udayavani |

ಮೇಷ: ಇಷ್ಟಾರ್ಥ ಸಿದ್ಧಿಯ ದಿನ. ಉದ್ಯೋಗ ಕ್ಷೇತ್ರದಲ್ಲಿ ವಿಶೇಷ ಉತ್ತೇಜನ. ಹೂಡಿಕೆಗಳಲ್ಲಿ ದಿಢೀರ್‌ ಲಾಭ. ಸ್ವಂತ ಉದ್ಯಮ ವಿಸ್ತರಣೆಗೆ ಮಾತುಕತೆ. ಹಬ್ಬದ ಸಂಭ್ರಮದಲ್ಲಿ ಸೇರ್ಪಡೆ. ಕುಟುಂಬ ಕಲಹ ಪರಿಹಾರ. ಆಸ್ತಿ ಖರೀದಿಗೆ ಸಿದ್ಧತೆ. ಗೃಹೋದ್ಯಮಗಳ ಮುನ್ನಡೆ. ಎಲ್ಲರ ಆರೋಗ್ಯ ಉತ್ತಮ.

Advertisement

ವೃಷಭ: ಹಳೆಯ ಉದ್ಯಮದ ಯಥಾಸ್ಥಿತಿ ಮುಂದುವರಿಕೆ. ಹೊಸ ಪಾಲುದಾರಿಕೆ ವ್ಯವಹಾರ ದಲ್ಲಿ ದೊಡ್ಡ ಮೊತ್ತದ ಲಾಭ. ಉದ್ಯೋಗಸ್ಥರಿಗೆ ಶುಭವಾರ್ತೆ. ಕೃಷಿ ಭೂಮಿ ವಿಸ್ತರಣೆಗೆ ಪ್ರಯತ್ನ. ಸರಕಾರಿ ಯೋಜನೆಗಳ ಲಾಭ ಕೈಸೇರುವುದು ವಿಳಂಬ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ.

ಮಿಥುನ: ಮನೋಬಲ ವಿಕಾಸಕ್ಕೆ ಸಾಧನೆಯಲ್ಲಿ ಮಗ್ನತೆ. ಉದ್ಯೋಗದಲ್ಲಿ ಕಿರಿಕಿರಿ, ಪ್ರತಿಭಾ ವಿಕಾಸಕ್ಕೆ ಹಿತಶತ್ರುಗಳ ಅಡ್ಡಗಾಲು. ಧ್ಯಾನ, ಸ್ವಾಧ್ಯಾಯಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ನವೋತ್ಸಾಹ. ಉದ್ಯಮ ಅಭಿವೃದ್ಧಿಗೆ ವಿತ್ತಸಂಸ್ಥೆ ಸಹಾಯ. ಆರೋಗ್ಯ ಸ್ಥಿತಿ ಉತ್ತಮ.

ಕರ್ಕಾಟಕ: ಸತ್ಕಾರ್ಯಗಳಿಗೆ ಮುಂದಾಗಲು ಮನಸ್ಸು. ದೇವತಾರ್ಚನೆಯಲ್ಲಿ ಪಾಲುಗೊಂಡು ಧನ್ಯತೆಯ ಭಾವ ವೃದ್ಧಿ. ಉದ್ಯೋಗದಲ್ಲಿ ಆನಂದದ ಅನುಭವ. ಸ್ವಂತ ಉದ್ಯಮದ ಅಭಿವೃದ್ಧಿಗೆ ಸಮಾಲೋಚನೆ. ನೌಕರ ವೃಂದದ ಸಹಕಾರ. ದೂರದಲ್ಲಿರುವ ಬಂಧುವಿನಿಂದ ಅಪರೂಪದ ಕರೆ.

ಸಿಂಹ: ತಾಳ್ಮೆಯಿಂದ ಪರಿಶ್ರಮವನ್ನು ಮುಂದು ವರಿಸಿದ್ದಕ್ಕೆ ತಕ್ಕ ಪ್ರತಿಫ‌ಲ ಪ್ರಾಪ್ತಿ. ಮುನ್ನಡೆಯನ್ನು ತಡೆಯಲು ಹಿತಶತ್ರುಗಳು ಹೂಡಿದ ಸಂಚು ವಿಫ‌ಲ. ಉದ್ಯಮದ ಎಲ್ಲ ವಿಭಾಗಗಳಲ್ಲೂ ಸಾರ್ಥಕ ಮುನ್ನಡೆ. ಉತ್ಪನ್ನಗಳ ಜನಪ್ರಿಯತೆ ವೃದ್ಧಿ.

Advertisement

ಕನ್ಯಾ: ಶುಭದಿನ. ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಪ್ರೋತ್ಸಾಹದ ನುಡಿಗಳು. ಅಲ್ಪಾವಧಿಯ ಹೂಡಿಕೆಗಳ ಆಮಿಷದಿಂದ ದೂರವಿರಿ. ಸ್ವಂತ ಉದ್ಯಮದ ಗಾತ್ರವನ್ನು ಕಿರಿಯದಾಗಿಟ್ಟುಕೊಳ್ಳಲು ಪ್ರಯತ್ನಿಸಿರಿ. ಪಿತ್ರಾರ್ಜಿತ ಕೃಷಿಭೂಮಿ ಅಭಿವೃದ್ಧಿಯಿಂದ ಹಿತ.

ತುಲಾ: ಭವಿಷ್ಯದ ಕುರಿತು ವೃಥಾ ಆತಂಕಗೊಳ್ಳದಿರಿ. ದೈವಾನುಗ್ರಹ ಉತ್ತಮ. ಬಾಳಸಂಗಾತಿಯಿಂದ ಸರ್ವ ಸಹಕಾರ. ಉದ್ಯೋಗದಲ್ಲಿ ಯಥಾಸ್ಥಿತಿ ಮುಂದುವರಿಕೆ. ಸ್ವಂತ ಉದ್ಯಮದ ಸಮಸ್ಯೆ ಪರಿಹಾರ. ಉತ್ಪನ್ನಗಳ ಗುಣಮಟ್ಟ ಏರಿಕೆಯಿಂದ ಗ್ರಾಹಕರ ಸಂಖ್ಯೆ ವೃದ್ಧಿ.

ವೃಶ್ಚಿಕ: ಕಳೆದುಕೊಂಡದ್ದಕ್ಕಿಂತ ಪಡೆದದ್ದೇ ಹೆಚ್ಚೆಂಬುದು ಮನವರಿಕೆಯಾದಾಗ ನಿರಾಶೆ ದೂರ. ಉದ್ಯೋಗದಲ್ಲಿ ಅಗಾಧ ಪ್ರಗತಿಯಾಗದಿದ್ದರೂ ಜೀವನ ನಿರ್ವಹಣೆಗೆ ಕೊರತೆ ಇಲ್ಲ. ಸ್ವಂತ ಉದ್ಯಮದೊಂದಿಗೆ ಮಕ್ಕಳ ಉದ್ಯಮವೂ ಅಭಿವೃದ್ಧಿಯ ಪಥದಲ್ಲಿ.

ಧನು: ನಿಧಾನವಾಗಿ ಸುಧಾರಣೆಯ ಹಾದಿ ಯಲ್ಲಿ ಮುಂದುವರಿಕೆ. ಉದ್ಯೋಗದಲ್ಲಿ ಮುನ್ನಡೆಯಲು ಸಹೋದ್ಯೋಗಿಗಳಿಂದ ಸಹಕಾರ. ಸ್ವಂತ ಉದ್ಯಮ ನಿಧಾನಗತಿಯಲ್ಲಿ ಮುನ್ನಡೆ. ದೀರ್ಘಾವಧಿ ಯೋಜನೆಗಳಲ್ಲಿ ಹಣ ಹೂಡಿಕೆಯಿಂದ ಲಾಭ.

ಮಕರ: ನಿರಾಶೆಯನ್ನು ದೂರವಿಡುವ ಪ್ರಯತ್ನ ದಲ್ಲಿ ಜಯ. ಉದ್ಯೋಗದಲ್ಲಿ ಒತ್ತಡವಿದ್ದರೂ ನಿಗದಿತ ಸಮಯದಲ್ಲಿ ಕಾರ್ಯ ಮುಗಿಸುವ ಸಾಮರ್ಥ್ಯ. ಮಕ್ಕಳ ಯೋಗಕ್ಷೇಮಕ್ಕೆ ಗಮನ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಅಲಂಕಾರ ಸಾಮಗ್ರಿ ವ್ಯಾಪಾರಿಗಳಿಗೆ ಉತ್ತಮ ಲಾಭ.

ಕುಂಭ: ಕಾರ್ಯಸಾಧನೆಯ ತೃಪ್ತಿ. ವಿರಾಮದ ದಿನವಾಗಿದ್ದರೂ ಉದ್ಯೋಗ, ವ್ಯವಹಾರಗಳ ಚಿಂತೆ. ಮರುದಿನದ ಕಾರ್ಯಗಳಿಗೆ ಸಿದ್ಧತೆ. ಮನೆಯಲ್ಲಿ ಹಬ್ಬ ಆಚರಣೆಯ ಸಂಭ್ರಮ. ಬಂಧು, ಮಿತ್ರರೊಂದಿಗೆ ಸಮಾಗಮ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಮೀನ: ಮನೆಯಲ್ಲಿ ಹಬ್ಬದ ಸಂಭ್ರಮವಿದ್ದರೂ ಊರಿನ ಕಾರ್ಯಕ್ರಮದ ನೇತೃತ್ವ ವಹಿಸುವ ಅನಿವಾರ್ಯತೆ. ವೈಯಕ್ತಿಕ ಆರೋಗ್ಯ ಉತ್ತಮ.ದೀರ್ಘ‌ಕಾಲದಿಂದ ಸಂಪರ್ಕ ಇಲ್ಲದಿದ್ದ ಬಂಧುಗಳೊಂದಿಗೆ ಪುನರ್ಮಿಲನ. ಸೋದರಿಯ ಮಕ್ಕಳಿಗೆ ವಿವಾಹ ಮಾತುಕತೆ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next