Advertisement

Daily Horoscope: ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ, ಪಾಲುದಾರಿಕೆ ಉದ್ಯಮದಲ್ಲಿ ಸಾಮಾನ್ಯ ಲಾಭ

07:50 AM Oct 19, 2023 | Team Udayavani |

ಮೇಷ: ಗೊಂದಲದ ಮನಸ್ಥಿತಿಯಲ್ಲಿ ಕಾರ್ಯ. ಆಯ್ಕೆಗಳ ವಿಷಯದಲ್ಲಿ ತಾಕಲಾಟ. ಧ್ಯಾನದ ಮೂಲಕ ಸಮಸ್ಯೆಗೆ ಪರಿಹಾರ. ಮನೆಯಲ್ಲಿ ದೇವತಾ ಕಾರ್ಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಹಳೆಯ ಸಮಸ್ಯೆಯೊಂದು ಮತ್ತೆ ಗೋಚರ.

Advertisement

ವೃಷಭ: ನಿಧಾನ ಗತಿಯಲ್ಲಿ ದಿನಚರಿ ಆರಂಭ. ಆಪ್ತರಿಂದ ಅಪೇಕ್ಷಿತ ನೆರವು ಲಭ್ಯ. ಉದ್ಯೋಗದಲ್ಲಿ ಯಥಾಸ್ಥಿತಿ ಮುಂದುವರಿಕೆ. ಸ್ವಂತ ಉದ್ಯಮದ ಉತ್ಪನ್ನಗಳ ಮಾರುಕಟ್ಟೆ ಬೆಳವಣಿಗೆ. ಕೃಷ್ಯುತ್ಪನ್ನ ಮಾರಾಟದಿಂದ ಸಾಮಾನ್ಯ ಲಾಭ. ಪರಿಸರ ಸಂರಕ್ಷಣೆ ಕಾರ್ಯದಲ್ಲಿ ಆಸಕ್ತಿ.

ಮಿಥುನ: ಪ್ರಾಪಂಚಿಕ ಕರ್ತವ್ಯಗಳ ಪಾಲನೆಯಲ್ಲಿ ಯಶಸ್ವಿಯಾಗಲು ಪ್ರಯತ್ನ. ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ. ಸ್ವಂತ ಉದ್ಯಮ ಮಂದಗತಿಯಲ್ಲಿ ಮುನ್ನಡೆ. ಪಾಲುದಾರಿಕೆ ಉದ್ಯಮದಲ್ಲಿ ಸಾಮಾನ್ಯ ಲಾಭ. ಅಲ್ಪಾವಧಿ ವಿತ್ತ ಹೂಡಿಕೆ ಯೋಜನೆಗಳಿಂದ ನಷ್ಟ.

ಕರ್ಕಾಟಕ: ಹಬ್ಬದ ವಾತಾವರಣ. ಉದ್ಯೋಗ ಸ್ಥಾನದಲ್ಲಿ ಹುರುಪಿನ ಕಾರ್ಯ. ಮೇಲಧಿಕಾ ರಿಗಳಿಂದ ವಿಶೇಷ ಉತ್ತೇಜನ. ಹಿರಿಯ ಸರಕಾರಿ ಅಧಿಕಾ ರಿಗಳಿಗೆ ವರ್ಗಾವಣೆ ಸಂಭವ. ಸ್ವಂತ ಉದ್ಯಮದಲ್ಲಿ ಹೊಸ ಸಮಸ್ಯೆ ಉದ್ಭವ. ಮನೆ ನಿವೇಶನ ಖರೀದಿಗೆ ಸಮಾಲೋಚನೆ.

ಸಿಂಹ: ಪ್ರಗತಿಯ ಯಾನ ನಿಲ್ಲದೆ ಮುಂದುವರಿಕೆ. ಅಕಸ್ಮಾತ್‌ ಧನಪ್ರಾಪ್ತಿ ಯೋಗ. ಉದ್ಯೋಗದಲ್ಲಿ ಪದೋನ್ನತಿ ಅಥವಾ ವೇತನವೃದ್ಧಿ. ಸಣ್ಣ ಕಾರಿ ನೌಕರರಿಗೆ ಹೊಸ ಜವಾಬ್ದಾರಿ. ಪಶ್ಚಿಮ ದೇಶದಲ್ಲಿರುವ ಮಕ್ಕಳಿಂದ ಶುಭ ಸಮಾಚಾರ. ಸಮೀಪದ ಬಂಧುವೊಬ್ಬರಿಗೆ ಆಪ್ತ ಸಲಹೆ.

Advertisement

ಕನ್ಯಾ: ಹಳೆಯ ಬಂಧುಗಳೊಂದಿಗೆ ಭೇಟಿ. ಹೊಸ ಕಾರ್ಯವೊಂದನ್ನು ಕೈಗೊಳ್ಳುವ ಕುರಿತು ಸಮಾಲೋಚನೆ. ನೆರೆಯ ರಾಜ್ಯದಲ್ಲಿರುವ ದೇವಿ ಕ್ಷೇತ್ರಕ್ಕೆ ಭೇಟಿ. ಆಪ್ತ ಸಮಾಲೋಚನೆಯ ಬಳಿಕ ವರ್ಧಿಸಿದ ಕಾರ್ಯೋತ್ಸಾಹ. ಅವಿವಾಹಿತರಿಂದ ವಿವಾಹ ಮಾಡಿಕೊಳ್ಳುವ ತೀರ್ಮಾನ.

ತುಲಾ: ಡೋಲಾಯಮಾನ ಮನಸ್ಥಿತಿಯಿಂದ ಹೊರಬರಲು ಪ್ರಯತ್ನ. ಹಳೆಯ ಗೆಳೆಯರಿಂದ ಸಕಾರಾತ್ಮಕ ಚಿಂತನೆಗೆ ಸಲಹೆ.ಉದ್ಯೋಗದಲ್ಲಿ ಯಥಾಸ್ಥಿತಿ ಮುಂದುವರಿಕೆ. ಬಂಧುಗಳ ಭೇಟಿಯಿಂದ ಸಮಾಧಾನ. ಸಂಗಾತಿಯೊಂದಿಗೆ ದೇವಾಲಯ ಸಂದರ್ಶನ.

ವೃಶ್ಚಿಕ: ಮನಸ್ಸಿನ ಬಯಕೆ ತಡವಾಗಿಯಾದರೂ ಈಡೇರಿತೆಂಬ ಸಮಾಧಾನ. ಉದ್ಯೋಗದಲ್ಲಿ ಪದೋನ್ನತಿ ಹಾಗೂ ವೇತನ ಏರಿಕೆ. ಮಕ್ಕಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ. ಮನೆಯಲ್ಲಿ ಸಾಮರಸ್ಯ. ದೇವತಾ ಕಾರ್ಯದ ಸಂಭ್ರಮ. ವಸ್ತ್ರ, ಆಭರಣ ಖರೀದಿಯಲ್ಲಿ ಆಸಕ್ತಿ.

ಧನು: ಸಂಸಾರ ತಾಪತ್ರಯಗಳಿಂದ ಬಿಡುಗಡೆ ಹೊಂದಲು ವಿಫ‌ಲ ಯತ್ನ. ಸಹಾಯ ಯಾಚನೆಗೆ ಬಂಧುಗಳಿಂದ ಉತ್ತಮ ಸ್ಪಂದನೆ. ಬಾಲ್ಯದ ಗೆಳೆಯರ ಅಕಸ್ಮಾತ್‌ ಭೇಟಿ. ಉದ್ಯೋಗದಲ್ಲಿ ಸಾಮಾನ್ಯ ಮುನ್ನಡೆ. ಸ್ವಂತ ಉದ್ಯಮದ ವಿಸ್ತರಣೆ ಬಗ್ಗೆ ಪರಿಣತರೊಂದಿಗೆ ಸಮಾಲೋಚನೆ.

ಮಕರ: ಹಳೆಯ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ತೀವ್ರ ಪ್ರಯತ್ನ. ಉದ್ಯೋಗ ಸ್ಥಾನದಲ್ಲಿ ಒತ್ತಡದೊಂದಿಗೆ ಮುಂದುವರಿದ ಯಥಾಸ್ಥಿತಿ. ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಕುರಿತು ಚಿಂತೆ. ಕಲಿತು ಮರೆತಿರುವ ಅಪೂರ್ವ ವಿದ್ಯೆ ನೆನಪಿಗೆ ಬಂದು ಸಂಕಷ್ಟ ದೂರ.

ಕುಂಭ: ಪೂರ್ವಾರ್ಜಿತ ಕರ್ಮಫ‌ಲವಾಗಿ ಸತ್ಕಾರ್ಯ ಮಾಡಲು ಶಕ್ತಿ ಲಭ್ಯ. ಉದ್ಯೋಗದಲ್ಲಿ ಯಶಸ್ಸು ಮುಂದುವರಿಕೆ. ವೇತನ ವೃದ್ಧಿ. ಸರಕಾರಿ ಅಧಿಕಾರಿಗಳಿಗೆ ದೂರಸ್ಥಳಕ್ಕೆ ವರ್ಗಾವಣೆ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಸಂದರ್ಭ.

ಮೀನ: ಬಹುಮಟ್ಟಿಗೆ ಶುಭಫ‌ಲಗಳ ದಿನ. ಅಪರೂಪದ ಬಂಧುಗಳ ಆಗಮನ. ಉದ್ಯೋಗ ಸ್ಥಾನದಲ್ಲಿ ಉತ್ಸಾಹ. ಸ್ವಂತ ಉದ್ಯಮದ ಪ್ರಗತಿಯಲ್ಲಿ ವೇಗೋತ್ಕರ್ಷ. ಸರಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಮತ್ತು ನೌಕರ ವರ್ಗದಿಂದ ಉತ್ತಮ ಸ್ಪಂದನೆಯಿಂದಾಗಿ ಗ್ರಾಹಕರಿಗೆ ಸೇವೆಯೊದಗಿಸುವ ಸಾಮರ್ಥ್ಯ ವೃದ್ಧಿ. ವಾಸಸ್ಥಾನ ನವೀಕರಣ ಯೋಜನೆಗೆ ಚಾಲನೆ. ಮನೆಯಲ್ಲಿ ಹರ್ಷದ ವಾತಾವರಣ.

Advertisement

Udayavani is now on Telegram. Click here to join our channel and stay updated with the latest news.

Next