Advertisement

Daily Horoscope:ಭವಿಷ್ಯದ ಚಿಂತೆ ಮಾಡದೆ ವರ್ತಮಾನದಲ್ಲಿ ಜೀವಿಸುವುದನ್ನು ಕಲಿತರೆ ಜೀವನ ಸುಗಮ

07:26 AM Nov 03, 2023 | Team Udayavani |

ಮೇಷ: ಆರೋಗ್ಯ ಉತ್ತಮ ಸ್ಥಿತಿಯಲ್ಲಿ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆ. ವ್ಯವಹಾರ ಸುಧಾರಣೆ.,ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ಆದಾಯ, ಲಾಭ ಹೆಚ್ಚಳ. ಹಿರಿಯ ವ್ಯಕ್ತಿಯ ಆಪ್ತ ಸಲಹೆಯಿಂದ ನೆಮ್ಮದಿ. ಲೇವಾದೇವಿ ವ್ಯವಹಾರದಲ್ಲಿ ಲಾಭ ಮಧ್ಯಮ.

Advertisement

ವೃಷಭ: ಹೋರಾಟವೇ ಬದುಕು! ಶಸ್ತ್ರತ್ಯಾಗ ಮಾಡದೆ ಸಮರವನ್ನು ಮುಂದುವರಿಸಿದರೆ ವಿಜಯ ನಿಶ್ಚಿತ. ಎಂದೂ ಯೋಚಿಸಿರದ ಕಡೆಯಿಂದ ಸಹಾಯ ಹಸ್ತ ಬರಲಿದೆ. ಉದ್ಯೋಗ, ಉದ್ಯಮ ಎರಡೂ ಸುಗಮ. ಪಾಲುದಾರಿಕೆ ವ್ಯವಹಾರದಲ್ಲಿ ಆದಾಯ ವೃದ್ಧಿ.

ಮಿಥುನ: ಭವಿಷ್ಯದ ಚಿಂತೆ ಮಾಡದೆ ವರ್ತಮಾನದಲ್ಲಿ ಜೀವಿಸುವುದನ್ನು ಕಲಿತರೆ ಜೀವನ ಸುಗಮ. ಉದ್ಯೋಗದಲ್ಲಿ ಪ್ರತಿಭೆಗೆ ಮಾನ್ಯತೆ ಅಬಾಧಿತ. ಹುದ್ದೆ ಬದಲಾವಣೆ ಸಂಭವ. ಸಮೂಹ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇನ್ನಷ್ಟು ಹೊಣೆಗಾರಿಕೆಗಳು.

ಕರ್ಕಾಟಕ: ಪರಿಸರದ ಪ್ರಭಾವದಿಂದ ಮನಸ್ಸು ಅಸ್ತವ್ಯಸ್ತವಾದುದಕ್ಕೆ ಚಿಂತೆ ಬೇಡ. ಸರಿಯಾಗುವ ಸಮಯ ಸನ್ನಿಹಿತ.ಉದ್ಯೋಗದಲ್ಲಿ ಪ್ರತಿಭೆಗೆ ಗೌರವ.ಸ್ವಂತ ಉದ್ಯಮ ಅಭಿವೃದ್ಧಿಯ ಪಥದಲ್ಲಿ.ಹಳೆಯ ಸಮಸ್ಯೆಯೊಂದು ಸರಳ ಉಪಾಯದಿಂದ ಪರಿಹಾರ.

ಸಿಂಹ: ಯೋಚಿಸಿದ ರೀತಿಯಲ್ಲೇ ಆಗುತ್ತಿರುವ ಕೆಲಸಗಳು. ಉದ್ಯೋಗದಲ್ಲಿ ಪದೋನ್ನತಿ ಯೊಂದಿಗೆ ವಿಭಾಗ ಬದಲಾವಣೆ. ಸಹೋದ್ಯೋಗಿಗಳ ಸಹಕಾರ. ಸ್ವಂತ ಉದ್ಯಮ ದಾಪುಗಾಲಿನಲ್ಲಿ ಬೆಳವಣಿಗೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ದುಪ್ಪಟ್ಟು ಲಾಭ.

Advertisement

ನ್ಯಾ: ಉದ್ಯೋಗದಲ್ಲಿ ಸ್ಥಿರವಾಗುವ ಪ್ರಯತ್ನ ಸಫ‌ಲ. ಕಾರ್ಯತತ್ಪರತೆಗೆ ಮೇಲಧಿಕಾರಿಗಳ ಮೆಚ್ಚುಗೆ. ಸ್ವಂತ ಉದ್ಯಮಕ್ಕೆ ಹೊಸ ಪಾಲುದಾರರ ಸೇರ್ಪಡೆ.ಲೇವಾದೇವಿ ವ್ಯವಹಾರದಲ್ಲಿ ನಷ್ಟದ ಸಾಧ್ಯತೆ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ವಿನಿಯೋಗ.

ತುಲಾ: ಆತಂಕದ ಕ್ಷಣಗಳು ತೊಲಗಿ ಮನಸ್ಸಿಗೆ ನೆಮ್ಮದಿ. ಪ್ರಾಪಂಚಿಕ ಸಮಸ್ಯೆಗಳಿಗೆ ಅಧ್ಯಾತ್ಮದ ಮಾರ್ಗದಲ್ಲೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಸಫ‌ಲ. ಉದ್ಯೋಗ ಕ್ಷೇತ್ರದಲ್ಲಿ ಪ್ರತಿಭೆ ಮತ್ತು ಕಾರ್ಯತತ್ಪರತೆಗೆ ಮನ್ನಣೆ. ಉದ್ಯಮ ರಂಗದಲ್ಲಿ ಜಯ.

ವೃಶ್ಚಿಕ: ಮಕ್ಕಳ ಉದ್ಯಮ ಯಶಸ್ಸಿನ ಪಥದಲ್ಲಿ. ಕುಟುಂಬದ ಸದಸ್ಯರ ಸಂಖ್ಯೆ ವೃದ್ಧಿ. ಉದ್ಯೋಗ ಸ್ಥಾನದಲ್ಲಿದ್ದ ಕಿರಿಕಿರಿ ತೊಲಗಿ ಮನಸ್ಸಿಗೆ ಸಮಾಧಾನ. ಸೋದರ ವರ್ಗದಲ್ಲಿ ವಿವಾಹ ನಿಶ್ಚಯ. ಸ್ವಂತ ಉದ್ಯಮದ ವ್ಯವಹಾರ ಕ್ಷೇತ್ರ ವಿಸ್ತರಣೆ. ವಸ್ತ್ರ, ಆಭರಣ ಖರೀದಿ.

ಧನು: ಶಾಂತಿ, ನೆಮ್ಮದಿಗಳನ್ನು ಅರಸುತ್ತಿರುವ ನಿಮಗೆ ಪರೀಕ್ಷೆಯಂತೆ ಎದುರಾಗುತ್ತಿರುವ ಸವಾಲುಗಳು ಅಲ್ಪಕಾಲದಲ್ಲಿ ತೊಲಗುತ್ತವೆ. ಉದ್ಯೋಗ ಸ್ಥಾನದಲ್ಲಿ ಕಾರ್ಯದಕ್ಷತೆಯನ್ನು ಗುರುತಿಸಿದ ಮೇಲಧಿಕಾರಿ ಗಳಿಂದ ಪ್ರಶಂಸೆ‌. ಜೇನುಸಾಕಣೆಯಲ್ಲಿ ಆಸಕ್ತಿ.

ಮಕರ: ದಿನದ ಆರಂಭದಲ್ಲಿ ಎದುರಾದ ಆತಂಕ ಸುಲಭವಾಗಿ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ಶುಭ ಸನ್ನಿವೇಶ. ಸಹೋದ್ಯೋಗಿಗಳೊಂದಿಗೆ ಸಣ್ಣ ಮನೋರಂಜನೆ. ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ. ಗುರುಹಿರಿಯ ಆಶೀರ್ವಾದ.

ಕುಂಭ: ಅನಿರೀಕ್ಷಿತ ಧನಾಗಮ. ಬಂಧುವರ್ಗದಲ್ಲಿ ಮಂಗಲ ಕಾರ್ಯ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ. ಸ್ವಂತ ಉದ್ಯಮದ ಕಾರ್ಯವ್ಯಾಪ್ತಿ ವಿಸ್ತರಣೆ. ಹೊಸ ಉತ್ಪನ್ನಗಳು ಮಾರುಕಟ್ಟೆಗೆ.ಸಮಾಜಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯ ಸೇವೆ. ಹೊಸ ಸೇವಾಕ್ಷೇತ್ರಗಳ ಅನ್ವೇಷಣೆ.

ಮೀನ: ಶನಿಮಹಾತ್ಮ ಆಗಾಗ ಮಹಿಮೆ ತೋರುತ್ತಿದ್ದರೂ ಕೃಪೆ ಬೀರುವುದರಿಂದ ಸಂಕಟಗಳು ದೂರ. ಉದ್ಯೋಗದಲ್ಲಿ ಆದಾಯದೊಂದಿಗೆ ಕೀರ್ತಿಯೂ ವೃದ್ಧಿ. ಹಿರಿಯರ ಬಳುವಳಿಯಾಗಿ ಬಂದ ಸಾಮಾಜಿಕ ಜವಾಬ್ದಾರಿ ನಿರ್ವಹಣೆಯಲ್ಲಿ ಯಶಸ್ವಿ. ಧಾರ್ಮಿಕ ಸಂಸ್ಥೆಯಲ್ಲಿ ಮತ್ತು ದೇವಾಲಯದಲ್ಲಿ ಹೆಚ್ಚಿನ ಸೇವೆ ಸಲ್ಲಿಸಲು ಅವಕಾಶ ಪ್ರಾಪ್ತಿ. ಸಂಗಾತಿಯ ಸಹಕಾರದಿಂದ ಕಾರ್ಯಗಳು ಯಶಸ್ವಿ.

Advertisement

Udayavani is now on Telegram. Click here to join our channel and stay updated with the latest news.

Next