Advertisement

Daily Horoscope: ಅತ್ಯುತ್ಸಾಹದಿಂದ ನಿರಾಶೆ ಎಂಬುದು ನೆನಪಿರಲಿ‌

07:30 AM Nov 19, 2023 | Team Udayavani |

ಮೇಷ: ಅದೃಷ್ಟದ ಆಟದಲ್ಲಿ ಗೆದ್ದವರಿಗೆ ಅಭಿನಂದನೆ ಹೇಳುವ ಸಮಯ. ವಿರಾಮದ ಸಂದರ್ಭದಲ್ಲಿ ಗೆಳೆಯರ ಭೇಟಿ. ಆಪ್ತರ ಸಹಾಯದಲ್ಲಿ ಉದ್ಯಮದ ವ್ಯಾಪ್ತಿ ವಿಸ್ತರಣೆ. ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮುಂದುವರಿಕೆ. ಅಸಹಾಯಕ ಅಪರಿಚಿತರಿಗೆ ಸಕಾಲಿಕ ಸಹಾಯ.

Advertisement

ವೃಷಭ: ಅರಸುತ್ತಿದ್ದ ಅವಕಾಶ ಸಿಗಲಿಲ್ಲವೆಂದು ಬೇಸರಪಡದಿರಿ. ಸ್ವಂತ ಉದ್ಯಮದ ಉತ್ಪನ್ನಗಳ ಪೂರೈಕೆ ವ್ಯಾಪ್ತಿ ನಿರೀಕ್ಷೆ ಮೀರಿ ವಿಸ್ತರಣೆ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಬಿಡುವಿಲ್ಲದಷ್ಟು ವ್ಯಾಪಾರ. ಯಂತ್ರೋಪಕರಣ ಮಾರಾಟಗಾರರಿಗೆ ಪೈಪೋಟಿಯ ಸಮಸ್ಯೆ.

ಮಿಥುನ: ಅತ್ಯುತ್ಸಾಹದಿಂದ ನಿರಾಶೆ ಎಂಬುದು ನೆನಪಿರಲಿ. ಪ್ರತಿಕ್ರಿಯೆ ನೀಡುವ ಮೊದಲು ಚೆನ್ನಾಗಿ ಯೋಚಿಸಿರಿ. ಹಿರಿಯ ವ್ಯಕ್ತಿಯ ಹಿತವಚನ ಪಾಲನೆಯಿಂದ ಲಾಭ. ಪಿತ್ರಾರ್ಜಿತ ಆಸ್ತಿಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಮುನ್ನಡೆ.

ಕರ್ಕಾಟಕ: ಕಳೆದುಕೊಂಡದ್ದನ್ನು ಮರಳಿ ಪಡೆದ ಸಂತೃಪ್ತಿ. ಸರಕಾರಿ ಉದ್ಯೋಗಿಗಳಿಗೆ ವಿರಾಮದ ಸಂಭ್ರಮ. ಕೃಷಿ ಕ್ಷೇತ್ರ ಅಭಿವೃದ್ಧಿಗೆ ಹೊಸ ಪ್ರಯೋಗಗಳ ಅಳವಡಿಕೆ. ವಿವಾಹಾಸಕ್ತರಿಗೆ ಸಮರ್ಪಕ ಜೋಡಿ ಲಭಿಸುವ ಸೂಚನೆ. ಧಾರ್ಮಿಕ ಗೃಂಥಗಳ ಪಠನ.

ಸಿಂಹ: ವಿಶೇಷ ಅನುಭವಗಳನ್ನು ಮೆಲುಕು ಹಾಕುತ್ತಾ ಕಾಲಾಯಾಪನೆ. ದಕ್ಷಿಣದಲ್ಲಿರುವ ನಿಕಟ ಬಂಧುಗಳೊಂದಿಗೆ ಸಮ್ಮಿಲನ. ಆಪ್ತರ ಬಳಗದೊಡನೆ ಯೋಗಕ್ಷೇಮ ವಿನಿಮಯ. ಹಳೆಯ ನೆಂಟರ ಮನೆಯವರ ಶುಭಕಾರ್ಯಕ್ಕೆ ಸಹಾಯ. ಹಿರಿಯರಿಗೆ ಉತ್ತಮ ಆರೋಗ್ಯ.

Advertisement

ನ್ಯಾ: ಹಿರಿಯರ ಆಸ್ತಿಯಲ್ಲಿ ದಿನವಿಡೀ ಕಳೆಯುವ ಅವಕಾಶ. ನವದಂಪತಿಗಳ ಆಗಮನ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಅರ್ಧ ದಿನದ ವ್ಯಾಪಾರದಲ್ಲಿ ಇಮ್ಮಡಿ ಲಾಭ. ಆಧ್ಯಾತ್ಮಿಕ ಪ್ರವಚನ ಮಾಡುವ ಆಸಕ್ತಿ. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ ಸಾಮಗ್ರಿ ದುರಸ್ತಿ ಬಲ್ಲವರಿಗೆ ಬಿಡುವಿಲ್ಲದಷ್ಟು ಕೆಲಸ.

ತುಲಾ: ಬಾನಿನಲ್ಲಿ ಕವಿದ ಮೋಡಗಳಂತೆ ಮನಸ್ಸಿನಲ್ಲಿ ತುಂಬಿರುವ ಚಿಂತೆಗಳೂ ತೊಲಗುವುದು ಖಂಡಿತ. ಪ್ರವಾಸ ಮುಗಿಸಿ ಬಂದವರಿಗೆ ನಾಳೆಗೋಸ್ಕರ ಮನೆಯನ್ನು ಸಜ್ಜುಗೊಳಿಸುವ ಕಾರ್ಯ. ದೇವತಾ ಸ್ಥಾನಕ್ಕೆ ಭೇಟಿ. ಭಜನೆ, ಸತ್ಸಂಗ, ಸಂಗೀತ ಶ್ರವಣ, ಹರಿಕಥಾ ಶ್ರವಣದಲ್ಲಿ ಕಾಲಯಾಪನೆ.

ವೃಶ್ಚಿಕ: ಅತೃಪ್ತಿ, ಅಸಮಾಧಾನಗಳಿಗೆ ಅವಕಾಶ ನೀಡಬೇಡಿ. ಸಂಸಾರದಲ್ಲಿ ನೆಮ್ಮದಿಯ ದಿನ. ಕುಟುಂಬದಲ್ಲಿ ಶಿಶು ಜನನ. ಹೂವು, ಹಣ್ಣು, ತರಕಾರಿ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ನೆರೆಮನೆಯಲ್ಲಿ ದೇವತಾರಾಧನೆ. ಕೃಷಿಕ್ಷೇತ್ರಕ್ಕೆ ಸಂದರ್ಶನ.

ಧನು: ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಕಾರ್ಯ ಯಶಸ್ವಿಯಾಗಿ ಸಮಾಪ್ತಿ. ವಿರಾಮದ ದಿನ ಬಂಧುಗಳಿಂದ ಭೇಟಿ. ಆದಾಯ ವೃದ್ಧಿ ಯೋಜನೆಗಳ ಕುರಿತು ಸಮಾಲೋಚನೆ. ಬಾಲ್ಯದ ಒಡನಾಡಿಯೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ. ಪುರಾಣ ವಾಚನ ಶ್ರವಣದಲ್ಲಿ ಆಸಕ್ತಿ.

ಮಕರ: ಆರು ದಿನಗಳ ಕಠಿನ ಶ್ರಮದಿಂದ ಬಿಡುಗಡೆ. ಸಾಹಿತ್ಯಾಧ್ಯಯನದ ಕಡೆಗೆ ಗಮನ. ವಿಚಾರಗೋಷ್ಠಿಗಳಲ್ಲಿ ಪಾಲುಗೊಳ್ಳುವಿಕೆ. ಕುಟುಂಬದ ಹಿರಿಯರ ಮನೆಗೆ ಸಂಸಾರ ಸಹಿತ ಭೇಟಿ. ವಧೂವರಾನ್ವೇಷಣೆಯಲ್ಲಿ ಆಸಕ್ತರಾಗಿರುವವರಿಗೆ ಶುಭ ಸಮಾಚಾರ.

ಕುಂಭ: ಕೆಲಸದ ಬದಲಾವಣೆಯೇ ವಿಶ್ರಾಂತಿ ಎಂಬ ಮಾತು ನಿಮ್ಮ ವಿಚಾರದಲ್ಲಿ ಸತ್ಯ. ವಿರಾಮದ ದಿನವಾದರೂ ಉದ್ಯೋಗ, ಉದ್ಯಮದ ವ್ಯವಸ್ಥೆಗಳು ಹಾಗೂ ಸಮಸ್ಯೆಗಳ ಕುರಿತು ಚಿಂತನೆ. ನಾಳೆಯ ರವಾನೆ ಕಾರ್ಯಗಳಿಗೆ ಇಂದೇ ಸಿದ್ಧತೆ.

ಮೀನ: ನಿತ್ಯದ ಕೆಲಸಗಳಿಗೆ ವಿರಾಮವಾದರೂ ಕ್ರಿಯಾಶೀಲತೆಗೆ ಚಾ ಲನೆ ನೀಡುವ ಆತುರ. ಸೋದರಿಯ ಮನೆಯಲ್ಲಿ ದೇವತಾ ಕಾರ್ಯ. ಕುಟುಂಬದ ಯೋಗಕ್ಷೇಮದ ಕುರಿತು ಮನೆಮಂದಿಯ ಜತೆಯಲ್ಲಿ ಕಲೆತು ಸಮಾಲೋಚನೆ. ವಿದ್ಯಾರ್ಥಿಗಳಾಗಿರುವ ಮಕ್ಕಳಿಗೆ ಭವಿಷ್ಯದ ಯೋಜನೆಗಳನ್ನು ರೂಪಿಸಿಕೊಳ್ಳಲು ಮಾರ್ಗದರ್ಶನ.ಪ್ರಾಪ್ತವಯಸ್ಕರಿಗೆ ಶೀಘ್ರ ವಿವಾಹ ಯೋಗ.

Advertisement

Udayavani is now on Telegram. Click here to join our channel and stay updated with the latest news.

Next