Advertisement

Daily Horoscope: ಒಂದರ ಮೇಲೊಂದು ಕಿರಿಕಿರಿ ತಂದಿಡುವ ನಕಾರಾತ್ಮಕ ಶಕ್ತಿಗಳ ಹಾವಳಿ

07:30 AM Nov 11, 2023 | Team Udayavani |

ಮೇಷ: ಅವಸರದಲ್ಲಿ ನಿರ್ಧಾರ ಕೈಗೊಳ್ಳದಿರಿ. ಉದ್ಯೋಗ ಸ್ಥಾನದಲ್ಲಿ ಕಳೆದು ಹೋದ ಹೆಸರು ಮತ್ತೆ ಪ್ರಾಪ್ತಿ.ಮಾರ್ಗದರ್ಶಕನ ಸ್ಥಾನ ಮುಂದುವರಿಕೆ. ಸ್ವಂತ ಉದ್ಯಮದ ನೌಕರರನ್ನು ಹುರಿದುಂಬಿಸುವ ಕ್ರಮ. ಆರೋಗ್ಯ ಉತ್ತಮ.

Advertisement

ವೃಷಭ: ಸೃಷ್ಟಿಯನ್ನು ವಿಶಾಲವಾಗಿಟ್ಟು ಕೊಂಡು ಮುನ್ನಡೆಯಿರಿ. ಉದ್ಯೋಗದಲ್ಲಿನ ಸ್ಥಾನ ಸ್ಥಿರ. ಹೊಸ ಉದ್ಯಮದಲ್ಲಿ ಕೈಜೋಡಿಸಲು ಆಹ್ವಾನ. ವ್ಯವಹಾರ ವಿಸ್ತರಣೆಗೆ ವಿತ್ತಸಂಸ್ಥೆಯ ನೆರವು ಲಭ್ಯ. ಗಣ್ಯರೊಂದಿಗೆ ಓಡಾಟದ ಸಂದರ್ಭ.

ಮಿಥುನ: ಒಂದರ ಮೇಲೊಂದು ಕಿರಿಕಿರಿಯನ್ನು ತಂದಿಡುವ ನಕಾರಾತ್ಮಕ ಶಕ್ತಿಗಳ ಹಾವಳಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿಯಾದರೂ ಗೌರವ ವೃದ್ಧಿ. ಸ್ವಂತ ಉದ್ಯಮ ಮಂದಗತಿಯಲ್ಲಿ ಪ್ರಗತಿ. ಹಿರಿಯರಿಗೆ ಅನಾರೋಗ್ಯದ ಭೀತಿ.

ಕರ್ಕ: ಸಂದರ್ಭಗಳ ಸದುಪಯೋಗವನ್ನು ಕಲಿತರೆ ಯಶಸ್ಸು ಅಬಾಧಿತ. ಉದ್ಯೋಗದ ವಿಷಯದಲ್ಲಿ ಆತಂಕ ಬೇಡ. ಪ್ರಾಚೀನ ವಿದ್ಯೆಯನ್ನು ಕಲಿಯುವ ಆಸಕ್ತಿ. ಅಧ್ಯಾಪಕ ವೃತ್ತಿಯವರಿಗೆ ಹೆಚ್ಚುವರಿ ಜವಾಬ್ದಾರಿಗಳು.

ಸಿಂಹ: ಕೆಲವೊಮ್ಮೆ ಮನುಷ್ಯ ಯೋಚಿಸಿ ದಂತೆಯೇ ವಾತಾವರಣ ನಿರ್ಮಾಣಗೊಳ್ಳುತ್ತದೆ ಎನ್ನುವುದಕ್ಕೆ ನಿಮ್ಮಷ್ಟು ಒಳ್ಳೆಯ ಉದಾಹರಣೆ ಇನ್ನೊಂದು ಸಿಗಲಾರದು. ಮುಟ್ಟಿದೆಲ್ಲ ಚಿನ್ನವಾಗುವ ದಿನ. ಉದ್ಯಮ ಉತ್ಪನ್ನಗಳಿಗೆ ವಿದೇಶದಿಂದಲೂ ಬೇಡಿಕೆ.

Advertisement

ಕನ್ಯಾ: ಅರಸುತ್ತಿರುವ ಬಳ್ಳಿ ಕಾಲಿಗೆ ಸುತ್ತಿಕೊಳ್ಳು ವಂತಹ ಅದೃಷ್ಟವಂತರು ನೀವು. ಉದ್ಯಮ ಆರಂಭಿಸುವ ಪ್ರಯತ್ನದಲ್ಲಿ¨ªಾಗಲೇ ಅಕಸ್ಮಾತ್‌ ಧನಾಗಮ. ಹಿರಿಯರ ಆಸ್ತಿ ಅಭಿವೃದ್ಧಿಯ ಯೋಜನೆ ಕಾರ್ಯರೂಪಕ್ಕೆ.

ತುಲಾ: ಆನಂದವನ್ನು ಬೇಕಾದಂತೆ ಆವಾಹಿಸಿ ಕೊಳ್ಳುವ ವಿದ್ಯೆಯನ್ನು ಬಲ್ಲವರಾಗಿರುವುದರಿದ ನಿಮ್ಮ ವ್ಯಕ್ತಿತ್ವ ನಿಗೂಢವಾಗಿ ಕಾಣಿಸುತ್ತದೆ! ಉದ್ಯೋಗ ಅಬಾಧಿತ. ಸ್ವಂತದ ಉದ್ಯಮ ತಕ್ಕಮಟ್ಟಿಗೆ ನಿರಾತಂಕ ಸ್ಥಿತಿ ಯಲ್ಲಿ. ನೌಕರರ ಕಾರ್ಯೋತ್ಸಾಹದಿಂದ ಯಶಸ್ಸು ಪ್ರಾಪ್ತಿ.

ವೃಶ್ಚಿಕ: ಸಂತೃಪ್ತಿ, ಸಮಾಧಾನಗಳ ದಿನ. ಸಹೋದ್ಯೋಗಿಗಳಿಗೆ ಪ್ರೋತ್ಸಾಹಪೂರ್ವಕ ಮಾರ್ಗದರ್ಶನದಿಂದ ಗೌರವ ವೃದ್ಧಿ. ವ್ಯವಹಾರ ಸ್ಥಾನಕ್ಕೆ ಗಣ್ಯರ ಸಂದರ್ಶನ. ಗೃಹೋತ್ಪನ್ನಗಳ ಮಾರಾಟದಿಂದ ನಿರೀಕ್ಷೆ ಮೀರಿದ ಲಾಭ.

ಧನು: ಯಾವುದೇ ಪರಿಸ್ಥಿತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸುವುದನ್ನು ಬಲ್ಲವರಿಗೆ ಬದುಕು ಸಮಸ್ಯೆಯಾಗುವುದಿಲ್ಲ. ಉದ್ಯೋಗವನ್ನು ಸಲೀಸಾಗಿ ನಿರ್ವಹಿಸುವಿರಿ. ಸಮಾಜದಲ್ಲಿ ಗೌರವ ವೃದ್ಧಿ. ಸಣ್ಣ ಪ್ರಮಾಣದಲ್ಲಿ ಕೃಷಿ ಆರಂಭ.

ಮಕರ: ಮೃದುಭಾಷಿಯಾಗಿರುವುದರಿಂದ ಸುಲಭದಲ್ಲಿ ಕಾರ್ಯಸಿದ್ಧಿ. ಉದ್ಯೋಗದಲ್ಲಿ ಪ್ರತಿಭೆಗೆ ಮಾನ್ಯತೆ. ಲೆಕ್ಕ ಪರಿಶೋಧಕರು, ವೈದ್ಯರು, ಎಂಜಿನಿಯರ್‌ರು ಮೊದಲಾದ ವೃತ್ತಿಪರರಿಗೆ ಮುಗಿಯದ ಆತಂಕ. ಹತ್ತಿರದ ದೇವಾಲಯಕ್ಕೆ ಭೇಟಿ.

ಕುಂಭ: ಸಂಪತ್ತಿನ ಸದ್ವಿನಿಯೋಗದ ಯೋ ಚನೆ. ಉದ್ಯೋಗದಲ್ಲಿ ಇನ್ನಷ್ಟು ವೇತನ ಏರಿಕೆಯೊಂದಿಗೆ ಜವಾಬ್ದಾರಿ ಹೇರಿಕೆ. ಸಾಮಾಜಿಕ ಕಾರ್ಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳುವ ಆಸಕ್ತಿ. ಬಂಧುವರ್ಗದಲ್ಲಿ ವಿವಾಹಕ್ಕೆ ಸಹಾಯ.

ಮೀನ: ಸಪ್ತಾಹದಲ್ಲಿ ಕೈಗೆತ್ತಿಕೊಂಡ ಮುಖ್ಯಕಾರ್ಯಗಳ ಮುಕ್ತಾಯ.ಉದ್ಯೋಗದಲ್ಲಿ ಅನಿರೀಕ್ಷಿತವಾದ ಗುರುಸ್ಥಾನ ಪ್ರಾಪ್ತಿ. ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ವಿಭಾಗದಲ್ಲಿ ವಿಶ್ವಾಸ ಉಳಿಕೆ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ. ಧಾರ್ಮಿಕ ಕಾರ್ಯಗಳಿಗೆ ಹೆಚ್ಚು ಸಮಯ ವಿನಿಯೋಗಿಸಲು ಮನೆಯವರ ಸಹಕಾರ.

Advertisement

Udayavani is now on Telegram. Click here to join our channel and stay updated with the latest news.

Next