Advertisement

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

07:13 AM May 23, 2022 | Team Udayavani |

ಮೇಷ:

Advertisement

ಅನಿರೀಕ್ಷಿತ ಧನಾಗಮ. ಉತ್ತಮ ಸ್ಥಾನ ಗೌರವ ಪ್ರಾಪ್ತಿ. ಸಂದರ್ಭಕ್ಕೆ ಸರಿಯಾದ ಆಲೋಚನೆಯಿಂದ ಕಾರ್ಯ ಕ್ಷೇತ್ರದಲ್ಲಿ ಅಭಿವೃದ್ಧಿ. ದಾಂಪತ್ಯ ಸಾಂಸಾರಿಕ ಸುಖ ಅಭಿವೃದ್ಧಿ. ಗುರು ಹಿರಿಯರಿಂದ ಪ್ರೋತ್ಸಾಹ ಇತ್ಯಾದಿ ಶುಭ ಫ‌ಲ.

ವೃಷಭ:

ಭೂಮಿ ಇತ್ಯಾದಿ ಆಸ್ತಿ ವಿಚಾರಗಳಲ್ಲಿ ಅಭಿವೃದ್ಧಿ. ಪಾಲುದಾರಿಕಾ ವೃತ್ತಿ ಕ್ಷೇತ್ರದವರಿಗೆ ದೂರದ ವ್ಯವಹಾರಗಳಲ್ಲಿ ಪ್ರಗತಿ. ಜವಾ ಬ್ದಾರಿಯಿಂದ ಕೂಡಿದ ಕಾರ್ಯ ವೈಖರಿ. ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ಉತ್ತಮ. ಹಿರಿಯರನ್ನು ಅನುಸರಿಸಿ .

ಮಿಥುನ:

Advertisement

ಮಿತ್ರರಿಂದಲೂ ಸಹೋದ್ಯೋಗಿಗಳಿಂದಲೂ ಸಿಗುವ ಸಹಕಾರವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದರಿಂದ ಕಾರ್ಯಕ್ಷೇತ್ರದಲ್ಲಿ ಅಭಿ ವೃದ್ಧಿ. ನಿರೀಕ್ಷಿತ ಧನಾಗಮನ. ಪಾಲುದಾರಿಕೆ ವಿಚಾರದಲ್ಲಿ ಸಹನೆ ಅಗತ್ಯ. ಗುರುಹಿರಿಯರ ಆಶೀರ್ವಾದ ಲಭ್ಯ.

ಕರ್ಕ:

ಉನ್ನತ ಸ್ಥಾನ ಸುಖ. ಗೌರವ ಆದರಾ ದಿಗಳು ವೃದ್ಧಿ. ಉತ್ತಮ ಧನಾರ್ಜನೆ. ಮಿತ್ರ ವರ್ಗದಿಂದ ಸಹಕಾರ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ. ಗುರು ಹಿರಿಯರ ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣ ಸಂಭವ. ದಾಂಪತ್ಯ ತೃಪ್ತಿದಾಯಕ.

ಸಿಂಹ:

ಹಲವು ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಕಾರ್ಯಗಳು ಪುನರಾರಂಭಗೊಳ್ಳುವ ಸ್ಥಿತಿಯಿಂದ ನೆಮ್ಮದಿ. ಆದಾಯ ಉತ್ತಮವಾಗಿದ್ದರೂ ಖರ್ಚಿಗೆ ಹಲವು ಮಾರ್ಗ. ಗುರು ಹಿರಿಯರಿಂದ ಪ್ರೋತ್ಸಾಹ, ದೈರ್ಯ ತುಂಬುವ ನಡೆ. ತಾಳ್ಮೆ ಅಗತ್ಯ.

ಕನ್ಯಾ:

ಪಾಲುದಾರಿಕಾ ವ್ಯವಹಾರಗಳಲ್ಲಿ ಒಗ್ಗಟ್ಟಿನಿಂದ ವ್ಯವಹರಿಸಿದರೆ ಅಧಿಕ ಧನಲಾಭ ಸಂಭವ. ದೂರದ ಕಾರ್ಯಗಳಲ್ಲಿ ಪ್ರಗತಿ. ವಿದ್ಯಾ ರ್ಥಿಗಳಿಗೆ ಉತ್ತಮ ಅವಕಾಶಗಳು ಕಂಡುಬಂದಾವು. ಸಾಂಸಾರಿಕ ಸುಖ ತೃಪ್ತಿದಾಯಕ. ಆರೋಗ್ಯ ಗಮನಿಸಿ.

ತುಲಾ:

ನಿರೀಕ್ಷಿತ ಸ್ಥಾನ ಸುಖ. ಉತ್ತಮ ಧನಾರ್ಜನೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ. ಸ್ವಲ್ಪ ಮಾನಸಿಕ ಒತ್ತಡ. ದಾಂಪತ್ಯ ಸುಖ ದಲ್ಲಿ ಅನುರಾಗ ವೃದ್ಧಿ. ಗುರುಹಿರಿಯರಿಂದ ಉತ್ತಮ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶ.

ವೃಶ್ಚಿಕ:

ಉದ್ಯೋಗ ವ್ಯವಹಾರದಲ್ಲಿ ಉತ್ತಮ ಸ್ಥಿರ ಅಭಿವೃದ್ಧಿ. ಗೌರವಾದಿ ಸುಖ ಪ್ರಾಪ್ತಿ. ಆರ್ಥಿಕ ವಿಚಾರದಲ್ಲಿ ಮನಃ ಸಂತೋಷ. ದಾಂಪತ್ಯ, ಸಂತತಿ ಸಾಂಸಾರಿಕ ವಿಚಾರದಲ್ಲಿ, ಗುರುಹಿ ರಿಯರ ವಿಚಾರದಲ್ಲಿ ಸಂತಸದ ವಾತಾವರಣ.

ಧನು:

ಆರೋಗ್ಯದಲ್ಲಿ ಸುಧಾರಣೆ. ಮಿತ್ರರಲ್ಲಿ ಪಾಲುದಾರರಲ್ಲಿ, ಸಂಸಾರದಲ್ಲಿ ತಾಳ್ಮೆ, ಸಹನೆ ಅಗತ್ಯ. ದುಡುಕು ನಿರ್ಧಾರಕ್ಕೆ ಅವಕಾಶ ನೀಡದಿರಿ. ಮಕ್ಕಳಿಂದ ಸಂತೋಷ ವೃದ್ಧಿ. ಗುರು ಹಿರಿಯರ ಆರೋಗ್ಯ ಗಮನಿಸಿ. ಅಭಿವೃದ್ಧಿಯ ಧನಾರ್ಜನೆ. ಸಹಾಯ ಲಭ್ಯ.

ಮಕರ:

ಆರೋಗ್ಯ ಉತ್ತಮ ಧನಾರ್ಜನೆಯ ವಿಚಾರದಲ್ಲಿ ಅಡೆತಡೆಗಳು ನಿವಾರಣೆ. ಸಹೋದ್ಯೋಗಿಗಳ, ಪಾಲುದಾರರ ಸಹಕಾರದಿಂದ ವ್ಯವಹಾರ ಪ್ರಗತಿ. ಗೃಹೋಪಯೋಗಿ ವಸ್ತುಗಳಿಗಾಗಿ ಧನವ್ಯಯ. ಜವಾಬ್ದಾರಿಯುತ ನಡೆ. ದಾಂಪತ್ಯ ಸುಖ .

ಕುಂಭ:

ಆರೋಗ್ಯದಲ್ಲಿ ಗಮನಹರಿಸಿ. ದೀರ್ಘ‌ ಪ್ರಯಾಣದಿಂದ ಆಯಾಸ ಸಾಧ್ಯತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಸಾಧನೆ. ಅಧಿಕ ಧನ ಸಂಪಾದನೆಯ ಸಮಯ. ಗೃಹ ಭೂಮಿ ಇತ್ಯಾದಿ ವಿಚಾರಗಳಲ್ಲಿ ಬದಲಾವಣೆ ಸಂಭವ.

ಮೀನ:

ಉದ್ದೇಶಿತ ಕಾರ್ಯ ಸಾಧನೆಗಾಗಿ ದೀರ್ಘ‌ ಪ್ರಯಾಣ. ನಾಯಕತ್ವ ಗುಣ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಮೇಲಧಿಕಾರಿಗಳ ವಿಶ್ವಾಸಕ್ಕಾಗಿ ಹೆಚ್ಚಿನ ಶ್ರಮ ಅಗತ್ಯ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಸ್ಥಾನ ಪ್ರಾಪ್ತಿ.

Advertisement

Udayavani is now on Telegram. Click here to join our channel and stay updated with the latest news.

Next