Advertisement

Daily Horoscope: ಭಗವಂತನ ಅನುಗ್ರಹದಿಂದ ಆಪತ್ತುಗಳು ದೂರ, ಆರೋಗ್ಯ ಉತ್ತಮ

07:36 AM Jan 25, 2024 | Team Udayavani |

ಮೇಷ: ಗಾಢವಾದ ಪ್ರಾರ್ಥನೆಯಿಂದ ಇಷ್ಟಾರ್ಥ ಸಿದ್ಧಿ. ಸಪ್ತಾಹದ ನಡುವಿನಲ್ಲಿ ಉದ್ಯೋಗ ಸ್ಥಾನದಲ್ಲಿ ದೊಡ್ಡವರಿಂದ ಪ್ರಶಂಸೆ. ಉದ್ಯಮದ ನೌಕರರಲ್ಲಿ ಉತ್ಸಾಹ ತುಂಬುವ ಮಾತುಗಳು. ಕೃಷಿ ಕ್ಷೇತ್ರಕ್ಕೆ ಭೇಟಿಯಿಂದ ತೃಪ್ತಿ.

Advertisement

ವೃಷಭ: ಉದ್ಯೋಗದ ಹೊಣೆಗಾರಿಕೆ ನಿರ್ವಹಣೆಯಲ್ಲಿ ಯಶಸ್ವಿ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಉಳಿಸಿಕೊಳ್ಳುವಿರಿ. ಬಂಧುವರ್ಗ ದಲ್ಲಿ ಶುಭಕಾರ್ಯ. ಆಪ್ತಮಿತ್ರನ ಹಠಾತ್‌ ಭೇಟಿ. ಇಷ್ಟದೇವರ ಆಲಯ ಸಂದರ್ಶನ.

ಮಿಥುನ: ಭಗವಂತನ ಅನುಗ್ರಹದಿಂದ ಆಪತ್ತುಗಳು ದೂರ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಅನುಭವಗಳಿಗೆ ಮನ್ನಣೆ. ಉದ್ಯಮದ ನೌಕರರ ಮೇಲೆ ವಾತ್ಸಲ್ಯ ಪ್ರಕಟನೆ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ. ಆರೋಗ್ಯ ಉತ್ತಮ.

ಕರ್ಕಾಟಕ: ಶಿಸ್ತುಬದ್ಧವಾದ ಕಾರ್ಯಪದ್ಧತಿ ಯಿಂದ ಶೀಘ್ರ ಯಶಸ್ಸು. ಉದ್ಯೋಗ ಸ್ಥಾನದಲ್ಲಿ ರೋಲ್‌ ಮಾಡೆಲ್‌ ಆಗುತ್ತಿದ್ದೀರಿ. ವಸ್ತ್ರ ಆಭರಣ, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಎಲ್ಲರ ಆರೋಗ್ಯ ಉತ್ತಮ.

ಸಿಂಹ: ದೀರ್ಘಾವಧಿ ಕಾರ್ಯವನ್ನು ಶೀಘ್ರ ಮುಗಿಸಿದ ಸಮಾಧಾನ. ಉದ್ಯೋಗ ಸ್ಥಾನ ದಲ್ಲಿ ಗೌರವ ವೃದ್ಧಿ. ಉದ್ಯೋಗಾಸಕ್ತ ಹುಡುಗರಿಗೆ ಸಮಯೋಚಿತ ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ ಮಾನಸಿಕ ಒತ್ತಡ ನಿವಾರಣೆಗೆ ಆಪ್ತ ಸಲಹೆ.

Advertisement

ಕನ್ಯಾ: ಹಿತಶತ್ರುಗಳ ಹೂಟವನ್ನು ವಿಫ‌ಲಗೊಳಿಸುವ ಪ್ರಯತ್ನ ಯಶಸ್ವಿ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಮೇಲಧಿಕಾರಿಗಳಿಗೆ ಹರ್ಷ. ಉದ್ಯಮದ ಅಭಿವೃದ್ಧಿಗೆ ಸಾಮೂಹಿಕ ಪ್ರಯತ್ನ. ಕುಟುಂಬದ ಹಿರಿಯರ ಭೇಟಿ.

ತುಲಾ: ಚಿತ್ತ ಸ್ಥೆ„ರ್ಯದಿಂದ ಕಾರ್ಯದಲ್ಲಿ ಜಯ. ಕುಲಗುರುಗಳ ದರ್ಶನ. ಉದ್ಯೋಗಸ್ಥಾನದಲ್ಲಿ ಸಹೋದ್ಯೋಗಿಗಳಿಗೆ ಸಹಾಯ. ಸೋದರ ಸಂಬಂಧಿಯ ವಿವಾಹ ಸಮಾರಂಭ. ಮಕ್ಕಳ ಪ್ರತಿಭಾ ಪ್ರದರ್ಶನದಿಂದ ಪೋಷಕರಿಗೆ ಹರ್ಷ.

ವೃಶ್ಚಿಕ: ಎಲ್ಲ ಕಾರ್ಯಕ್ಷೇತ್ರಗಳಲ್ಲೂ ಸಮಾನ ಸಮಾಧಾನದ ದಿನ. ಉದ್ಯಮ ನೌಕರರಿಂದ ಗೌರವಾರ್ಪಣೆ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ. ಸಟ್ಟಾ ವ್ಯವಹಾರ ಬೇಡ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ.

ಧನು: ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳು ಪುನರಾರಂಭ. ದೀರ್ಘ‌ಕಾಲ ತಪ್ಪಿಹೋಗಿದ್ದ ಗೆಳೆಯರ ಸಂಪರ್ಕ ಮತ್ತೆ ಆರಂಭ. ಉದ್ಯಮದ ನೌಕರ ವೃಂದಕ್ಕೆ ಹರ್ಷ. ಕೃಷಿ ಚಟುವಟಿಕೆಗಳ ವಿಸ್ತರಣೆ ಆರಂಭ.

ಮಕರ: ಅಸಂಸ್ಕೃತರ ಪ್ರವೇಶದಿಂದ ಕೆಲಸ ನಿರ್ವಿಘ್ನವಾಗಿ ಸಾಗಲು ತೊಂದರೆ. ಅಸ್ವಸ್ಥ ಸಹೋದ್ಯೋಗಿಗೋಸ್ಕರ ವೈದ್ಯರ ಭೇಟಿ. ಸ್ವಂತ ವೃತ್ತಿ ಆರಂಭಿಸಲು ಆಪ್ತರ ಮಾರ್ಗದರ್ಶನ. ಬಂಗಾರ ಖರೀದಿಗೆ ಧನವ್ಯಯ. ಆಪ್ತರ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ.

ಕುಂಭ: ಉದ್ಯೋಗ ಸ್ಥಾನದಲ್ಲಿ ಸೂಕ್ತ ಮಾರ್ಗ ದರ್ಶನದ ಜವಾಬ್ದಾರಿ. ಉದ್ಯಮ ಸ್ಥಾನದ ಅಭಿವೃದ್ಧಿ ಕಾರ್ಯಗಳ ನೇತೃತ್ವ. ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ.

ಮೀನ: ಸಂಸಾರ, ಉದ್ಯೋಗ, ವ್ಯವಹಾರಗಳ ಯಶಸ್ವೀ ನಿರ್ವಹಣೆ ಮಾಡಿದ ತೃಪ್ತಿ. ಉದ್ಯೋಗ ಸ್ಥಾನದಲ್ಲಿ ವೃತ್ತಿಬಾಂಧವರ ಸಂಪೂರ್ಣ ಸಹಕಾರ.ಸರಕಾರಿ ಇಲಾಖೆಯ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದನ. ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ. ಕೃಷಿಯೊಂದಿಗೆ ಸಣ್ಣ ಪ್ರಮಾಣದಲ್ಲಿ ಪಶುಪಾಲನೆ, ಜೇನು ವ್ಯವಸಾಯ ಆರಂಭ.

Advertisement

Udayavani is now on Telegram. Click here to join our channel and stay updated with the latest news.

Next