Advertisement

Daily Horoscope: ಆಪ್ತರ ಹುರಿದುಂಬಿಸುವ ಮಾತುಗಳಿಂದ ಧೈರ್ಯ ವರ್ಧನೆ, ದೇಹಾರೋಗ್ಯ ಉತ್ತಮ

07:24 AM Jan 18, 2024 | Team Udayavani |

ಮೇಷ: ದೇಹಾರೋಗ್ಯ ಉತ್ತಮ. ಮನಸ್ಸಿಗೆ ನೆಮ್ಮದಿ. ಕಾರ್ಯರಂಗದಲ್ಲಿ ಮುನ್ನಡೆ. ಉದ್ಯೋಗ ಸ್ಥಾನದಲ್ಲಿ ಚುರುಕಿನ ವಾತಾವರಣ. ಕೆಲವು ಬಗೆಯ ಉದ್ಯಮಗಳಲ್ಲಿ ಸ್ವಲ್ಪ ಕಡಿಮೆಯಾದ ಪೈಪೋಟಿ. ಹಿತೈಷಿಗಳಿಂದ ಸಕಾಲಿಕ ನೆರವು ಲಭ್ಯ.

Advertisement

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ಗೌರವದ ಸ್ಥಾನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸ್ಥಾನ ಬದಲಾವಣೆ. ಖಾಸಗಿ ಉದ್ಯಮಗಳಲ್ಲಿ ಉತ್ಪಾದನೆ ಹೆಚ್ಚಳ. ಷೇರು ವ್ಯವಹಾರದಲ್ಲಿ ಕೊಂಚ ಲಾಭ. ಧಾರ್ಮಿಕ ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ.

ಮಿಥುನ: ಅಕಾರಣವಾಗಿ ಹಗೆ ಸಾಧಿಸುವ ವಿಕೃತ ಮನಸ್ಕರಿಂದ ಪೀಡನೆ. ಉದ್ಯೋಗ ಸ್ಥಾನದಲ್ಲಿ ಸುಮಾರಾಗಿ ನೆಮ್ಮದಿಯ ವಾತಾವರಣ. ಸ್ವಂತ ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ಆಪ್ತರ ಹುರಿದುಂಬಿಸುವ ಮಾತುಗಳಿಂದ ಧೈರ್ಯ ವರ್ಧನೆ.

ಕರ್ಕಾಟಕ: ಇಷ್ಟ ದೇವತಾರ್ಚನೆಯಿಂದ ಪರಿಸ್ಥಿತಿ ನಿಭಾಯಿಸಲು ಶಕ್ತಿ. ಉದ್ಯೋಗ ಸ್ಥಾನ ದಲ್ಲಿ ಪ್ರತಿಭೆ, ಕಾರ್ಯಕ್ಷಮತೆಗೆ ಪ್ರಾಶಸ್ತ್ಯ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಪಾಲನೆಯಿಂದ ಹೆಚ್ಚಿದ ಆಕರ್ಷಣೆ. ದೀರ್ಘಾವಧಿ ಹೂಡಿಕೆಯಲ್ಲಿ ಲಾಭ.

ಸಿಂಹ: ಪ್ರಗತಿ ನಿಧಾನವಾದಂತೆ ಕಂಡರೂ ಮುನ್ನಡೆಗೆ ಅಡ್ಡಿಯಿಲ್ಲ. ಉದ್ಯೋಗಸ್ಥರಿಗೆ ವೇತನ ಏರಿಕೆ. ಬಾಯ್ದೆರೆ ಪ್ರಚಾರದಿಂದ ವ್ಯಾಪಾರ ವೃದ್ಧಿ. ಕಟ್ಟಡ ನಿರ್ಮಾಣ ಕಾಮವ್ಯಾಗಳು ತ್ವರಿತ ಗತಿಯಲ್ಲಿ. ನಿವೇಶನ ಖರೀದಿ ಮಾತುಕತೆ ಮುನ್ನಡೆ.

Advertisement

ಕನ್ಯಾ: ಬಹುಪಾಲು ನೆಮ್ಮದಿಯ ದಿನ. ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಣನಾರ್ಹ ಪ್ರಗತಿ. ಬಂಧು ಗಳ ಮನೆಯಲ್ಲಿ ಶುಭಕಾರ್ಯಕ್ಕೆ ಸಿದ್ಧತೆ. ಉದ್ಯೋಗಾಸಕ್ತ ರನ್ನು ಅರಸಿ ಬರುವ ಅವಕಾಶಗಳು.

ತುಲಾ: ಎಲ್ಲ ಸಮಸ್ಯೆಗಳಿಗೂ ಸರಿಯಾದ ಸರಿ ಯಾದ ಸಮಯದಲ್ಲಿ ಪರಿಹಾರ. ಉದ್ಯೋಗ ದಲ್ಲಿ ಪ್ರತಿಭೆಗೆ ತಕ್ಕ ಗೌರವ ಪ್ರಾಪ್ತಿ. ಅಕಸ್ಮಾತ್‌ ಧನ ಪ್ರಾಪ್ತಿ. ವಿತ್ತ ಸಂಸ್ಥೆಯಿಂದ ನೆರವಿನಿಂದ ಉದ್ಯಮದ ಕಟ್ಟಡ ವಿಸ್ತರಣೆ ಆರಂಭ.

ವೃಶ್ಚಿಕ: ಸಕಲ ಬಗೆಯ ವಿಘ್ನ ವಿಡೂxರಗಳಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ಸ್ವಯಂ ಯೋಗ್ಯತೆಯಿಂದ ಗೌರವ. ವಿಸ್ತೃತ ಕಾರ್ಯವ್ಯಾಪ್ತಿಯ ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ.

ಧನು: ಕುಟುಂಬದ ವಲಯದಲ್ಲಿ ಸ್ವಲ್ಪ ಏರುಪೇರಾದ ವಾತಾವರಣ. ಆತ್ಮೀಯರಿಂದ ಸಕಾಲಿಕ ಸ್ಪಂದನ. ಉದ್ಯೋಗ ಸ್ಥಾನದಲ್ಲಿ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿ ವೃದ್ಧಿ. ಕೃಷಿ ಭೂಮಿಯಲ್ಲಿ ಮುಂದುವರಿದ ಅಭಿವೃದ್ಧಿ.

ಮಕರ: ನ್ಯಾಯಾಲಯದಲ್ಲಿರುವ ಮೊಕದ್ದಮೆ ತೀರ್ಮಾನ ಮುಂದಕ್ಕೆ. ಉದ್ಯೋಗ ಸ್ಥಾನದಲ್ಲಿ ನೆಮ್ಮದಿ. ಉದ್ಯಮಿಗಳಿಗೆ ಶುಭದಿನ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ನೂತನ ನಿವೇಶನ ಖರೀದಿಗೆ ಮಾತುಕತೆ ಮುಕ್ತಾಯ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಮಾನ್ಯಲಾಭ.

ಕುಂಭ: ಹಲವು ಮೂಲಗಳಿಂದ ಆದಾಯ ವೃದ್ಧಿ. ಸರಕಾರಿ ನೌಕರರಿಗೆ ವರ್ಗಾವಣೆಯಿಂದ ಅನುಕೂಲ. ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಊರಿನ ಉತ್ಸವಕ್ಕಾಗಿ ಬಂಧುಗಳ ಆಗಮನ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.

ಮೀನ: ಗುರುಕೃಪೆಯಿಂದ ಶನಿಮಹಾತ್ಮನ ಪೀಡೆ ಶಮನ. ಉದ್ಯೋಗ ಸ್ಥಾನದ ಆತಂಕ ದೂರ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ಸೋದರಿಯ ಕುಟುಂಬದಲ್ಲಿ ಶುಭಕಾರ್ಯ ನಿಶ್ಚಯ. ದೇವಾಲಯದ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next