Advertisement

Daily Horoscope: ಹಲವು ಸಂದರ್ಭಗಳಲ್ಲಿ ವಿಜಯ ಪ್ರಾಪ್ತಿ,ಅಪೇಕ್ಷೆಗಳು ಬಹುಪಾಲು ಫ‌ಲಿಸುವ ದಿನ

07:17 AM Feb 27, 2024 | Team Udayavani |

ಮೇಷ: ನಿಮ್ಮ ಅಪೇಕ್ಷೆಗಳು ಬಹುಪಾಲು ಫ‌ಲಿಸುವ ದಿನ. ಉದ್ಯೋಗ ಸ್ಥಾನದಲ್ಲಿ ನಿಮ್ಮ ಇಷ್ಟದಂತೆ ಏರ್ಪಾಡುಗಳು. ಉದ್ಯಮ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ಇಂದಿನ ಮಟ್ಟಿಗೆ ಅನುಕೂಲ.

Advertisement

ವೃಷಭ: ಬಹುಪಾಲು ಆಕಾಂಕ್ಷೆಗಳು ನೆರವೇರುವ ದಿನ. ಹಿಂದೆಯೇ ಆಗಬೇಕಾಗಿದ್ದ ವೇತನಾದಿ ಸೌಲಭ್ಯ ಸುಧಾರಣೆ.. ಸರಕಾರಿ ಅಧಿಕಾರಿಗಳಿಗೆ ಇಷ್ಟಾರ್ಥ ಸಿದ್ಧಿ. ಉದ್ಯಮದ ಉತ್ಪನ್ನಗಳ ಗ್ರಾಹಕರ ಸಂಖ್ಯೆ ಹೆಚ್ಚಳ.

ಮಿಥುನ: ಹಲವು ಸಂದರ್ಭಗಳಲ್ಲಿ ವಿಜಯ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ವಿಭಾಗ ಬದಲಾವಣೆ. ಸ್ವಂತ ಉದ್ಯಮದ ಪರಿಸ್ಥಿತಿ ಸುಧಾರಣೆ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ. ಅಲ್ಪಕಾಲಿಕ ಹೂಡಿಕೆಗಳ ಯೋಚನೆ ಬೇಡ.

ಕರ್ಕಾಟಕ: ಕುತಂತ್ರಿಗಳ ಜಾಲದಲ್ಲಿ ಸಿಲುಕದಂತೆ ಎಚ್ಚರ. ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಉದ್ಯಮಿಗಳಿಗೆ ನ್ಯಾಯಾಲಯದಲ್ಲಿ ಜಯ. ನೌಕರರ ಕ್ಷೇಮಾಭಿವೃದ್ಧಿ ಯೋಜನೆ ಜಾರಿ.ಖಾದಿ, ಗ್ರಾಮೋದ್ಯೋಗಗಳಿಗೆ ಅಭಿವೃದ್ಧಿಯ ಕಾಲ.

ಸಿಂಹ: ನಡೆದು ಬಂದ ದಾರಿಯ ಸಿಂಹಾವಲೋಕನದಿಂದ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಹೊಸ ವ್ಯವಸ್ಥೆಗಳು ಆರಂಭ. ಉದ್ಯಮದ ಉತ್ಪನ್ನಗಳಿಗೆ ಹೊರಗಿನಿಂದ ಬೇಡಿಕೆ ಹೆಚ್ಚಳ. ಮಹಿಳೆಯರ ಗೃಹೋದ್ಯಮಗಳು ಯಶಸ್ಸಿನತ್ತ.

Advertisement

ಕನ್ಯಾ: ಉದ್ಯೋಗ,ವ್ಯವಹಾರಗಳಲ್ಲಿ ಹೊಸ ಅನುಭವ. ಸರಕಾರಿ ಉದ್ಯೋಗಿಗಳಿಗೆ ಕೊಂಚ ನೆಮ್ಮದಿ. ವಿದ್ಯುತ್‌ ಮತ್ತು ಎಲೆಕ್ಟ್ರಾನಿಕ್ಸ್‌ ಉದ್ಯಮಗಳಿಗೆ ಅಧಿಕ ಲಾಭ. ಅವಿವಾಹಿತರಿಗೆ ಶೀಘ್ರ ವಿವಾಹ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ.

ತುಲಾ: ಸತತ ಸಾಧನೆಯಿಂದ ದೈವಾನುಗ್ರಹ ಪ್ರಾಪ್ತಿ. ಉದ್ಯೋಗದಲ್ಲಿ ಕೊಂಚ ಸಮಾಧಾನ.. ಹಳೆಯ ಪರಿಚಿತರಿಂದ ವೃತ್ತಿ ಪರಿಣತಿ ವೃದ್ಧಿಗೆ ಸಹಾಯ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ.

ವೃಶ್ಚಿಕ: ಹೊಸ ಪರಿಸರಕ್ಕೆ ಹೊಂದಿಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಕೊಂಚ ಮುನ್ನಡೆಯ ಸಾಧ್ಯತೆ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆಯೊಂದಿಗೆ ನಿಧಾನ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಹಳೆಯ ನಿಕಟ ಪರಿಚಿತರ ಅಕಸ್ಮಾತ್‌ ಭೇಟಿ.

ಧನು: ಬದುಕಿನ ನಿತ್ಯ ಹೋರಾಟದಲ್ಲಿ ವಿಜಯದ ಆನಂದ. ಉದ್ಯೋಗದಲ್ಲಿ ಲಭಿಸಿದ ನಾಯಕತ್ವ ಭದ್ರ. ಸಣ್ಣ ಪ್ರಮಾಣದ ಗೃಹೋದ್ಯಮ ಉತ್ತಮ ಸ್ಥಿತಿಯಲ್ಲಿ.ಪರಿಸರ ರಕ್ಷಣೆಯ ಕಾರ್ಯಗಳಲ್ಲಿ ಆಸಕ್ತಿ.ಊರಿನ ದೇವಾಲಯಕ್ಕೆ ಸಂದರ್ಶನ.

ಮಕರ: ಇಮ್ಮಡಿ ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ ಮುಂದುವರಿಕೆ. ಉದ್ಯಮಕ್ಕೆ ಹೊಸ ನೌಕರರ ಸೇರ್ಪಡೆ. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ.

ಕುಂಭ: ಯಾವ ಸತ್ಕರ್ಮವೂ ನಿಷ#ಲವಾಗು ವುದಿಲ್ಲ. ಉದ್ಯೋಗಸ್ಥಾನದಲ್ಲಿ ಗುರುಸ್ಥಾನ ಭದ್ರ. ಉದ್ಯಮದ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸ್ಟೇಶನರಿ, ಶೋಕಿ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಬಂಧುಗಳ ಮನೆಯಲ್ಲಿ ಶುಭ ಸಮಾರಂಭ.

ಮೀನ: ಕ್ರಿಯಾಶೀಲರಿಗೆ ಕೆಲಸದ ಹೊರೆ ಕಡಿಮೆಯಾಗುವ ಪ್ರಶ್ನೆಯಿಲ್ಲ. ವೃತ್ತಿ ಬಾಂಧವರ ಸರ್ವವಿಧ ಸಹಾಯ. ಇಲಾಖೆಗಳವರಿಂದ ಅನುಕೂಲವಾಗಿ ಸ್ಪಂದನ. ಜನಸೇವಾ ಕಾರ್ಯಗಳು ಮುಂದುವರಿಕೆ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next