Advertisement

Daily Horoscope: ಧನಸಹಾಯ ಕೈಸೇರಲು ಹಿತಶತ್ರುಗಳು ಅಡ್ಡಿ, ಆಪ್ತರಿಂದ ನಿರೀಕ್ಷಿತ ಸಹಾಯ

07:16 AM Feb 22, 2024 | Team Udayavani |

ಮೇಷ: ಉದ್ಯೋಗದಲ್ಲಿ ನಿಮ್ಮ ಪ್ರಾವೀಣ್ಯಕ್ಕೆ ಮನ್ನಣೆ. ವ್ಯವಹಾರದಲ್ಲಿ ವಿವೇಕಯುತ ನಡೆಯಿಂದ ಯಶಸ್ಸು. ಕಾರ್ಯಕ್ಷೇತ್ರ ವಿಸ್ತರಣೆಗೆ ಅವಸರ ಪಡದಿರಿ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಹೇರಳ ಲಾಭ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಉತ್ತಮ ಆದಾಯ.

Advertisement

ವೃಷಭ: ವ್ಯವಹಾರ ಸಾಧಿಸಲು ಅಪರಿಚಿತರಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಅನುಕೂಲದ ವಾತಾವರಣ.ಅನಿರೀಕ್ಷಿತ ಮೂಲದಿಂದ ಧನಸಹಾಯ. ಊರಿನ ದೇವಾಲಯಕ್ಕೆ ಕುಟುಂಬಸಹಿತ ಭೇಟಿ. ಮಕ್ಕಳ ವಿವಾಹ ತಪ್ಪಿಸಲು ಹಿತಶತ್ರುಗಳ ಪಿತೂರಿ.

ಮಿಥುನ: ಧನಸಹಾಯ ಕೈಸೇರಲು ಹಿತಶತ್ರುಗಳು ಅಡ್ಡಿ. ಉದ್ಯೋಗದಲ್ಲಿ ಕಾರ್ಯದಕ್ಷತೆಗೆ ಮೇಲಧಿಕಾರಿಗಳ ಶ್ಲಾಘನೆ. ಸತ್ಕಾರ್ಯಕ್ಕೆ ದಾನಮಾಡಿದ ಉದ್ಯಮಿಗಳಿಗೆ ಪುರಸ್ಕಾರ. ಗೃಹೋತ್ಪನ್ನ ತಿನಿಸುಗಳಿಗೆ ಗ್ರಾಹಕರ ಹೆಚ್ಚಳ. ಗೃಹೋಪಯೋಗಿ ಸಾಮಗ್ರಿ ಖರೀದಿ.ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ.

ಕರ್ಕಾಟಕ: ಮಾನಸಿಕ ತುಮುಲದಿಂದ ಬಿಡುಗಡೆ. ಸರಕಾರಿ ಉದ್ಯೋಗಿಗಳಿಗೆ ಚಿಂತೆ. ಪ್ರತಿಕೂಲ ಹವೆಯಿಂದ ಹಿರಿಯರ ಆರೋಗ್ಯದ ಮೇಲೆ ಪರಿಣಾಮ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ.ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು.

ಸಿಂಹ: ಪೂರ್ವಾಪರ ವಿಮರ್ಶಿಸಿ ಕ್ರಿಯೆಗಿಳಿದರೆ. ಉದ್ಯೋಗದಲ್ಲಿ ಸಾಧಾರಣ ಪ್ರಗತಿ. ಗುರು ದೇವತಾನುಗ್ರಹಕ್ಕಾಗಿ ಪ್ರಾರ್ಥನೆಯಿಂದ ಶುಭಫ‌ಲ. ಕಟ್ಟಡ ನಿರ್ಮಾಪಕರಿಗೆ ಅನುಕೂಲ ವಾತಾವರಣ. ವಿದ್ಯಾರ್ಥಿಗಳಿಗೆ ಲೋಕಜ್ಞಾನ ವೃದ್ಧಿಗೆ ಅನುಕೂಲ ವಾತಾವರಣ.

Advertisement

ಕನ್ಯಾ: ವೈಯಕ್ತಿಕ ಜೀವನದ ಸಮಸ್ಯೆಗಳ ಪರಿಹಾರ. ಉದ್ಯೋಗದಲ್ಲಿ ಕೆಲವರಿಗೆ ಪದೋನ್ನತಿಯ ಸಾಧ್ಯತೆ. ಅವಿವಾಹಿತ ಹುಡುಗರಿಗೆ ಯೋಗ್ಯ ಕನ್ಯೆಯರು ಸಿಗುವ ಸಾಧ್ಯತೆ. ಅಂತರ್ಮುಖತೆ ಬೆಳೆಸಿಕೊಳ್ಳುವ ಪ್ರಯತ್ನಕ್ಕೆ ಗೆಲುವು. ಹಿರಿಯರ ಆರೋಗ್ಯ ಸುಧಾರಣೆ.

ತುಲಾ: ಸಾಂಸಾರಿಕ ಸಮಸ್ಯೆಗಳಿಗೆ ಪರಿಹಾರ.. ಉದ್ಯೋಗ ಸ್ಥಾನದಲ್ಲಿ ಹೊಸಬರ ಸೇರ್ಪಡೆ. ಉದ್ಯಮದ ಉತ್ಪನ್ನಗಳಿಗೆ ಸ್ವಲ್ಪ ಹಿನ್ನಡೆ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಸಾಧನೆ ಉತ್ತಮ. ಕೃಷಿ ಭೂಮಿಯಲ್ಲಿ ಉತ್ತಮ ಫ‌ಸಲಿನ ನಿರೀಕ್ಷೆ.

ವೃಶ್ಚಿಕ: ಪ್ರತೀಕಾರ ಮನೋಭಾವ ಸಲ್ಲದು. ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಗಳಿಸುವ ಪ್ರಯತ್ನ ವಿಹಿತ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಸ್ಪಷ್ಟ ಸುಧಾರಣೆ.ವ್ಯವಹಾರದ ಸಂಬಂಧ ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ.

ಧನು: ಅನಿರೀಕ್ಷಿತ ಧನಾಗಮ.ಕೆಲವು ದಿನ ಗಳಿಂದ ಕಾಡುತ್ತಿದ್ದ ಸಮಸ್ಯೆ ಪರಿಹಾರ. ದಾಂಪತ್ಯ ಜೀವನದಲ್ಲಿ ತೃಪ್ತಿ.ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ. ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ.

ಮಕರ: ನೂತನ ವಸ್ತ್ರ ಖರೀದಿ. ಹೊಸ ಅವಕಾಶ ಗಳಿಗಾಗಿ ಹುಡುಕಾಟ. ಸಹೋದ್ಯೋಗಿಗಳಿಂದ ಸಹಕಾರ. ಪಾಲುದಾರಿಕೆಯಲ್ಲಿ ಸಣ್ಣ ವ್ಯವಹಾರ ಆರಂಭ. ತಂದೆಯ ಕಡೆಯ ಬಂಧುಗಳ ಆಗಮನ. ಮಹಿಳೆಯರ ಸ್ವಾವಲಂಬನೆ ಯೋಜನೆಗೆ ಉÇÉೇಖಾರ್ಹ ಯಶಸ್ಸು.

ಕುಂಭ: ಧನ ಸದ್ವಿನಿಯೋಗಕ್ಕೆ ಅವಕಾಶ ಪ್ರಾಪ್ತಿ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಸೇವಾಪರತೆಯಿಂದ ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ಮಾನಸಿಕ ದುಗುಡ ದೂರವಾಗಿ ಮನೆಮಂದಿಗೆ ಹರ್ಷ.

ಮೀನ: ಉದ್ಯೋಗದಲ್ಲಿ ನಿರೀಕ್ಷೆ ಮೀರಿದ ಯಶಸ್ಸು. ಅಪರಿಮಿತ ವ್ಯಾವಹಾರಿಕ ಸಾಧನೆಯ ದಿನ.ಹಣಕಾಸು ವ್ಯವಹಾರ ಸ್ಥಿರ ಸರಕಾರಿ ಇಲಾಖೆಗಳಲ್ಲಿ ಅನುಕೂಲಕರ ಸ್ಪಂದನ..ಹಳೆಯ ಗೆಳೆಯರ ಭೇಟಿ. ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ ಅನುರಾಗ ವೃದ್ಧಿ. ಮಕ್ಕಳಿಂದ ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next