Advertisement

Daily Horoscope: ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ತಾವಾಗಿ ಅರಸಿಕೊಂಡು ಬರುವ ಸಾಧ್ಯತೆ

07:17 AM Feb 21, 2024 | Team Udayavani |

ಮೇಷ: ಉತ್ತಮ ಆರೋಗ್ಯ. ಕಾರ್ಯತತ್ಪರರಿಗೆ ಮೇಲಧಿಕಾರಿಗಳ ಮೆಚ್ಚುಗೆ. ಪರಿಚಿತರಿಗೆ ಸಹಾಯ ಮಾಡಿಕೊಟ್ಟ ತೃಪ್ತಿ. ವಿವಾಹ ಸಂಬಂಧ ಮಾತುಕತೆಯಲ್ಲಿ ಪ್ರಗತಿ.ಹಿರಿಯರಿಗೆ,ಗೃಹಿಣಿಯರಿಗೆ, ಮಕ್ಕಳಿಗೆ ಸಂತಸ. ಒಟ್ಟಿನಲ್ಲಿ ಎಲ್ಲ ಶುಭಫಲಗಳನ್ನು ಕಾಣಬಹುದು.

Advertisement

ವೃಷಭ: ಎಲ್ಲ ರಂಗಗಳಲ್ಲೂ ಪ್ರಭಾವ ಬೀರುವಿರಿ. ಅಧ್ಯಾಪಕ ವೃತ್ತಿಯವರಿಗೆ ಶ್ರಮದಿಂದ ಉತ್ತಮ ಪ್ರತಿಫಲ. ಹಿರಿಯರ ಆರೋಗ್ಯ ಗಮನಿಸಿ. ಹೊಸ ಅವಕಾಶಗಳ ಅನ್ವೇಷಣೆ.ಮಕ್ಕಳಿಗೆ ಯೋಗ್ಯ ಮಾರ್ಗದರ್ಶನ ಅವಶ್ಯ.ದೇವತಾರಾಧನೆಯಿಂದ ಶುಭಫಲ ನಿರೀಕ್ಷೆ.

ಮಿಥುನ: ನಿಮ್ಮ ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಪರಿಸರ ಅನುಕೂಲವಾಗಿರುತ್ತದೆ. ಉದ್ಯೋಗ ರಂಗದಲ್ಲಿ ಹೊಸ ಅವಕಾಶಗಳು ತಾವಾಗಿ ಅರಸಿಕೊಂಡು ಬರುವ ಸಾಧ್ಯತೆ. ಹಿರಿಯರಿಗೆ ನೆಮ್ಮದಿ, ಮಕ್ಕಳಿಗೆ ಸಂಭ್ರಮ. ಗೃಹಾಲಂಕಾರ ವಸ್ತುಗಳ ಖರೀದಿಗೆ ಧನವ್ಯಯ.

ಕರ್ಕಾಟಕ: ಹೊಸ ಜವಾಬ್ದಾರಿಗಳನ್ನು ಹಿಂಜರಿಯದೆ ಒಪ್ಪಿಕೊಳ್ಳಿ. ನೊಂದವರಿಗೆ ಸಾಂತ್ವನ ಹೇಳಿ ಧನ್ಯರಾಗುವ ಯೋಗ. ಅಪರೂಪದ ನೆಂಟರ ಆಗಮನ. ನಿರೀಕ್ಷಿತ ಧನ ಕೈಸೇರಿ ನೆಮ್ಮದಿ. ಮಕ್ಕಳ ಶೈಕ್ಷಣಿಕ. ಸಾಧನೆಯಿಂದ ಪೋಷಕರಿಗೆ ಹರ್ಷ.

ಸಿಂಹ: ದ್ರೋಹ ಬಗೆದವರ ಬಗ್ಗೆ ಅನುಕಂಪದ ವರ್ತನೆಯಿಂದ ನೆಮ್ಮದಿ. ಉದ್ಯೋಗ, ವ್ಯವಹಾರ ರಂಗಗಳಲ್ಲಿ ತಾತ್ಕಾಲಿಕ ಅಡಚಣೆಯ ಅನುಭವ. ಪತಿ- ಪತ್ನಿಯರಿಂದ ಪರಸ್ಪರರಿಗೆ ಸಕಾಲಿಕ ಸಹಾಯ. ಹಿರಿಯರ ಆರೋಗ್ಯ ತೃಪ್ತಿಕರ. ಕೊಡುವ- ಕೊಳ್ಳುವ ವ್ಯವಹಾರಗಳು ಪಾರದರ್ಶಕವಾಗಿರಲಿ.

Advertisement

ಕನ್ಯಾ: ದೈಹಿಕ ಆಪತ್ತು ನಿವಾರಣೆಯಾಗಿ ನೆಮ್ಮದಿಯ ಅನುಭವ. ವೃತ್ತಿಪರ ಉದ್ಯೋಗಸ್ಥರಿಗೆ ಮೇಲಧಿ ಕಾರಿಗಳ ಪ್ರೋತ್ಸಾಹ. ಸಹೋದರಿಗೆ ಸಹಾಯ ಮಾಡುವ ಸಂದರ್ಭ. ದಂಪತಿಗಳ ನಡುವೆ ಹೊಂದಾಣಿಕೆಯಿಂದ ಅನುರಾಗ ವೃದ್ಧಿ. ಉತ್ತರದ ಕಡೆಯಿಂದ ಶುಭ ಸಮಾಚಾರದ ನಿರೀಕ್ಷೆ. ಮನೆಯಲ್ಲಿ ಹರ್ಷ.

ತುಲಾ: ದೈಹಿಕ ಆರೋಗ್ಯ ಉತ್ತಮ. ವೃತ್ತಿರಂಗದಲ್ಲಿ ಸ್ಪರ್ಧಾ ಮನೋಭಾವದಿಂದ ಕಿರಿಕಿರಿ. ದೂರದ ಹಿರಿಯ ಬಂಧುವಿನ ಆಗಮನ. ನೂತನ ವಾಹನ ಖರೀದಿಗೆ ಚಿಂತನೆ. ಗೃಹೋದ್ಯಮಗಳಲ್ಲಿ ತೊಡಗಿರುವವರಿಗೆ ಅನುಕೂಲದ ವಾತಾವರಣ.

ವೃಶ್ಚಿಕ: ಬಂಧುಜನರ ಅನಿರೀಕ್ಷಿತ ಭೇಟಿಯಿಂದ ಹರ್ಷ. ಹತ್ತಿರದ ಪ್ರವಾಸ ಕೈಗೊಳ್ಳುವ ಸಾಧ್ಯತೆ. ಉದ್ಯೋಗ ರಂಗದ ಸಾಧನೆಯಿಂದ ಮೇಲಿನವರಿಗೆ ಹರ್ಷ. ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಹಿರಿಯರ ಆರೋಗ್ಯ ಸ್ಥಿರ. ಗೃಹಿಣಿಯರಿಗೆ ಆಯ್ದ ಕಸುಬುಗಳಲ್ಲಿ ಆಸಕ್ತಿ.

ಧನು: ಪರಿಚಿತರಿಂದ ಅಯಾಚಿತ ಸಹಾಯ. ದೇವತಾರಾಧನೆಯತ್ತ ವಿಶೇಷ ಒಲವು. ವ್ಯವಹಾರಸ್ಥರಿಂದ ಹೊಸ ಸಾಧ್ಯತೆಗಳ ಹುಡುಕಾಟ. ಕಾರ್ಯಸಿದ್ಧಿಯಿಂದ ಹರ್ಷಾಚರಣೆ. ಹಿರಿಯರ ಆವಶ್ಯಕತೆ ಗಳ ಕಡೆಗೆ ಗಮನ ಇರಲಿ. ಮಕ್ಕಳ ವ್ಯಾಸಂಗದಲ್ಲಿ ಮುನ್ನಡೆ.

ಮಕರ: ಮೃದು ಮಾತಿನಿಂದ ಸುಲಭದಲ್ಲಿ ಕಾರ್ಯ ಸಾಧನೆ. ವಿಳಂಬಿತ ಕಾರ್ಯ ಪೂರ್ಣ ವಾಗಿ ಸಮಾಧಾನ. ಹೊಸ ಜವಾಬ್ದಾರಿಗಳು ಬರುವ ಸಂಭವ. ನಿರೀಕ್ಷಿತ ಫಲ ಪ್ರಾಪ್ತಿ. ಮಕ್ಕಳ ಯೋಗಕ್ಷೇಮದ ಬಗ್ಗೆ ಚಿಂತನೆ. ಮನೆಯ ಎಲ್ಲ ಸದಸ್ಯರ ನಡುವೆ ಸೌಹಾರ್ದದ ವರ್ತನೆ.

ಕುಂಭ: ಧಾರ್ಮಿಕ ಕಾರ್ಯಗಳಿಗೆ, ಜನೋಪಯೋಗಿ ಯೋಜನೆಗಳಿಗೆ ನೆರವು ನೀಡಿದ ಸಮಾಧಾನ. ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹ ಲಭ್ಯ. ಅನಿರೀಕ್ಷಿತ ಧನಾಗಮ ಯೋಗವಿದೆ. ಕ್ರೀಡಾಳುಗಳಿಗೆ ಹುಮ್ಮಸ್ಸಿನ ವಾತಾವರಣ.

ಮೀನ: ನಿರೀಕ್ಷಿತ ನೆರವು ಬರುವುದು ವಿಳಂಬವಾಗಿ ಬೇಸರ. ಉದ್ಯೋಗ, ವ್ಯವಹಾರ ಕ್ಷೇತ್ರಗಳಲ್ಲಿ ಯಶಸ್ಸು ತೃಪ್ತಿಕರ. ಭೂ ವ್ಯವಹಾರ, ಕಟ್ಟಡ ನಿರ್ಮಾಣ ವ್ಯವಹಾರಸ್ಥರಿಗೆ ಅಡಚಣೆ. ಕಾರ್ಮಿಕ ವರ್ಗದವರಿಗೆ ತಾತ್ಕಾಲಿಕ ಅಡಚಣೆ. ಉದ್ಯೋಗ ಬದಲಾವಣೆಯ ಸಾಧ್ಯತೆ ದೂರ. ಸಂಸಾರದಲ್ಲಿ ಸಹಕಾರ, ಸಂತೃಪ್ತಿಯ ವಾತಾವರಣ. ಹಿರಿಯರ ಆರೋಗ್ಯ ಸ್ಥಿರ.

Advertisement

Udayavani is now on Telegram. Click here to join our channel and stay updated with the latest news.

Next