Advertisement

Daily Horoscope: ಕೈಬಿಡಲಾಗಿದ್ದ ಯೋಜನೆಗಳಿಗೆ ಜೀವ ತುಂಬುವ ಪ್ರಯತ್ನ ಫ‌ಲಪ್ರದ

07:28 AM Feb 01, 2024 | Team Udayavani |

ಮೇಷ: ವಿಭಿನ್ನ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸಂದರ್ಭ. ಉದ್ಯೋಗದಲ್ಲಿ ಹೊಸ ಬಗೆಯ ಹೊಣೆಗಾರಿಕೆಗಳು. ಸರಕಾರಿ ಉದ್ಯೋಗಸ್ಥರಿಗೆ ಪ್ರತಿಕೂಲ ಪರಿಸ್ಥಿತಿ. ಸಣ್ಣ ಉದ್ಯಮಿಗಳಿಗೆ ಕಾನೂನು ಸಮಸ್ಯೆಗಳ ಚಿಂತೆ.. ಲೋಹಾಧಾರಿತ ಉದ್ಯಮಗಳಿಗೆ ಒಳ್ಳೆಯ ಕಾಲ.

Advertisement

ವೃಷಭ: ಉದ್ಯೋಗಸ್ಥರಿಗೆ .ಹೊಸ ಬಗೆಯ ಅವಕಾಶಗಳು ಗೋಚರ. ಖಾದಿಯ ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಹೇರಳ ಲಾಭ. ವೃತ್ತಿಪರಿಣತರಿಗೆ ಉದ್ಯೋಗಾವಕಾಶ. ಕುಶಲಕರ್ಮಿಗಳಿಗೆ ಬೇಡಿಕೆ. ಯಂತ್ರೋಪಕರಣ ಉದ್ಯಮಿಗಳಿಗೆ ಅಧಿಕ ಲಾಭ.

ಮಿಥುನ: ಕೈಬಿಡಲಾಗಿದ್ದ ಯೋಜನೆಗಳಿಗೆ ಜೀವ ತುಂಬುವ ಪ್ರಯತ್ನ ಫ‌ಲಪ್ರದ. ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆಗೆ ತಾತ್ಕಾಲಿಕ ಉಪಶಮನ. ಅನವಶ್ಯ ವಿವಾದಗಳಿಂದ ಮಾನಹಾನಿ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ.ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.

ಕರ್ಕಾಟಕ: ಸರಳ, ನೇರ ಮಾರ್ಗದ ನಡೆಯಿಂದ ಈಡೇರಿದ ಕಾರ್ಯಗಳು. ಉದ್ಯೋಗಸ್ಥರಿಗೆ ಸಂತೃಪ್ತಿ. ಸಣ್ಣ ಉದ್ಯಮಗಳಿಗೆ ಅನವಶ್ಯ ನಿಯಮಗಳಿಂದ ತೊಂದರೆ.ಅಕಸ್ಮಾತ್‌ ಧನಾಗಮ ಯೋಗ. ನಿಸ್ವಾರ್ಥಿ ರಾಜಕಾರಣಿಗಳ ಹೆಸರು ಕೆಡಿಸುವ ಹುನ್ನಾರ.

ಸಿಂಹ: ಏಕಕಾಲದಲ್ಲಿ ಅನೇಕ ಬಗೆಯ ವ್ಯವಹಾರಗಳಿಗೆ ಗಮನ ಹರಿಸುವ ಅನಿವಾರ್ಯತೆ. ಉದ್ಯೋಗಸ್ಥರಿಗೆ ದೊಡ್ಡ ಪ್ರಮಾಣದ ವೇತನ ಏರಿಕೆಯೊಂದಿಗೆ ಪದೋನ್ನತಿ. ಉದ್ಯಮ ಸ್ಥಾನ ನವೀಕರಣದ ಪ್ರಕ್ರಿಯೆ ಆರಂಭ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ ಸಂಭವ.

Advertisement

ಕನ್ಯಾ: ಕಾರ್ಯಸಾಮರ್ಥ್ಯ ತೋರಿಸಲು ಸದವಕಾಶ. ಕಾರ್ಯಕ್ಷೇತ್ರದಲ್ಲಿ ಅನುಕೂಲದ ವಾತಾವರಣ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ ಹಿರಿಯರ ಆಸ್ತಿಯಲ್ಲಿ ಕೃಷಿ ಕಾರ್ಯ ಆರಂಭ. ನೀರಾವರಿ ಸೌಲಭ್ಯ ವಿಸ್ತರಣೆಗೆ ಚಿಂತನೆ. ಅವಿವಾಹಿತರಿಗೆ ಯೋಗ್ಯ ಸಂಗಾತಿ ಸಿಗುವ ಭರವಸೆ.

ತುಲಾ: ಶಾರೀರಿಕ, ಮಾನಸಿಕ ಆರೋಗ್ಯ ಪ್ರಾಪ್ತಿ. ಹಿತಶತ್ರುಗಳ ಕಾಟದಿಂದ ತಾತ್ಕಾಲಿಕ ಬಿಡುಗಡೆ. ಎದುರಾಳಿಗಳ ಪೈಪೋಟಿಯ ಕಾರಣದಿಂದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಉದ್ಯೋಗ ಅರಸುವವರಿಗೆ ಅವಕಾಶಗಳು ಗೋಚರ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ.

ವೃಶ್ಚಿಕ: ವ್ಯವಹಾರದಲ್ಲಿ ದೊಡ್ಡ ಹಾನಿಯಾಗುವ ಭೀತಿ ಸದ್ಯಕ್ಕಿಲ್ಲ.. ಉದ್ಯೋಗಸ್ಥರಿಗೆ ಅಧಿಕ ಸ್ಥಾನ ಗೌರವ . ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆಯ ಆತಂಕ. ರಾಜಕಾರಣಿಗಳ ಹೆಸರು ಕೆಡಿಸಲು ಮತ್ತೂಮ್ಮೆ ಪ್ರಯತ್ನ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ಖರೀದಿ.

ಧನು:ಕ್ರಿಯಾಶೀಲತೆ, ಸಾಹಸಪ್ರವೃತ್ತಿಗಳಿಂದ ಕಾರ್ಯ ದಲ್ಲಿ ಯಶಸ್ಸು. ಪಟ್ಟು ಬಿಡದ ಪ್ರಯತ್ನದಿಂದ ಉದ್ಯಮ ಘಟಕದ ಕಾರ್ಯದಲ್ಲಿ ಸುಧಾರಣೆ.ಉದ್ಯಮದ ವೈವಿಧಿÂàಕರಣಕ್ಕೆ ಸಾರ್ವಜನಿಕರ ಪೋ›ತ್ಸಾಹ. ಹಿರಿಯ ನಾಗರಿಕರಿಗೆ ಸರಕಾರಿ ನೆರವು ದೊರಕಿಸಲು ಸಹಾಯ.

ಮಕರ: ಶನಿಯ ಅನುಗ್ರಹ ಪ್ರಾಪ್ತಿಯ ಸಮಯ ಸನ್ನಿಹಿತ. ಉದ್ಯೋಗಸ್ಥರ ಕಾರ್ಯಸಾಮರ್ಥ್ಯ ಅನಾವರಣಕ್ಕೆ ಹೊಸ ಅವಕಾಶಗಳು. ಹಿತಶತ್ರುಗಳ ಪೀಡೆ ನಿವಾರಣೆ. ಸಣ್ಣ .ಉದ್ಯಮಿಗಳಿಗೆ ಅನಿರೀಕ್ಷಿತ ಲಾಭದ ಸಾಧ್ಯತೆ. ಯಂತ್ರೋಪಕರಣ ಉದ್ಯಮಿಗಳ ಅಭಿವೃದ್ಧಿಗೆ ಅನುಕೂಲದ ವಾತಾವರಣ.

ಕುಂಭ: ಸಪ್ತಾಹದ ಉತ್ತರಾರ್ಧದಲ್ಲಿ ಮುಂದೆ ಸಾಗುವ ಕೆಲಸ, ಕಾರ್ಯಗಳು. ಉದ್ಯೋಗಸ್ಥರಿಗೆ ಅನುಕೂಲಕರ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ.ಶೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆಯಿಂದ ಅಲ್ಪ ಲಾಭ.

ಮೀನ: ಅಷೊxಂದು ಪೋ›ತ್ಸಾಹದ ವಾತಾವರಣ ಅಲ್ಲವಾದರೂ ಪ್ರಗತಿ ಭಂಗವಾಗದು. ಉದ್ಯೋಗ ಸ್ಥಾನದಲ್ಲಿ ಸಹಕಾರದ ವಾತಾವರಣ. ಸೇವಾ ರೂಪದ ಕಾರ್ಯಗಳು ಸಂಬಂಧಪಟ್ಟವರ ಸಹಕಾರದಿಂದ ಯಶಸ್ವಿ. ಸಾಮಾಜಿಕ ಕ್ಷೇತ್ರದಲ್ಲಿ ಬೆನ್ನಟ್ಟಿ ಬರುವ ಗೌರವ. ಪರಿಸರ ಸುಧಾರಣೆಯ ಸಾಮೂಹಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ..ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next