Advertisement

Daily Horoscope: ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಸೂತ್ರ

07:26 AM Feb 17, 2024 | Team Udayavani |

ಮೇಷ: ಭವಿಷ್ಯದ ಕುರಿತು ಅತಿಯಾದ ಚಿಂತೆ ಬೇಡ. ಉದ್ಯೋಗ ಕ್ಷೇತ್ರದ ಹೊಣೆಗಾರಿಕೆಯ ಗಾತ್ರದಲ್ಲಿ ಕೊಂಚ ವ್ಯತ್ಯಾಸ. ಉದ್ಯಮ ಯಶಸ್ವಿಯಾಗಲು ಎಲ್ಲರ ವಿಶ್ವಾಸ ಗಳಿಕೆ. ಮಹಿಳೆಯರ ನೇತೃತ್ವದ ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ. ವೃಷಭ: ಪ್ರತಿಯೊಂದು ಕ್ರಮಕ್ಕೂ ನಿರ್ದಿಷ್ಟ ಉದ್ದೇಶ ಇರಲಿ. ಉದ್ಯೋಗದಲ್ಲಿ ಸ್ಥಿರವಾದ ಪ್ರಗತಿ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆಗಾರಿಕೆ. ಯುವಜನರಿಗೆ ಕೃಷಿಕ್ಷೇತ್ರದ ಆಕರ್ಷಣೆ. ಖಾದಿ, ಗ್ರಾಮೋದ್ಯೋಗ ಯೋಜನೆಗಳಿಗೆ ಶುಭಕಾಲ. ಮಿಥುನ: ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯೇ ಯಶಸ್ಸಿನ ಸೂತ್ರ ಎಂಬುದು ನೆನಪಿರಲಿ. ಉದ್ಯೋಗದಲ್ಲಿ ಪ್ರತಿಭೆಗೆ ಅಗ್ರಸ್ಥಾನ. ಉದ್ಯಮ ದಲ್ಲಿ ಸರ್ವತೋಮುಖ ಪ್ರಗತಿ. ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ಕರ್ಕಾಟಕ: ಉದ್ಯೋಗದಲ್ಲಿ ಉನ್ನತ ಹೊಣೆಗಾರಿಕೆ. ಸಣ್ಣ ಉದ್ಯಮ ಉತ್ಪನ್ನಗಳ ಜನಪ್ರಿಯತೆ ವರ್ಧನೆ. ಸರಕಾರಿ ಯೋಜನೆಗಳ ಪ್ರಯೋಜನ ಪಡೆಯುವ ಪ್ರಯತ್ನಕ್ಕೆ ಮುನ್ನಡೆ. ಗೃಹೋಪಯೋಗಿ ಸಾಧನಗಳ ಖರೀದಿಗೆ ಧನವ್ಯಯ. ಸಿಂಹ: ಸಾಧನೆಗಳ ಬಗ್ಗೆ ತೃಪ್ತಿ ಇರಲಿ, ಆದರೆ ಕ್ರಿಯೆ ನಿಲ್ಲದಿರಲಿ. ಜತೆಗಾರರಿಗೆ ಸಮಯೋಚಿತ ಮಾರ್ಗದರ್ಶನ. ಸ್ವಂತ ಉದ್ಯಮದಲ್ಲಿ ನೌಕರರ ಹಿತ ಕಾಯುವ ಮನೋವೃತ್ತಿ. ಸಮಾಜದಲ್ಲಿ ಗೌರವ ವೃದ್ಧಿ. ನೂತನ ಯಂತ್ರ ಖರೀದಿ ಸಂಭವ. ಕನ್ಯಾ: ಬದುಕುವ ಮಾರ್ಗದ ಕುರಿತು ಚಿಂತೆ ಬೇಡ. ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಕಾರ್ಯ ದಕ್ಷತೆಗೆ ಗೌರವ. ಹೊಸಬಗೆಯ ಕೃಷಿ ಪ್ರಯೋಗಗಳಲ್ಲಿ ಯಶಸ್ಸು. ಅತಿಥಿ ಸತ್ಕಾರದ ಯೋಗ. ವ್ಯವಹಾರ ಸಂಬಂಧ ಸಣ್ಣ ಪ್ರಯಾಣ. ತುಲಾ: ಸಮಸ್ಯೆಗಳಿಗೆ ಬೆನ್ನು ತೋರಿಸಿ ಓಡದಿರಿ. ಉದ್ಯೋಗದಲ್ಲಿ ಸೂಕ್ತ ಗೌರವ ಪ್ರಾಪ್ತಿ. ಹಿತಶತ್ರುಗಳ ಪರಾಭವ. ಗುರುಸ್ಥಾನದಲ್ಲಿರುವ ಹಿರಿಯರು ಮನೆಗೆ ಆಗಮನ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿಯಿಂದ ಮನಸ್ಸಿಗೆ ಸಮಾಧಾನ. ವೃಶ್ಚಿಕ: ದೇಹದಾಡ್ಯì, ಮನೋದಾಡ್ಯì ಕಾಯ್ದುಕೊಂಡ ಸಮಾಧಾನ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಉದ್ಯಮಕ್ಕೆ ಎದುರಾಳಿಗಳ ಪೈಪೋಟಿ ಸಂಭವ. ಸರಕಾರಿ ನೌಕರರಿಗೆ ವರ್ಗಾವಣೆಯ ಆತಂಕ. ಸಹಕಾರಿ ಸಂಸ್ಥೆಗಳ ಪ್ರಗತಿಗೆ ತೊಂದರೆ. ಧನು: ಪಟ್ಟುಬಿಡದ ಪ್ರಯತ್ನದಿಂದ ಕಾರ್ಯಸಾಧನೆ. ಸಹೋದ್ಯೋಗಿಗಳಿಂದ ಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕದ ಸ್ಥಾಪನೆಗೆ ಮುಂದು ವರಿದ ಪ್ರಯತ್ನ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ಅಲ್ಪ ಲಾಭ. ಮಕರ: ಮನಸ್ಸಿನ ಸಮತೋಲನದಿಂದ ಕಾರ್ಯಸಿದ್ಧಿ. ಉದ್ಯೋಗ ಸ್ಥಾನದಲ್ಲಿ ನಿಗದಿತ ಸಮಯಕ್ಕೆ ಕಾರ್ಯ ಮುಕ್ತಾಯ. ಸ್ವಂತ ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ. ಫ್ಯಾಶನ್‌ ಡಿಸೈನಿಂಗ್‌ ವೃತ್ತಿಯವರಿಗೆ ಬೇಡಿಕೆ. ಕುಂಭ: ಕಾರ್ಯಭಾರದಿಂದ ಕುಗ್ಗದ ದೇಹ ಹಾಗೂ ಮನಸ್ಸು. ಏಕಕಾಲಕ್ಕೆ ಹಲವು ಕ್ಷೇತ್ರಗಳಿಂದ ಕರ್ತವ್ಯದ ಕರೆ. ಸಾಮಾಜಿಕ ವಲಯದ ಆಪ್ತರಿಂದ ಸಹಾಯದ ಕೊಡುಗೆ. ಉದ್ಯೋಗ ಸ್ಥಾನದಲ್ಲಿ ಕಿರಿಯರಿಗೆ ಸಹಾಯ. ಮೀನ: ಹಲವು ಬಗೆಯ ಕಾರ್ಯಕ್ರಮಗಳ ಒತ್ತಡದ ನಡುವೆ ಅನೇಕ ವಿಭಾಗಗಳತ್ತ ಲಕ್ಷ é ಹರಿಸುವ ಅನಿವಾರ್ಯತೆ. ಸರಕಾರಿ ಅಧಿಕಾರಿಗಳ ಸಕಾರಾತ್ಮಕ ಸ್ಪಂದನ. ಕೃಷಿ ಆಧಾರಿತ ಉದ್ಯಮ ಘಟಕ ಸ್ಥಾಪನೆ ಪ್ರಯತ್ನ ಸನ್ನಿಹಿತ. ಉದ್ಯೋಗ ಅರಸುತ್ತಿರುವವರಿಗೆ ಸಮರ್ಪಕ ಅವಕಾಶಗಳು ಗೋಚರ. ಸಾಮಾಜಿಕ ಸಮಸ್ಯೆಗಳ ಪರಿಹಾರ ಪ್ರಯತ್ನ

Advertisement
Advertisement

Udayavani is now on Telegram. Click here to join our channel and stay updated with the latest news.

Next