Advertisement

ರಾಶಿ ಫಲ: ಪರರ ಕೆಲಸ ನಿರ್ವಹಿಸುವಲ್ಲಿ ಜಾಗ್ರತೆ ವಹಿಸಿ, ಆತುರದ ನಿರ್ಣಯ ಮಾಡದಿರಿ

07:20 AM Feb 16, 2023 | Team Udayavani |

ಮೇಷ: ಮಕ್ಕಳ ಬಗ್ಗೆ ವಿಶೇಷ ಗಮನ. ಉದ್ಯೋಗ ವ್ಯವಹಾರಗಳಲ್ಲಿ ಗೌರವ, ಪ್ರಗತಿ. ತಾಳ್ಮೆಯಿಂದ ನಡೆದುಕೊಳ್ಳಿ. ಮೇಲಧಿಕಾರಿಗಳ ಪ್ರೀತಿ ಪ್ರಾಪ್ತಿ. ಸತ್ಕರ್ಮದಲ್ಲಿ ಆಸಕ್ತಿ. ಆತುರದ ನಿರ್ಣಯ ಮಾಡದಿರಿ. ದಾಂಪತ್ಯ ಸುಖ ತೃಪ್ತಿದಾಯಕ.

Advertisement

ವೃಷಭ: ನಿರೀಕ್ಷಿಸಿದಂತೆ ಅಧಿಕ ಧನಲಾಭ. ಉತ್ತಮ ವಾಕ್‌ಪಟುತ್ವ. ಜನಮನ್ನಣೆ. ಕುಟುಂಬ ಸುಖ ವೃದ್ಧಿ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ. ಜ್ಞಾನ ವಿದ್ಯೆಯ ಪ್ರದರ್ಶನ ಗೌರವ ಪ್ರಾಪ್ತಿ.

ಮಿಥುನ: ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ ನಿಷ್ಠೆ ತೋರಿದರೂ ಅಡಚಣೆ ತೋರೀತು. ಪರರ ಕೆಲಸ ನಿರ್ವಹಿಸುವಲ್ಲಿ ಜಾಗ್ರತೆ ವಹಿಸಿ. ವಿದ್ಯೆ ಜ್ಞಾನ ಸಂಪಾದನೆ ಕಡೆಗೆ ಗಮನ ಹರಿಸಿದರೆ ಯಶಸ್ಸು ಲಭಿಸಲಿದೆ. ಮಕ್ಕಳಿಂದ ಸಂತೋಷ.

ಕರ್ಕ: ದೂರ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಹೊಸ ವ್ಯವಹಾರಗಳ ಆರಂಭ. ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಮನೋರಂಜನೆ. ಆರೋಗ್ಯ ಗಮನಿಸಿ. ನಷ್ಟದೃವ್ಯ ಸಿಗುವ ಯೋಗ.

ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ಧನ ವೃದ್ಧಿ. ಪಿತ್ರಾರ್ಜಿತ ಆಸ್ತಿ ವಿಚಾರಗಳ ಜವಾಬ್ದಾರಿ ಹೆಚ್ಚಳ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ದೂರದ ಊರಿನ ಕೆಲಸ ಕಾರ್ಯಗಳಲ್ಲಿ ಪ್ರಗತಿ.

Advertisement

ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದೂರ ಪ್ರಯಾಣ. ದಂಪತಿಗಳಿಂದ ಪರಸ್ಪರ ಸಹಕಾರ. ಮನೋರಂಜನೆ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳಿಂದ ಶುಭ ವಾರ್ತೆ. ಅಧಿಕ ಧನ ವ್ಯಯ ಸಂಭವ.

ತುಲಾ: ಸಣ್ಣ ಪ್ರಯಾಣ. ಸಹೋದ್ಯೋಗಿ ಗಳಿಂದಲೂ ಸಹೋದರ ಸಮಾನರಿಂದಲೂ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ದೈರ್ಯ ಉತ್ಸಾಹದಿಂದ ಕೂಡಿದ ಕಾರ್ಯ ವೈಖರಿಯಿಂದ ಪ್ರಗತಿ ಮಾನ್ಯತೆ ಲಭ್ಯ. ಅವಿವಾಹಿತರಿಗೆ ವಿವಾಹ ಭಾಗ್ಯ. ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ವರಮಾನ.

ವೃಶ್ಚಿಕ: ಆರೋಗ್ಯ ಸುದೃಢ. ಎಲ್ಲಾ ವಿಧದ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿಸಿದಂತೆ ಪ್ರಗತಿ. ಉತ್ತಮ ಧನ ಲಾಭ. ಯೋಗ್ಯ ನೆಂಟಸ್ತಿಕೆ ಕೂಡಿ ಬರುವುದು. ಧಾರ್ಮಿಕ ಆಚರಣೆಗಳಲ್ಲಿ ಅಡಚಣೆ ತೋರಿಬರಬಹುದು. ಗುರುಹಿರಿಯರ ಆರೋಗ್ಯ ಗಮನಿಸಿ.

ಧನು: ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ ಜನಪ್ರಶಂಸೆ ಲಭಿಸುವುದು. ಮೇಲಧಿಕಾರಿಗಳ ಸಹಕಾರ ಮಾರ್ಗದರ್ಶನದ ಲಾಭ ಅನೇಕ ಹೂಡಿಕೆಗಳಲ್ಲಿ ಆಸಕ್ತಿ ಹಾಗೂ ಕ್ರಿಯಾಶೀಲತೆ ಸಂಭವ. ಉತ್ತಮ ಧನಾರ್ಜನೆ. ಮಕ್ಕಳಿಂದ ಸ್ಥಾನ ಗೌರವಕ್ಕಾಗಿ ಹೆಚ್ಚಿದ ಪರಿಶ್ರಮ.

ಮಕರ: ಕೆಲಸ ಕಾರ್ಯಗಳಲ್ಲಿ ನಿಷ್ಠೆ ಏಕಾಗ್ರತೆಯಿಂದ ಮೆಚ್ಚುಗೆ. ಸಾಂದರ್ಭಿಕವಾದ ಯೋಜನೆ ಯೋಚನೆಯಿಂದ ಸಫ‌ಲತೆ. ಹಣಕಾಸಿನ ವಿಚಾರದಲ್ಲಿ ಆಯವ್ಯಯ ಸಮಾನವಾಗಿರುವುದು. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ.

ಕುಂಭ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ಉತ್ತಮ ಜವಾಬ್ದಾರಿ ಯುತ ವಾಕ್‌ ಚತುರತೆಯಿಂದ ಅಧಿಕ ಧನಾಗಮನ. ದೂರದ ಮಿತ್ರರ ಸಲಹೆ ಸಹಕಾರದಿಂದ ಅಧಿಕ ಉಳಿತಾಯ ಸಂಭವ. ಆಸ್ತಿ ವಿಚಾರದಲ್ಲಿ ಪಾರದರ್ಶಕತೆ ಇರಲಿ.

ಮೀನ: ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ಹಣಕಾಸಿನ ವಿಚಾರದಲ್ಲಿ ನಿರೀಕ್ಷಿತ ಧನಲಾಭ. ಉದ್ಯೋಗ ವ್ಯವಹಾರಗಳಲ್ಲಿ ಪರಿಶ್ರಮ ಕಂಡುಬಂದರೂ ಜಯ ಸಾಧಿಸಿದ್ದರಿಂದ ಮನಃ ಸಮಾದಾನ ನೀಡುವುದು. ಗೃಹೋಪಯೋಗಿ ವಸ್ತುಗಳ ಸಂಗ್ರಹ.

Advertisement

Udayavani is now on Telegram. Click here to join our channel and stay updated with the latest news.

Next