Advertisement

ರಾಶಿ ಫಲ: ಚುರುಕುತನ, ವಿದ್ಯೆ ವಿನಯ ಸಂಪನ್ನತೆಯಿಂದ ದಿನಚರಿ ಆರಂಭ, ಸ್ಥಿರ ಧನಸಂಪತ್ತು ವೃದ್ಧಿ

07:12 AM Apr 04, 2023 | Team Udayavani |

ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಮಾತೃ ಸಮಾನರಿಂದ ಪ್ರೋತ್ಸಾಹ. ಜವಾಬ್ದಾರಿಯುತ ಕಾರ್ಯ ಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಣೆ. ನಿರೀಕ್ಷಿಸಿದಷ್ಟು ಧನಸಂಪತ್ತು ಲಭಿಸದಿದ್ದರೂ ಮನಃತೃಪ್ತಿಗೆ ಕೊರತೆಯಾಗದು.

Advertisement

ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ ಪ್ರಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್‌ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಅಧಿಕ ಧನ ಸಂಚಯ. ಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ.

ಮಿಥುನ: ಚುರುಕುತನ, ಪಟುತ್ವ, ವಿದ್ಯೆ ವಿನಯ ಸಂಪನ್ನತೆಯಿಂದ ದಿನಚರಿ ಆರಂಭ. ಸಮಾಜದಲ್ಲಿ ಸ್ಥಾನಮಾನ ಗೌರವಾದಿ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಧನಸಂಪತ್ತು ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಹಿರಿಯರ ಆರೋಗ್ಯ ಗಮನಿಸಿ.

ಕರ್ಕ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಿತ್ರರಿಂದ ನಿರೀಕ್ಷಿತ ಸಹಾಯ ಲಭ್ಯ. ಗುರುಹಿರಿಯರಲ್ಲಿ ಸಮಾಧಾನದಿಂದ ವರ್ತಿಸಿ ಅವರ ಮಾರ್ಗದರ್ಶನ ಸದುಪಯೋಗಿಸಿಕೊಳ್ಳುವುದರಿಂದ ಶ್ರೇಯಸ್ಸು ಲಭ್ಯ.

ಸಿಂಹ: ಆರೋಗ್ಯ ಗಮನಿಸಿ. ಸ್ಥಿರ ಬುದ್ಧಿಯಿಂದ ಕಾರ್ಯ ಪ್ರವೃತ್ತಿ. ಹಣದ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ. ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಸಫ‌ಲತೆ ಕಂಡೀತು. ಮಕ್ಕಳಿಂದ ಸಂತೋಷ.

Advertisement

ಕನ್ಯಾ: ದೂರ ಪ್ರಯಾಣ. ಬಂಧುಮಿತ್ರರ ಮಿಲನ. ಸಂತೋಷ ವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ. ಮಕ್ಕಳಿಂದ ಸುಖ ಸಂತೋಷ ವಾರ್ತೆ. ಆರ್ಥಿ ಸುದೃಢತೆ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ ಲಭಿಸೀತು.

ತುಲಾ: ಕೆಲಸ ಕಾರ್ಯಗಳಲ್ಲಿ ಪರಾಕ್ರಮ. ಧೈರ್ಯ ಶೌರ್ಯ ಪ್ರದರ್ಶನ. ಸಂಪತ್ಸಮೃದ್ಧಿ. ಸಂದರ್ಭಕ್ಕೆ ಸರಿಯಾಗಿ ಬುದ್ಧಿವಂತಿಕೆ ಪ್ರದರ್ಶನ. ಜನಮನ್ನಣೆ ಗೌರವ ಸುಖಾದಿ ಲಭ್ಯ. ದೂರದ ಮಿತ್ರರಿಂದ ಸಹಕಾರ ಲಭಿಸೀತು.

ವೃಶ್ಚಿಕ: ವಿದ್ಯೆ, ಜ್ಞಾನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ. ಉದ್ಯೋಗ ವ್ಯವಹಾರಗಳಲ್ಲಿ ಗೌರವ ಲಭ್ಯ. ಮೇಲಾಧಿಕಾರಿಗಳಿಂದ ಪ್ರೋತ್ಸಾಹ. ದಾನಧರ್ಮ ಮಾಡಿದ ತೃಪ್ತಿ. ಇತ್ಯಾದಿ ಶುಭಫ‌ಲ. ಮನೆಯಲ್ಲಿ ಸಂತಹದ ವಾತಾವರಣ.

ಧನು: ನಿರೀಕ್ಷಿತ ಧನ ಸಂಚಯನ ವೃದ್ಧಿ. ಕೆಲಸ ಕಾರ್ಯಗಳಲ್ಲಿ ಪ್ರಗತಿ. ಆರೋಗ್ಯದಲ್ಲಿ ಸುಧಾರಣೆ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅನಗತ್ಯ ಚರ್ಚೆಗೆ ಅವಕಾಶ ಕಲ್ಪಿಸದಿರಿ. ಅಧ್ಯಯನಕ್ಕೆ ಆದ್ಯತೆ. ನೂತನ ಮಿತ್ರರ ಭೇಟಿಯಿಂದ ಸಂತೋಷ.

ಮಕರ: ಧಾರ್ಮಿಕ ಕಾರ್ಯಗಳಿಗೆ ಪ್ರಯಾಣ. ದೇವತಾ ಸ್ಥಳ ಸಂದರ್ಶನ. ಗುರುಹಿರಿಯರಿಂದ ಸಂಭ್ರಮದ ವಾತಾವರಣ. ದೂರದ ಮಿತ್ರರೊಂದಿಗೆ ಸಮಾಲೋಚನೆ. ಉತ್ತಮ ಧನ ಸಂಪಾದನೆ. ಸಾಂಸಾರಿಕವಾಗಿ ಉತ್ತಮ ದಿನ.

ಕುಂಭ: ದೈಹಿಕ ಶ್ರಮ. ಅಧಿಕ ಬುದ್ಧಿವಂತಿಕೆ, ಚುರುಕುತನದ ಪ್ರದರ್ಶನ. ಆರೋಗ್ಯ ಗಮನಿಸಿ. ಜನಾನುರಾಗಿ ವರ್ತನೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ಗಳಿಸುವ ಯೋಗ. ಸಣ್ಣ ಪ್ರಯಾಣ.

ಮೀನ: ನಿರೀಕ್ಷಿತ ಸ್ಥಾನ ಗೌರವ ದೊರಕಿದ ಸಂತೋಷ. ಧಾರ್ಮಿಕ ಕಾರ್ಯಗಳಲ್ಲಿ ತಲ್ಲೀನತೆ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಮಕ್ಕಳಿಂದ ಸಂತೋಷ ವೃದ್ಧಿ. ಉತ್ತಮ ಗುಣ ನಡತೆಯಿಂದ ಜನಾದಾರ ಗೌರವ ಪ್ರಾಪ್ತಿ.ಆರ್ಥಿಕವಾಗಿ ಸಮೃದ್ಧಿಯ ದಿನ. ವಿದ್ಯಾರ್ಥಿಗಳು ಅಧ್ಯಯನದ ಕಡೆಗೆ ಹೆಚ್ಚಿನ ಗಮನಹರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next