Advertisement

Daily Horoscope: ಉದ್ಯೋಗದಲ್ಲಿ, ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ

07:17 AM Apr 24, 2023 | Team Udayavani |

ಮೇಷ: ರಾಜಕೀಯ ಕಾರ್ಯ ಕ್ಷೇತ್ರದವರೆಗೆ ಅಭಿವೃದ್ಧಿ. ಕ್ರಯವಿಕ್ರಯದಲ್ಲಿ ತಾಳ್ಮೆ ಸಹನೆ ಅಗತ್ಯ. ಸ್ವಪ್ರಯತ್ನದಿಂದ ಧನಾಗಮ. ಸಹೋದರಾದಿ ವರ್ಗದಲ್ಲಿ ಪ್ರೋತ್ಸಾಹ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಿ. ಅರಣ್ಯ ಪ್ರದೇಶ ಸಂಚಾರ. ದೇವತಾ ಸ್ಥಳ ಸಂದರ್ಶನ. ವೃಷಭ: ಬಂಧುಗಳಿಂದ ಪ್ರೋತ್ಸಾಹ. ಗಂಟಲು ಸಂಬಂಧ ಆರೋಗ್ಯ ಗಮನಿಸಿ. ಗೌರವದಿಂದ ಕೂಡಿದ ಸ್ಥಾನಮಾನ ಧನಾರ್ಜನೆ. ಕುಟುಂಬ ಸಮೇತ ಸಂಚಾರ. ಮಕ್ಕಳ ವಿಚಾರದಲ್ಲಿ ತೃಪ್ತಿ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಚಟುವಟಿಕೆ. ಮಿಥುನ: ಬಹು ಮಾತನಾಡಿ ತೊಂದರೆ ಗೊಳಗಾಗದಿರಿ. ಆರೋಗ್ಯದ ಬಗ್ಗೆ ಗಮನ ವಿರಲಿ. ಉದ್ಯೋಗದಲ್ಲಿ ಹಣಕಾಸಿನ ವಿಚಾರದಲ್ಲಿ ಸಾಹಸ ಮಾಡದಿರಿ. ಸ್ತ್ರೀಪುರುಷರು ಪರಸ್ಪರ ಪ್ರೋತ್ಸಾಹಿಸಿ ಕಾರ್ಯ ಸಾಧಿಸಿಕೊಳ್ಳಿ. ಹಿರಿಯರ ಆರೋಗ್ಯ ಉತ್ತಮ. ಕರ್ಕ: ಮಕ್ಕಳಲ್ಲಿ, ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಪ್ರಯಾಣದಿಂದ ಸುಖ ಸಂತೋಷ. ಬರಬೇಕಾದ ಸಂಪತ್ತಿಗೆ ಪ್ರಯತ್ನಿಸಿದರೆ ಸಿಗುವ ಅವಕಾಶ. ಸಹೋದರರಿಂದ ಸಂತೋಷದ ವಾರ್ತೆ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ಗೌರವ ಪ್ರಾಪ್ತಿ. ದೇವತಾ ಕಾರ್ಯ ತೃಪ್ತಿದಾಯಕ. ಸಿಂಹ: ಕೆಲಸ ಕಾರ್ಯಗಳ ಗುಣದೋಷ ಅರಿಯದೇ ಉತ್ಸಾಹದಿಂದ ಧುಮುಕದಿರಿ. ಸಮುದ್ರೋತ್ಪನ್ನ ವಸ್ತುಗಳಲ್ಲಿ ಆಸಕ್ತಿ. ದೇವತಾ ಕಾರ್ಯಕ್ಕೆ ಧನವ್ಯಯ. ಮಕ್ಕಳಿಂದ ಸಂತೋಷ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಗೃಹೋಪ ವಸ್ತು ಸಂಗ್ರಹ. ಕನ್ಯಾ: ನೀರಿನಿಂದ ಉದ್ಭವಿಸಿದ ಪದಾರ್ಥಗಳ ಕ್ರಯವಿಕ್ರಯದಲ್ಲಿಯೂ, ವಿದೇಶ ವ್ಯವಹಾರ ದಲ್ಲಿಯೂ ಉತ್ತಮ ಲಾಭದಾಯಕ. ವಿದ್ಯಾರ್ಥಿಗಳಿಗೆ ಸಂಶೋಧಕರಿಗೆ ಅತ್ಯುತ್ತಮ ದಿನ. ದೇವತಾ ಕಾರ್ಯದಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಣೆ. ತುಲಾ: ಅನಿರೀಕ್ಷಿತ ಧನ ಲಾಭ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಗೌರವ, ಮನ್ನಣೆ ಲಭ್ಯ. ಉತ್ತಮ ತಿಳುವಳಿಕೆ. ಜ್ಞಾನ ವಾಕ್‌ ಚತುರತೆಯಿಂದ ಕೂಡಿದ ಕಾರ್ಯ ವೈಖರಿ. ಬಹುಜನ ಸಂಪರ್ಕ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯ ಸುಖ ವೃದ್ಧಿ. ವೃಶ್ಚಿಕ: ದೂರ ಪ್ರಯಾಣ. ಆರೋಗ್ಯ ಗಮನಿಸಿ. ಅನಿರೀಕ್ಷಿತ ನೂತನ ಉದ್ಯೋಗ ಕೆಲಸ ವ್ಯವಹಾರಗಳ ಜವಾಬ್ದಾರಿ. ಧಾರ್ಮಿಕ ಕಾರ್ಯಗಳಿಗೆ ಧನವ್ಯಯ. ಮನಃ ತೃಪ್ತಿ. ಭೂಮ್ಯಾದಿ, ವಾಹನಗಳ ಸುಖ ಪ್ರಾಪ್ತಿ. ನೂತನ ಮಿತ್ರರ ಭೇಟಿ. ಗೃಹದಲ್ಲಿ ಸಂತಸ. ಧನು: ಧೈರ್ಯ ಶೌರ್ಯ ಪರಾಕ್ರಮ ಪ್ರದರ್ಶನ. ಸಹೋದರ ಸಮಾನರಿಂದ ಸುಖ ಸಂತೋಷ. ಹಣಕಾಸಿನ ವಿಚಾರಗಳಲ್ಲಿ ಜಾಗರೂಕತೆ. ಅನಗತ್ಯ ಖರ್ಚುಗಳಿಗೆ ತಡೆ. ಸಣ್ಣ ಪ್ರಯಾಣ. ಪರರಿಂದ ಜ್ಞಾನ ತಿಳಿಯುವ ಹಂಬಲ. ಅಧ್ಯಯನಶೀಲತೆ ಸಂಭವ. ಮಕರ: ಆರೋಗ್ಯ ಗಮನಿಸಿ. ಹೆಚ್ಚಿದ ಪರಿಶ್ರಮದಿಂದ ದೇಹಾಯಾಸ ಸಂಭವ. ಹಣಕಾಸಿನ ವಿಚಾರದಲ್ಲಿ ಆದಾಯ ಖರ್ಚು ಸಮಾನಾಗಿರುವುದು. ಆತುರದ ನಿರ್ಧಾರ ಮಾಡದಿರಿ. ಬಂಧುಮಿತ್ರರ ಸಹಾಯ ಸಹಕಾರ ಲಭಿಸುವುದು. ಕುಂಭ: ಮನೋರಂಜನೆಯಲ್ಲಿ ಆಸಕ್ತಿ. ದೂರ ಪ್ರಯಾಣ. ಅವಿವಾಹಿತರಿಗೆ ವಿವಾಹ ಭಾಗ್ಯ. ಉತ್ತಮ ವಾಕ್‌ ಚತುರತೆ. ಕೆಲಸ ಕಾರ್ಯಗಳಲ್ಲಿ ಚುರುಕುತನ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ. ಮೀನ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿ. ಸತ್ಕಾರ್ಯಕ್ಕೆ ಧನವ್ಯಯ. ಮಾನಸಿಕ ನೆಮ್ಮದಿ ಕಂಡುಬರುವುದು. ಬಂಧುಮಿತ್ರರಿಗಾಗಿ ಹೆಚ್ಚಿನ ಸಮಯ ಕಳೆಯುವಿಕೆ. ಅನಗತ್ಯ ಸಾಲ ನೀಡದಿರಿ ಅಥವಾ ಪಡೆಯದಿರಿ. ದಾಕ್ಷಿಣ್ಯ ತೊರೆದು ವ್ಯವಹರಿಸಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next