Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ

07:47 AM Mar 08, 2021 | Team Udayavani |

08-03-2021

Advertisement

ಮೇಷ: ನಿರುದ್ಯೋಗಿಗಳಿಗೆ ಈ ವಾರ ವೃತ್ತಿ ಸಿಗುವ ಶುಭ ಸುದ್ದಿ ಬಂದು ತಲುಪಲಿದೆ. ಯಾವುದಕ್ಕೂ ವಿಘ್ನದಿಂದಲೇ ವಿಜಯ ಪ್ರಾಪ್ತಿ ಎಂಬುದು ನಿಮ್ಮ ಅನುಭವಕ್ಕೆ ಬಂದೀತು. ರಾಜಕೀಯದವರಿಗೆ ಯಶಸ್ಸು ಇರದು.

ವೃಷಭ: ಮನೆಯಲ್ಲಿ ಮಂಗಲ ಕಾರ್ಯದ ನಿರೀಕ್ಷೆ ಕಂಡುಬಂದು ಸಂತಸವಾಗಲಿದೆ. ಆದರೂ ಆರೋಗ್ಯದ ಬಗ್ಗೆ ಸ್ವಲ್ಪ ಚಿಂತಿತರಾರುವಿರಿ. ಧನಾತ್ಮಕವಾಗಿ ಚಿಂತಿಸುವುದು. ಸರಕಾರಿ ಅಧಿಕಾರಿಗಳಿಗೆ ಭವಣೆ ತಪ್ಪದು.

ಮಿಥುನ: ವಿದ್ಯಾರ್ಥಿಗಳಿಗೆ ಆಗಾಗ ಉದಾಸೀನತೆ ಕಾಡಲಿದೆ. ಧನಾಧಿಪತಿ ಧನಲಕ್ಷ್ಮಿಯು ಚಂಚಲೆಯಾದ ಕಾರಣ ಆರ್ಥಿಕ ಪರಿಸ್ಥಿತಿಯ ಕಣ್ಣುಮುಚ್ಚಾಲೆ ಆಡಲಿದೆ. ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರ ಕಟ್ಟಿಕೊಳ್ಳುವಿರಿ.

ಕರ್ಕ: ವೃತ್ತಿರಂಗದಲ್ಲಿ ಅನಾವಶ್ಯಕ ನಿಷ್ಠೂರತೆಗೆ ಕಾರಣರಾಗಿ ಅಸಮಾಧಾನ ಕಂಡು ಬರಲಿದೆ. ಕೌಟುಂಬಿಕ ಸಮಸ್ಯೆಗಳು ದಾಯಾದಿಗಳಿಂದ ಕೋರ್ಟುಕಟ್ಟೆ ಹತ್ತಲಿದೆ. ಪದೇ ಪದೇ ಅಲ್ಪಸ್ವಲ್ಪ ಅನಾರೋಗ್ಯ ಕಂಡು ಬಂದು ಕಿರಿಕಿರಿ.

Advertisement

ಸಿಂಹ: ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರೆತು ಸಮಾಧಾನವಾಗಲಿದೆ. ಕುಟುಂಬದ ಬಿರುಕು ಗಳು ಪುನಃ ಜೋಡಣೆಯಾಗಲಿದೆ. ತಾರುಣ್ಯದ ಮಂದಿಗೆ ಕನಸಿನ ಕನ್ಯೆಯು ಬಾಳ ಸಂಗಾತಿಯು ದೊರಕಲಿದ್ದಾಳೆ. ಶುಭವಿದೆ.

ಕನ್ಯಾ: ಧನಾತ್ಮಕವಾಗಿ ಚಿಂತಿಸಿ ಎಲ್ಲಾ ವಿಚಾರದಲ್ಲಿ ಮುನ್ನಡೆದಲ್ಲಿ ಜಯ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಅವಶ್ಯಕತೆ ಇದೆ. ಕಾರ್ಯತಂತ್ರಗಳ ಒದ್ದಾಟ ದೇಹಾಯಾಸಕ್ಕೆ ಕಾರಣವಾದೀತು. ಸಾಂಸಾರಿಕವಾಗಿ ಮನದನ್ನೆಯ ಮಾತು ಮೀರದಿರಿ.

ತುಲಾ: ಸಾಂಸಾರಿಕವಾಗಿ ಮಕ್ಕಳ ಶ್ರೇಯಸ್ಸಿನಿಂದ ಸಂತಸವಾಗಲಿದೆ. ಕಾರ್ಯರಂಗದಲ್ಲಿ ಶತ್ರುಗಳು ತಾವಾಗಿಯೇ ನಿಮ್ಮೆಡೆಗೆ ಆಕರ್ಷಿತರಾದಾರು. ವೃತ್ತಿರಂಗದಲ್ಲಿ ಉನ್ನತಿಯ ಲಕ್ಷಣಗಳು ಗೋಚರಕ್ಕೆ ಬಂದಾವು. ಪ್ರಯಾಣವಿದೆ.

ವೃಶ್ಚಿಕ: ಅವಿವಾಹಿತರಿಗೆ ಹೊಂದಾಣಿಕೆಯ ಮನಸ್ಸು ಮಾಡಿದ್ದಲ್ಲಿ ಕಂಕಣಬಲ ಕೂಡಿಬರಲಿದೆ. ಆದಾಯ ಹೆಚ್ಚಿಸಲು ಮನಸ್ಸು ಮಾಡಿರಿ. ಆಟೋಟಗಳಲ್ಲಿ ಕ್ರೀಡಾಪಟುಗಳಿಗೆ ಗೆಲುವಿದೆ. ವೃತ್ತಿಕ್ಲೇಶ, ಅಪವಾದ ಭೀತಿ ತಂದೀತು.

ಧನು: ನಿಮ್ಮ ಸುತ್ತ ಸ್ವಲ್ಪ ಮಟ್ಟಿಗೆ ಯಶಸ್ಸು ಗೋಚರಕ್ಕೆ ಬರಲಿದೆ. ಆಗಾಗ ವೃತ್ತಿಕ್ಲೇಶ ಅಪವಾದ ಭೀತಿ ತೋರಿ ಬಂದೀತು. ವೃತ್ತಿಪರರಿಗೆ ಸ್ವಲ್ಪ ಮಟ್ಟಿನ ಬದಲಾವಣೆ ಸಂಭವವಿದೆ. ಸಹನೆ, ತಾಳ್ಮೆ ಅಗತ್ಯ.

ಮಕರ: ವ್ಯಾಪಾರ ವಹಿವಾಟಿನಲ್ಲಿ ಒಳ್ಳೆಯ ಆದಾಯ ಇರುತ್ತದೆ. ಆಸಿಪಾಸ್ತಿಗಳಿಗಾಗಿ ಧನವ್ಯಯ ಕಂಡುಬಂದೀತು. ಆರ್ಥಿಕವಾಗಿ ನಾನಾ ರೀತಿಯಲ್ಲಿ ಮೂಲಧನ ವೃದ್ಧಿಯಾದೀತು. ಅವಮಾನ ಪ್ರಸಂಗವು ಎದುರಾದೀತು.

ಕುಂಭ: ಆದಾಯ ವೃದ್ಧಿಯೂ, ಖರ್ಚು ಅಧಿಕವಿದ್ದೀತು. ಗೃಹದಲ್ಲಿ ಶುಭಮಂಗಲ ಕಾರ್ಯದಲ್ಲಿ ಭಾಗವಹಿಸುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶಗಳು ಒದಗಿ ಬಂದೀತು. ಅವಿವಾಹಿತರಿಗೆ ಒಳ್ಳೆಯ ಸುದ್ಧಿ.

ಮೀನ: ಅವಿವಾಹಿತರು ಮಂಗಲ ಕಾರ್ಯಗಳ ಸಿದ್ಧತೆಯನ್ನು ಮಾಡಲಿದ್ದಾರೆ. ಕೋರ್ಟು ಕಚೇರಿ ಕಾರ್ಯಭಾಗಗಳಲ್ಲಿ ಹೆಚ್ಚಿನ ಧನವ್ಯಯವಾದರೂ ತೀರ್ಪು ನಿಮ್ಮ ಪರವಾಗಲಿದೆ. ಸಹನೆ, ಆತ್ಮವಿಶ್ವಾಸದ ಅಗತ್ಯವಿದೆ.

ಎನ್ .ಎಸ್ ಭಟ್

Advertisement

Udayavani is now on Telegram. Click here to join our channel and stay updated with the latest news.

Next