Advertisement

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ವರ್ಧಿಸಲಿದೆ

07:49 AM Feb 20, 2021 | Team Udayavani |

20-02-2021

Advertisement

ಮೇಷ: ಕೌಟುಂಬಿಕವಾಗಿ ಸುಖ, ಸೌಭಾಗ್ಯದ ವರ್ಧನೆಯಿದೆ. ಆರ್ಥಿಕವಾಗಿ ಲಾಭದಾಯಕ ಆದಾಯವು ದ್ವಿಗುಣಗೊಳ್ಳಲಿದೆ. ನಿರುದ್ಯೋಗಿಗಳು ಪ್ರಯತ್ನ ಪಟ್ಟಲ್ಲಿ ಅನಿರೀಕ್ಷಿತವಾಗಿ ಯಶಸ್ಸು ತರಲಿದೆ. ಮನಸ್ಸು ಸಂದೇಹದಿಂದಿರುತ್ತದೆ.

ವೃಷಭ: ವೃತ್ತಿರಂಗದಲ್ಲಿ ಮನಸ್ಸಿನಲ್ಲಿ ಎಣಿಸಿದಂತೆ ಕಾರ್ಯಸಾಧನೆಯಾಗಲಿದೆ. ಹಿರಿಯರ ಸೇವೆ ಶುಶ್ರೂಷೆಗಾಗಿ ಓಡಾಟ ತಂದೀತು. ಚಿನ್ನ, ಬೆಳ್ಳಿ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಸುಗ್ಗಿ. ದೇವತಾರಾಧನೆ ಮಾಡಿರಿ.

ಮಿಥುನ: ಮನೆಯಲ್ಲಿ ಶಾಂತಿ, ಸಮಾಧಾನವು ನೆಲೆಸಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲವು ಸಾರ್ಥಕವಾದೀತು. ಆದಾಯದಲ್ಲಿ ತೃಪ್ತಿ ಕಂಡುಬಾರದಿದ್ದರೂ ಹೆಚ್ಚಿನ ಸಮಸ್ಯೆ ಇರಲಾರದು. ಖರ್ಚುವೆಚ್ಚ ಕಡಿಮೆ ಮಾಡಿರಿ.

ಕರ್ಕ: ಗೃಹಕೃತ್ಯಗಳ ಜವಾಬ್ದಾರಿ ಹೆಚ್ಚಾಗಲಿದ್ದು, ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸ ಬೇಕಾದೀತು. ಮನೆ ಹಿರಿಯರಿಗೆ ಜ್ವರಾಧಿಭಾದೆಯಿಂದ ಅನಿರೀಕ್ಷಿತ ಖರ್ಚು ತಂದೀತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲೆದಾಟ ತಂದೀತು.

Advertisement

ಸಿಂಹ: ದೇವತಾದರ್ಶನ ಭಾಗ್ಯ ತಂದೀತು. ಆರೋಗ್ಯಭಾಗ್ಯದಲ್ಲಿ ಪಿತ್ತಪ್ರಕೋಪ, ಸಂಧಿನೋವು, ಅನಾರೋಗ್ಯವು ಕಾಣಿಸಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಹೊಸ ವಾಹನ ಖರೀದಿ ತಂದೀತು.

ಕನ್ಯಾ: ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ವರ್ಧಿಸಲಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾದಾವು. ಧನವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಮಕ್ಕಳ ಕುರಿತು ಸಂತೋಷ ಸಿಗಲಿದೆ.

ತುಲಾ: ಅನಾವಶ್ಯಕವಾಗಿ ನೆರೆಹೊರೆ ಯವರೊಡನೆ ಅಸಮಾಧಾನ ತಂದೀತು. ಆರೋಗ್ಯಭಾಗ್ಯಕ್ಕಾಗಿ ಚಿಕಿತ್ಸೆಯ ಖರ್ಚು ತಂದೀತು. ವೃಥಾ ಆರೋಪ ಹೊಂದುವ ನಿಮಗೆ ಖರ್ಚು ಅಧಿಕವಾಗಲಿದೆ. ಕಿರುಸಂಚಾರವಿರುತ್ತದೆ.

ವೃಶ್ಚಿಕ: ಗುರುವಿನ ಅನುಗ್ರಹದಿಂದ ಸುಖ, ಭಾಗ್ಯ ಗೋಚರಕ್ಕೆ ಬರುತ್ತದೆ. ಆಗಾಗ ಮಾನಸಿಕ ಗೊಂದಲಕ್ಕೆ ಒಳಗಾಗಿ ಅನೇಕ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳು ತೋರಿಬಂದಾವು. ಸಾಂಸಾರಿಕವಾಗಿ ಪತ್ನಿ, ಪುತ್ರರ ಸಹಕಾರ ಸಿಗಲಿದೆ.

ಧನು: ನೆಮ್ಮದಿ, ಸಮಾಧಾನವಿದ್ದರೂ ಕಷ್ಟ ತಪ್ಪದು. ನೌಕರ ವರ್ಗಕ್ಕೆ ನಿರೀಕ್ಷಿತ ಮುಂಭಡ್ತಿ ಸದ್ಯದಲ್ಲೇ ತರಲಿದೆ. ಮನಸ್ಸನ್ನು ಆದಷ್ಟು ಶಾಂತಗೊಳಿಸಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಅಚ್ಚರಿ ತರಲಿದೆ. ಶುಭವಿದೆ.

ಮಕರ: ಉದ್ಯೋಗಿಗಳಿಗೆ ವೃತ್ತಿ ನಿಮಿತ್ತ ದೂರ ಪ್ರಯಾಣದ ಸಾದ್ಯತೆ ಇರುತ್ತದೆ. ಧನಾಗಮನವು ತಕ್ಕಮಟ್ಟಿಗೆ ಇರುತ್ತದೆ. ನಿವೇಶನದ ಖರೀದಿಯಿಂದ ಸಂತಸವಾಗಲಿದೆ. ಹಂತಹಂತವಾಗಿ ಭಾಗ್ಯವೃದ್ಧಿ, ಯಶೋಭಿವೃದ್ಧಿ ಇದೆ.

ಕುಂಭ: ವಿದ್ಯಾರ್ಥಿಗಳಿಗೆ ಅನಿರೀಕ್ಷಿತವಾಗಿ ವಿದೇಶ ಯಾನದ ಸಂಭವವಿರುತ್ತದೆ ಜೀರ್ಣಾಂಗದ ಸಮಸ್ಯೆ ಕಾಡಲಿದೆ. ಕಬ್ಬಿಣ, ಕಟ್ಟಡ ಸಾಮಾಗ್ರಿಗಳ ವ್ಯಾಪಾರ, ವ್ಯವಹಾರದವರಿಗೆ ಲಾಭವಿದೆ. ಪತ್ನಿಯಿಂದ ಸಹಕಾರ ಸಿಗಲಿದೆ.

ಮೀನ: ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದ ಪ್ರಶ್ನೆಯಾಗಲಿದೆ. ನಿರಂತರ ಆರ್ಥಿಕ ಸಮಸ್ಯೆಗಳಿಂದ ಕ್ಲೇಶ ತಂದೀತು. ಆಗಾಗ ಮನೆಯಲ್ಲಿ, ಕಹಿಯಾದ ವಾತಾವರಣ ಸೃಷ್ಟಿಯಾದೀತು. ನಿಮ್ಮ ಪ್ರಯತ್ನ ಬಲದ ಅಗತ್ಯವಿದೆ.

 

ಎನ್‌.ಎಸ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next