Advertisement

ಈ ರಾಶಿಯವರಿಂದು ಯಾರೊಂದಿಗೂ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆಯ ಅಗತ್ಯವಿರುತ್ತದೆ

07:10 AM Jun 08, 2021 | Team Udayavani |

08-06-2021

Advertisement

ಮೇಷ: ನಿಮ್ಮ ಆಪ್ತರು ಬೇಜವಾಬ್ದಾರಿಯಿಂದ ವರ್ತಿಸಬಹುದು. ಅವರ ಹೊಣೆಗೇಡಿತನವು ನಿಮ್ಮನ್ನು ಕಾರ್ಯರಂಗದಲ್ಲಿ ಕಷ್ಟಕ್ಕೆ ಸಿಲುಕಿಸದಂತೆ ಎಚ್ಚರ ವಹಿಸಿರಿ. ಅನಿರೀಕ್ಷಿತವಾಗಿ ದೂರ ಸಂಚಾರ ಕಂಡುಬಂದೀತು.

ವೃಷಭ: ಕೆಲವೊಮ್ಮೆ ಯಾವ ವಿಷಯದಲ್ಲೂ ಸಮಾಧಾನವು ಸಿಗದು. ಎಲ್ಲಾ ರೀತಿಯಿಂದಲೂ ಮನಸ್ಸಿಗೆ ನೆಮ್ಮದಿ ಇರದು. ಕೌಟುಂಬಿಕವಾಗಿ ಹಿತಶತ್ರುಗಳಿಂದ ಕಿರುಕುಳ ಕಂಡುಬಂದೀತು. ಸಾಧಾರಣ ಆರೋಗ್ಯವಿರುತ್ತದೆ.

ಮಿಥುನ: ಕಾರ್ಯ ಒತ್ತಡವು ಹೆಚ್ಚಾಗಿ ಅಸಹನೆಯು ಕಾಡಲಿದೆ. ಸದ್ಯದಲ್ಲೇ ಮಾನಸಿಕವಾಗಿ ಕಾಡುತ್ತಿದ್ದ ಸಮಸ್ಯೆಗಳು ಪರಿಹಾರವಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಹಕಾರ ಸಿಗದು. ಬೇಸರಗೊಳ್ಳದಿರುವುದೇ ಲೇಸು.

ಕರ್ಕ: ಯಾರೊಂದಿಗೂ ವ್ಯವಹರಿಸುವಾಗ ಹೆಚ್ಚಿನ ಎಚ್ಚರಿಕೆಯ ಅಗತ್ಯವಿರುತ್ತದೆ. ತಪ್ಪಿದಲ್ಲಿ ಪ್ರತಿಕೂಲ ಪರಿಣಾಮ ಉಂಟಾದೀತು. ಆರ್ಥಿಕವಾಗಿ ಏರುಪೇರು ಕಂಡು ಬಂದೀತು. ಅಚ್ಚುಕಟ್ಟಾಗಿ ಖರ್ಚನ್ನು ನಿಭಾಯಿಸಿದರೆ ಉತ್ತಮ.

Advertisement

ಸಿಂಹ: ಯಾರೊಡನೆ ಅತೀ ಸ್ನೇಹ, ಅತೀ ಸಲುಗೆ ಸಲ್ಲದು. ನಿಮ್ಮ ಆತಂರಿಕ ವಿಚಾರವನ್ನು ಇತರರೊಂದಿಗೆ ಹಂಚಿಕೊಳ್ಳದಿರಿ. ಇತರರಿಗೆ ಆಡಿಕೊಳ್ಳಲು ಆಸ್ಪದ ನೀಡದಿರಿ. ಮನಸ್ಸಿಗೆ ನೆಮ್ಮದಿಯನ್ನು ಕಾಯ್ದುಕೊಳ್ಳಿರಿ.

ಕನ್ಯಾ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಉದಾಸೀನತೆ ಕಂಡುಬಂದು ಹಿಂಜರಿಕೆ ಆದೀತು. ಮಕ್ಕಳ ವಿಷಯದಲ್ಲಿ ಎಚ್ಚರಿಕೆ ಅಗತ್ಯವಿದೆ. ಪತ್ನಿಯೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸಿರಿ. ಸಾಂಸಾರಿಕವಾಗಿ ನೆಮ್ಮದಿ ಇದೆ.

ತುಲಾ: ನಿರಾಶಾ ಮನೋಭಾವವು ಕಾಡಲಿದೆ. ಆದರೂ ನಿಮ್ಮ ಅಭಿವೃದ್ಧಿಗೆ ಎಲ್ಲವೂ ಪೂರಕವಾಗಲಿದೆ. ಆಸಕ್ತಿದಾಯಕ ವ್ಯಕ್ತಿಗಳಿಂದ ಅನುಕೂಲಕರವಾದ ಕೆಲಸವಾಗಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ಉತ್ಸಾಹ ಕಂಡುಬಂದೀತು.

ವೃಶ್ಚಿಕ: ಯಾವ ಕೆಲಸವನ್ನು ಕೈಗೊಂಡು ಮಾಡ  ಬೇಕಾದರೆ ಯೋಜನೆಯನ್ನು ರೂಪಿಸಿಕೊಳ್ಳಿರಿ. ನಿಮ್ಮ ಮೇಲಿನ ಅಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ. ಸಾಂಸಾರಿಕವಾಗಿ ನೆಮ್ಮದಿಯ ದಿನಗಳಿವು. ಮಕ್ಕಳಿಂದ ಸಂತಸವಿದೆ.

ಧನು: ನಿಮಗೆ ಮಹತ್ವದ ದಿನಗಳು ಇವು. ನಿಮಗೆ ಆತ್ಮೀಯ ಹಾಗೂ ಪ್ರೀತಿಪಾತ್ರರಾದ ಜನರೊಂದಿಗೆ ಸಮಯ ಕಳೆಯುವ ಅವಕಾಶ ಒದಗಿ ಬಂದೀತು. ವೃತ್ತಿರಂಗದಲ್ಲಿ ನಾನಾ ತರಹದ ಸಮಸ್ಯೆಗಳು ಇದ್ದಾವು.

ಮಕರ: ಎಂತಹ ಸಮಸ್ಯೆಗಳು ಬಂದರೂ ಅವನ್ನು ಸಹನೆಯಿಂದ ಎದುರಿಸುವಿರಿ. ಅದರಲ್ಲಿ ನಿಮಗೆ ಗೆಲುವು ಕಂಡುಬರಲಿದೆ. ಖಾಸಗಿ ಬದುಕಿನಲ್ಲಿ ಸಣ್ಣಪುಟ್ಟ ನಿರಾಸೆಗಳು ನಿಮ್ಮನ್ನು ಕಾಡಲಿದೆ. ಚಿಂತೆ ಬೇಡ.

ಕುಂಭ: ನಿಮ್ಮ ಜೀವನ ಶೈಲಿಯನ್ನು ಮನೆಯಲ್ಲಿ ಎಲ್ಲರೂ ಒಪ್ಪುವ ಹಾಗೆ ಬದಲಾಯಿಸಿಕೊಳ್ಳಿರಿ. ನಿವೇಶನ ಯಾ ಜಾಗ ಖರೀದಿಯ ಬಗ್ಗೆ ಮಾತುಕತೆಗಳು ನಡೆದೀತು. ಕೆಲಸ ಕಾರ್ಯಗಳು ನಿಧಾನಗತಿ ಕಂಡಾವು.

ಮೀನ: ಕೌಟುಂಬಿಕವಾಗಿ ನೀವು ನಂಬಿದವರೇ ನಿಮಗೆ ಕೈಕೊಟ್ಟಾರು. ಹಣಕಾಸಿನ ಸ್ಥಿತಿಯು ಸುಧಾರಿಸುತ್ತಾ ಹೋದರೂ ಖರ್ಚುವೆಚ್ಚವು ಅಷ್ಟೇ ಕಂಡುಬರಲಿದೆ. ಯಾರಿಗೂ ನಂಬಿ ಸಾಲ ಕೊಟ್ಟು ಕೈ ಸುಟ್ಟುಕೊಳ್ಳದಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next