Advertisement

ಈ ರಾಶಿಯವರಿಂದು ಪತ್ನಿಯಿಂದ ಎಲ್ಲದಕ್ಕೂ ಸಲಹೆ ಪಡೆಯ ಬೇಕಾಗಬಹುದು

07:13 AM Jun 03, 2021 | Team Udayavani |

03-06-2021

Advertisement

ಮೇಷ: ಇಡೀ ದಿನ ಉಲ್ಲಾಸ ಹಾಗೂ ಬಹು ಚಟುವಟಿಕೆಯಿಂದ ಕೂಡಿದ ನಿಮ್ಮ ಜೀವನದಲ್ಲಿ ಕೆಲವು ಏರುಪೇರುಗಳು ಕಂಡುಬರಲಿದೆ. ಧೈರ್ಯದಿಂದ ಎದುರಿಸುವುದನ್ನು ಮುಂದುವರಿಸಿರಿ. ತಾಳ್ಮೆ ಬೇಕು.

ವೃಷಭ: ಸಾಂಸಾರಿಕವಾಗಿ ಸಂಬಂಧಗಳು ನೀವು ಬಯಸಿದಂತೆ ಗಟ್ಟಿಯಾಗಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಬಲವನ್ನು ಮುನ್ನಡೆಸಬೇಕು. ಯಾರೊಡನೆ ವ್ಯವಹರಿಸುವಾಗ ಜಾಗ್ರತೆ ಮಾಡಿದರೆ ಉತ್ತಮ.

ಮಿಥುನ: ನೀವು ದುಡುಕಿ ತಪ್ಪು ಹೆಜ್ಜೆ ಇಟ್ಟಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಆರ್ಥಿಕವಾಗಿ ಏರುಪೇರು ಉಂಟಾಗಬಹುದು ಅದನ್ನು ನಾಜೂಕಿನಿಂದ ಪರಿಹರಿಸಿಕೊಳ್ಳಿರಿ. ವೃತ್ತಿರಂಗದಲ್ಲಿ ಸಹನೆ ಇರಲಿ.

ಕರ್ಕ: ಪ್ರಮುಖ ವಿಷಯಗಳನ್ನು ವ್ಯಕ್ತಪಡಿಸುವಲ್ಲಿ ಹಿಂಜರಿಕೆ ಬೇಡ. ವಿದ್ಯಾರ್ಥಿಗಳಿಗೆ ನಡತೆ ತಪ್ಪದಂತೆ ಜಾಗ್ರತೆ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಕೌಟುಂಬಿಕವಾಗಿ ತುಸು ನೆಮ್ಮದಿ, ಸಹನೆಯ ದಿನಗಳಿವು.

Advertisement

ಸಿಂಹ: ಅವಿವಾಹಿತರಿಗೆ ಆಗಾಗ ಹಿನ್ನೆಡೆ ತೋರಿಬಂದು ನಿರಾಶಾ ಮನೋಭಾವದಿಂದ ಮನ ಮುದುಡಲಿದೆ. ಮಾನಸಿಕ ಚಿಂತನೆ ಇತರರಿಂದ ಶ್ಲಾಘನೆ ಪಡೆಯಲಿದೆ. ಒಮ್ಮೊಮ್ಮೆ ಎಲ್ಲವೂ ಸರಿಯಾಗಿಲ್ಲ ಎಂಬಂತೆನಿಸಲಿದೆ.

ಕನ್ಯಾ: ನಿಮ್ಮ ಮನಸ್ಸಿಗೆ ತೋಚಿದ್ದನ್ನು ಮಾಡಿಕೊಂಡು ಹೋದರೆ ಅನಾಹುತವಾದೀತು. ಪತ್ನಿಯಿಂದ ಎಲ್ಲಕ್ಕೂ ಸಲಹೆ ಪಡೆಯಿರಿ. ಕೋಪದ ಕೈಗೆ ಬುದ್ಧಿ ಕೊಡದಿರಿ. ಕಾರ್ಯ ಒತ್ತಡದಿಂದ ಅಸಹನೆ ಕಾಡಲಿದೆ.

ತುಲಾ: ಮಾನಸಿಕವಾಗಿ ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ದೊರಕಲಿದೆ. ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಸಹಕಾರ ಸಿಗದೆ ಬೇಸರ ತಂದೀತು. ಲಾಭಾದಿಕ್ಯ ಹೆಚ್ಚಾಗಿರುವುದರಿಂದ ಮನಸ್ಸಿನ ಕ್ಲೇಶಗಳೆಲ್ಲ ಮಾಯವಾದೀತು .

ವೃಶ್ಚಿಕ: ನಿಮ್ಮ ಅತೀ ಪ್ರೀತಿಪಾತ್ರರು ನಿಮ್ಮೊಂದಿಗೆ ಬೇಜಾವಾಬ್ದಾರಿಯಿಂದ ವರ್ತಿಸಲಿದ್ದಾರೆ. ಅವರ ಹೊಣೆಗೇಡಿತನವು ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸಲಿದೆ. ಎಚ್ಚರದಿಂದಿರಿ. ಅನಿರೀಕ್ಷಿತವಾಗಿ ಅತಿಥಿಗಳು ಬಂದು ಸಂತಸ.

ಧನು: ಸಾಮಾಜಿಕ ಚಟುವಟಿಕೆಗಳಲ್ಲಿ ಹಿನ್ನಡೆ ಕಂಡು ಬರಲಿದೆ. ಗೌರವ, ಪ್ರಶಸ್ತಿ, ಪ್ರಶಂಸೆ ಸಲ್ಲಬಹುದು ಎಂದು ನಿರೀಕ್ಷಿಸುವ ನಿಮಗೆ ನಿರಾಸೆಯಾಗಲಿದೆ. ಆದರೂ ಮುಂದಕ್ಕೆ ನಿಮಗೆ ಎಲ್ಲವೂ ಹುಡುಕಿಕೊಂಡು ಬಂದೀತು.

ಮಕರ: ಸಾಂಸಾರಿಕ ಜೀವನವು ಸಮಾಧಾನಕರವಾದರೂ ಹೊಂದಾಣಿಕೆಯ ಅಗತ್ಯ ಕಂಡು ಬರುವುದು. ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯದು. ಪತ್ನಿಯ ಕಿರಿಕಿರಿ ಬೇಸರ ತಂದೀತು. ಮಕ್ಕಳ ಆಟದಿಂದ ಸಂತಸ.

ಕುಂಭ: ಕಾರ್ಯರಂಗದಲ್ಲಿ ಆಪ್ತರ ಸಲಹೆಗಳು ಸ್ವೀಕರಿಸಿದ್ದಲ್ಲಿ ಒಳಿತು ಕಂಡುಬರುವುದು. ಕಠಿಣ ಪರಿಶ್ರಮ ಆತ್ಮವಿಶ್ವಾಸಕ್ಕೆ ಸರಿಯಾದ ರೀತಿಯಲ್ಲಿ ದುಡಿಮೆಗೆ ತಕ್ಕ ಪ್ರತಿಫ‌ಲವು ದೊರಕಲಿದೆ. ಮುನ್ನಡೆಯಿರಿ.

ಮೀನ: ಸಹೋದ್ಯೋಗಿಗಳೊಡನೆ ಗುಣಾತ್ಮಕ ವರ್ತನೆ ತೋರಿಸಿರಿ. ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಚಂಚಲತೆ, ಮಾನಸಿಕ ದೃಢತೆ ಕಡಿಮೆಯಾಗಲಿದೆ. ವಿಶ್ವಾಸ ಬಿಡದಿರಿ.

ಎನ್‌.ಎಸ್‌. ಭಟ್

Advertisement

Udayavani is now on Telegram. Click here to join our channel and stay updated with the latest news.

Next