Advertisement

ಕಳ್ಳಭಟ್ಟಿ ದುರಂತಕ್ಕೆ 38 ಬಲಿ

11:24 PM Feb 08, 2019 | |

ಲಕ್ನೋ: ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ನಡೆದ ಎರಡು ಪ್ರತ್ಯೇಕ ಕಳ್ಳಭಟ್ಟಿ ಸರಾಯಿ ಸೇವನೆ ಪ್ರಕರಣಗಳಲ್ಲಿ ಒಟ್ಟು 38 ಜನ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದ ಸಹರನ್‌ಪುರದಲ್ಲಿ 16 ಜನ ಮೃತರಾಗಿದ್ದರೆ, ಉತ್ತರಾಖಂಡದ ಹರಿದ್ವಾರ್‌ನಲ್ಲಿ 12 ಮಂದಿ ಸಾವಿಗೀಡಾಗಿದ್ದಾರೆ. ಎರಡೂ ಅಕ್ಕಪಕ್ಕದ ಜಿಲ್ಲೆಗಳಾಗಿರುವುದರಿಂದ ಕಳ್ಳಭಟ್ಟಿಯ ಮೂಲ ಸಾಮಗ್ರಿಗಳು ಒಂದೇ ಸ್ಥಳದಿಂದ ರವಾನೆಯಾಗಿರುವ ಗುಮಾನಿ ಎದ್ದಿದೆ. ಸಹರನ್‌ಪುರ ಪ್ರಕರಣದಲ್ಲಿ ಮೃತರ ಕುಟುಂಬಸ್ಥರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ತಲಾ 2 ಲಕ್ಷ ರೂ., ಚಿಕಿತ್ಸೆ ಪಡೆಯುತ್ತಿರುವವರಿಗೆ ತಲಾ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next