Advertisement

ಉದ್ಯಾನವನ ಪಾಲಕರಿಗೆ ಸನ್ಮಾನ

02:13 PM Jun 06, 2019 | Team Udayavani |

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾತ್‌ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಹಾಗೂ ಉದ್ಯಾನವನ ಪಾಲಕರಿಗೆ ಸನ್ಮಾನ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಾಧಿಕಾರಿ ಸತೀಶ ಚವಡಿ, ಮರ-ಗಿಡಗಳು ಇಂದು ನಮಗೆ ಮೂಲಾಧಾರವಾಗಿದ್ದು, ಎಲ್ಲರೂ ಸಸಿಗಳನ್ನು ನೆಡುವ ಕಾರ್ಯದಲ್ಲಿ ಸಕ್ರೀಯವಾಗಿ ಭಾಗವಹಿಸಿ ಗಿಡ-ಮರ ಬೆಳೆಸಬೇಕು ಎಂದರು. ಇದೇ ವೇಳೆ ಪಪಂ ಉದ್ಯಾನವನ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ ಬಸಪ್ಪ ಕಾಳೆ ಅವರನ್ನು ಸನ್ಮಾನಿಸಲಾಯಿತು. ಪಪಂ ಸದಸ್ಯರಾದ ಮಹಾಂತೇಶ ನೀಲಗುಂದ, ಕೆ.ಎಲ್. ಕರಿಗೌಡ್ರ, ಬಸವರಾಜ ಹಾರೋಗೇರಿ, ರಾಜು ದೇಶಪಾಂಡೆ, ಮಹದೇವಪ್ಪ ಗಡಾದ, ಷಣ್ಮುಖಪ್ಪ ಬಡ್ನಿ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next