Advertisement

ಅಪಘಾತ ರಹಿತ ಚಾಲನೆಗೆ ಗೌರವ

12:35 PM Feb 04, 2018 | Team Udayavani |

ಪುತ್ತೂರು: ಪ್ರಯಾಣಿಕರನ್ನು ನಮ್ಮವರೆಂಬ ಭಾವನೆಯಿಂದ ಸುರಕ್ಷಿತವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲು
ಪಿಸುವ ಮಹತ್ವದ ಕಾರ್ಯ ಮಾಡುವ, ಸೇವಾ ಬದ್ಧತೆ ಪ್ರದರ್ಶಿಸುವ ಸಿಬಂದಿಯನ್ನು ಗುರುತಿಸುವ ಪದ್ಧತಿಯನ್ನು ಬೆಳೆಸಿಕೊಂಡಿರುವ ಕೆಎಸ್‌ಆರ್‌ಟಿಸಿ ಕಾರ್ಯ ಶ್ಲಾಘನೀಯ ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

Advertisement

ಶನಿವಾರ ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದರು. ಸುರಕ್ಷಿತವಾಗಿ ಚಲಾಯಿಸಿ ಪ್ರಯಾಣಿಕರನ್ನು ಒಯ್ಯುವ ಅತ್ಯಂತ ದೊಡ್ಡ ಜವಾಬ್ದಾರಿ ಚಾಲಕನ ಮೇಲಿದೆ. ಕೆಎಸ್‌ಆರ್‌ಟಿಸಿ ಬಸ್ಸು ಚಾಲಕರು ಸುರಕ್ಷಿತ ಚಾಲನೆಗೆ ಮಾದರಿಯಾಗಿದ್ದಾರೆ. ಇದು ಇತರ ಚಾಲಕರಿಗೂ ಪ್ರೇರಣೆ ನೀಡುತ್ತದೆ ಎಂದರು.

ಪುತ್ತೂರು ವಿಭಾಗಕ್ಕೆ 189 ಬಸ್ಸುಗಳ ಆವಶ್ಯಕತೆ ಇತ್ತು. ಈಗ 181 ಬಸ್ಸುಗಳು ಬಂದಿವೆ. ಉಳಿದ 8 ಬಸ್ಸುಗಳು ಶೀಘ್ರ
ಬರುವ ನಿರೀಕ್ಷೆ ಇದೆ. ಸಾರಿಗೆ ನಿಗಮದ ಎಂಡಿ ಉದಯಶಂಕರ್‌ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಪುತ್ತೂರು ಕೆಎಸ್‌ ಆರ್‌ಟಿಸಿ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಇದು ರಾಜ್ಯದಲ್ಲಿಯೇ ಮಾದರಿ ಹಾಗೂ ಅಭಿವೃದ್ಧಿಯ ವಿಭಾಗವಾಗಬೇಕು. ಅಧಿಕಾರಿಗಳು ನಿಮ್ಮನ್ನು ಪ್ರೀತಿಯಿಂದ ಕಂಡರೆ ಅದೇ ನಿಮಗೆ ಸಿಗುವ ನಿಜವಾದ ಚಿನ್ನದ ಪದಕವಾಗುತ್ತದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ವಿಭಾಗೀಯ ಯಾಂತ್ರಿಕ ಅಭಿಯಂತರ ವೇಣುಗೋಪಾಲ್‌ ಉಪಸ್ಥಿತರಿದ್ದರು. ವಿಭಾಗೀಯ ಸಂಚಲನಾ
ಧಿಕಾರಿ ಮುರಳೀಧರ ಆಚಾರ್ಯ ಸ್ವಾಗತಿಸಿ, ಸಿಬಂದಿ ಜೈಕರ್‌ ಶೆಟ್ಟಿ ವಂದಿಸಿದರು. ರಮೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ಬೆಳ್ಳಿ ಪದಕ ಪಡೆದವರು
ಮಡಿಕೇರಿ ಘಟಕದ ಚಾಲಕರಾದ ಎ.ರ್‌. ಸುರೇಶ್‌, ಸತೀಶ್‌, ಕೆ.ಟಿ. ಮಹಮ್ಮದ್‌, ಪುತ್ತೂರು ಘಟಕದ ಚಾಲಕರಾದ ಚಂದ್ರಶೇಖರ್‌, ಆನಂದ ಗೌಡ ಕೆ, ಬಿ.ಸಿ.ರೋಡ್‌ ಘಟಕದ ಯತೀಶ್‌ ಪೂಜಾರಿ, ಬಸಪ್ಪ ಈರಪ್ಪ, ಮೌಲಾ ಸಾಬ್‌, ಧರ್ಮಸ್ಥಳ ಘಟಕದ ಎಸ್‌.ಪಿ. ರತ್ನಾಕರ, ಎಸ್‌.ಎಸ್‌. ಹರೀಶ್‌, ಸುದರ್ಶನ್‌, ವೆಂಕಪ್ಪ ಗೌಡ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

Advertisement

ಕೆಎಂಪಿಎಲ್‌ನಲ್ಲಿ ಸಾಧನೆ ಮಾಡಿದ ಚಾಲಕರಾದ ಪುತ್ತೂರು ಘಟಕದ ಉಮಾನಾಥ ಭಟ್‌, ರಾಜು ಎಚ್‌.ಪಿ., ಬಿ.ಸಿ. ರೋಡ್‌ ಘಟಕದ ರಂಗಪ್ಪ ಪೂಜಾರಿ, ಮಡಿಕೇರಿ ಘಟಕದ ತಿಮ್ಮಪ್ಪ ಎಂ.ಎನ್‌., ಸುಳ್ಯ ಘಟಕದ ಜಗನ್ನಾಥ ವಿ.ಟಿ. ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮೂರು ವರ್ಷಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಿರ್ವಾಹಕರಾದ ಧರ್ಮಸ್ಥಳ ಘಟಕದ ಗಿರಿಯಪ್ಪ ಪೂಜಾರಿ, ಪುತ್ತೂರು ಘಟಕದ ಗೋಪಾಲ ನಾಯ್ಕ ಹಾಗೂ ಬಿ.ಸಿ. ರೋಡ್‌ ಘಟಕದ ಮಧು ಬಿ.ಆರ್‌. ಅವರಿಗೆ ‘ಅತ್ಯುತ್ತಮ ನಿರ್ವಾಹಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜನವರಿಯಲ್ಲಿ ನಿವೃತ್ತರಾದ ಪುತ್ತೂರು ಘಟಕದ ಚಾಲಕರಾದ ಕೇಶವ ಗೌಡ ಹಾಗೂ ನಾರಾಯಣ ಗೌಡರನ್ನು ಸಮ್ಮಾನಿಸಲಾಯಿತು. ಅಪರಾಧ ಹಾಗೂ ಅಪಘಾತ ರಹಿತ ಚಾಲನೆಗೆ ಮುಖ್ಯಮಂತ್ರಿಗಳು ನೀಡುವ ಚಿನ್ನದ ಪದಕಕ್ಕೆ ಆಯ್ಕೆಯಾದ ಚಾಲಕರಾದ ಪುತ್ತೂರು ಘಟಕದ ಜಯರಾಮ ಪುರುಷ, ಉಮಾನಾಥ ಭಟ್‌, ಪೆರ್ಗಡೆ ಗೌಡ, ಗೋಪಾಲ ಗೌಡ, ಪ್ರಪುಲ್ಲಚಂದ್ರ ರೈ ಹಾಗೂ ಬಿ.ಸಿ. ರೋಡ್‌ ಘಟಕದ ಆನಂದ ಕೆ., ಚಿನ್ನದ ಪದಕ ಪಡೆದು ನಿವೃತ್ತರಾದ ಫ್ರಾನ್ಸಿಸ್‌ ಡಿ’ಕುನ್ಹಾ, ಶ್ರೀಧರ ಕೆ. ಹಾಗೂ ಆನಂದ ಅವರನ್ನು ಗೌರವಿಸಲಾಯಿತು.

ಅನನ್ಯ ಕೊಡುಗೆ
ಅಧ್ಯಕ್ಷತೆ ವಹಿಸಿದ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿ ನಾಗರಾಜ್‌ ಶಿರಾಲಿ ಮಾತನಾಡಿ, ಪುತ್ತೂರು ಕೆಎಸ್‌ಆರ್‌ಟಿಸಿಯ ಬೆಳವಣಿಗೆಯಲ್ಲಿ ಸಹೋದ್ಯೋಗಿಗಳ ಕೊಡುಗೆ ಅನನ್ಯ. ಶಾಸಕರೂ ಕೆಎಸ್‌ಆರ್‌ಟಿಸಿ ಬೆಳವಣಿಗೆಯನ್ನು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು 12 ಚಾಲಕರು ತಮ್ಮ ನಿಸ್ವಾರ್ಥ ಸೇವೆಯಿಂದ ಅಭಿನಂದನೆಗೆ ಅರ್ಹರಾಗಿದ್ದಾರೆ. ಸಂಸ್ಥೆಯ ಕೆಲಸವೆಂದರೆ ಸಾರ್ವಜನಿಕರ ಕೆಲಸ ಎಂದು ಭಾವಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next