Advertisement

Tata Steel ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿ; ಹೊನ್ನಾವರದ ಸಮರ್ಥ ಚಾಂಪಿಯನ್

10:23 AM Jun 29, 2024 | Team Udayavani |

ಹೊನ್ನಾವರ: ಟಾಟಾ ಸ್ಟೀಲ್ 4ನೇ ಅಖಿಲ ಭಾರತ ವಿಶೇಷ ಚೇತನರ ಚೆಸ್ ಟೂರ್ನಿಯಲ್ಲಿ ಹೊನ್ನಾವರದ ಸಮರ್ಥ ಜಗದೀಶ್ ರಾವ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.

Advertisement

ಜೂ. 24 ರಿಂದ 28ರ ವರೆಗೆ ನಡೆದ 9 ಸುತ್ತಿನ ಪಂದ್ಯದಲ್ಲಿ 7.5 ಅಂಕ ಗಳಿಸಿದ ಹೊನ್ನಾವರದ ಸಮರ್ಥ ಜಗದೀಶ್ ರಾವ್ ಚಾಂಪಿಯನ್ ಆಗಿದ್ದಾರೆ. ಈ  ಸ್ಪರ್ಧೆಯಲ್ಲಿ ದೇಶದ 14 ರಾಜ್ಯಗಳಿಂದ 68 ಆಟಗಾರರು ಪಾಲ್ಗೊಂಡಿದ್ದರು.

ಇವರು ಕೆನರಾ ಬ್ಯಾಂಕ್ ನಿವೃತ್ತ ಉದ್ಯೋಗಿ ಜಗದೀಶ್ ರಾವ್ ಮತ್ತು ಹೊನ್ನಾವರ ಸರಕಾರಿ ಐಟಿಐ ತರಬೇತಿ ಅಧಿಕಾರಿ ವಿನುತಾ ಭಟ್ ದಂಪತಿಯ ಪುತ್ರ.

2024ರ ಜುಲೈ 19 ರಿಂದ 28 ರ ವರೆಗೆ ಅರ್ಮೇನಿಯದಲ್ಲಿ ನಡೆಯುವ 23ನೇ ಐ.ಪಿ.ಸಿ.ಎ. ವಿಶ್ವ ಮಟ್ಟದ ಚೆಸ್ ಟೂರ್ನಿಯಲ್ಲಿ ಭಾರತದ ಪರವಾಗಿ ಸಮರ್ಥ ಜಗದೀಶ್ ರಾವ್ ಭಾಗವಹಿಸುವ ತಯಾರಿಯಲ್ಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next